Saturday, October 10, 2020

03 ಈ ಗ್ರಂಥ ರಚನೆಗೆ ನೀಡಿದ ಒಪ್ಪಿಗೆ/Sai Baba's sanction and promise

 ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

 

"ಈ ಗ್ರಂಥ ರಚನೆಗೆ ನೀಡಿದ ಒಪ್ಪಿಗೆ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.


ಈಗ ನಾನು ಪೂರ್ವಕತೆಯನ್ನು ತೆಗೆದುಕೊಳ್ಳುತ್ತೇನೆ. ಸಾಯಿಯು ನನಗೆ ಸಂಪೂರ್ಣ ಆತ್ವಾಸನೆ ನೀಡಿ ಹೇಳುತ್ತಾರೆ – "ನನ್ನ ಚರಿತ್ರೆಯನ್ನು ವರ್ಣಿಸಲು ಸಂಪೂರ್ಣ ಅನುಮತಿಯನ್ನು ನೀಡುತ್ತೇನೆ. ॥1॥

"ನೀನು ನಿನ್ನ ಕಾರ್ಯವನ್ನು ಮಾಡು, ಮನಸ್ಸಿನಲ್ಲಿ ಸ್ಪಲ್ಪವೂ ಸಂಶಯವನ್ನು ಇಟ್ಟುಕೊಳ್ಳಬೇಡ. ನನ್ನ ಮಾತಿನಲ್ಲಿ ಪೂರ್ಣ ವಿಶ್ವಾಸವನ್ನಿಡು. ಮನಸ್ಸಿನಲ್ಲಿ ದೃಢತೆ ಇರಲಿ. ॥2॥

"ನೀನು ನನ್ನ ಲೀಲೆಗಳನ್ನು ಬರೆದಲ್ಲಿ, ಅದು ಆ ಅಜ್ಞಾನದಿಂದ ಮಾಡಿದ ಅಪರಾಧಗಳನ್ನು ನಾಶಮಾಡುತ್ತದೆ. ನೀನು ಇವುಗಳನ್ನು ಶ್ರದ್ಧೆಯಿಂದ ಆಲಿಸಿದಾಗ ನಿನ್ನ ಸಂಸಾರ ಬಂಧನಗಳೆಲ್ಲವೂ ಕಳಚಿ ಹೋಗುತ್ತವೆ. ॥3॥

"ಅವು ಮನಸ್ಸೆಂಬ ಸಾಗರದಲ್ಲಿ ಭಕ್ತಿಪ್ರೇಮಾಮೃತವೆಂಬ ಅಲೆಗಳನ್ನು ಉಂಟುಮಾಡುತ್ತವೆ. ಮತ್ತು ಅವುಗಳಲ್ಲಿ ಮುಳುಗಿದಾಗ 

ಆಗಾಗ್ಗೆ ಜ್ಞಾನ ರತ್ನಗಳನ್ನು ಮೇಲೆ ತರಬಹುದು." ॥4॥

ಈ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಎಲ್ಲಾ ಸಂದೆಹಗಳೂ ನಿವಾರಣೆಯಾದವು. ನಂತರ ಸಾಯಿಯ ಚರಣಗಳಿಗೆ ನಮಿಸಿದೆನು ಮತ್ತು ಅನ೦ತರ ನನ್ನ ನೆನಪಿನಲ್ಲಿದ್ದಂತೆ ನಾನು ಸಾಯಿ ಸಚ್ಚರಿತೆಯನ್ನು ಬರೆಯಲು ಪ್ರಾರಂಭಿಸಿದೆನು. ॥5॥

ಬಾಬಾರವರ ಮುಖದಿಂದ ಆಶೀರ್ವಾದದ ಮಾತು ಹೊರಹೊಮ್ಮುತ್ತಲೇ, ನಾನು ಅದನ್ನು ಒಂದು ಶುಭ ಶಕುನವೆಂದು ಅರಿತೆ. ಗ್ರಂಥವು ತಾನಾಗಿಯೇ ಪೂರ್ಣಗೊಳ್ಳುತ್ತದೆ. ನಾನು ಕೇವಲ ಭೌತಿಕವಾಗಿ ಬರೆಯುವ ಸಾಧನವಷ್ಟೇ. ॥6॥

ನೋಡಿ! ಹರಿಯ ಲೀಲೆಯು ಎಷ್ಟು ಅಗಮ್ಯ! ವರ್ಣನಾತೀತ! ಅವು ಅನುಭವಕ್ಕೆ ಮೀರಿದವು. ಕೇವಲ ಅವನಿಗೆ ಮಾತ್ರ ತಿಳಿದಿದೆ. ಶೃತಿ, ಶಾಸ್ತ್ರ ವೇದಗಳೂ ಮೌನವಾಗಿವೆ ಮತ್ತು ಯಾರೂ ಅದರ ಆಳವನ್ನು ಅರಿಯಲು ಸಾಧ್ಯವಿಲ್ಲ. ॥7॥

ವೇದ-ಶಾಸ್ತ್ರ ವಿಶಾರದರು, ಮೇಧಾವಿಗಳು, ವಿದ್ವಾಂಸರು, ಓದಿದವರು, ತರ್ಕವೇತ್ತರು ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ॥8॥

ಭಗವಂತನು ತನ್ನ ನಿಜ ಭಕ್ತರ ಸ್ಪಸ್ವರೂಪವೇ. ಅವನು ಮುಗ್ಧ ನಿಷ್ಕಲ್ಮಶ ಭಕ್ತರಿಗಾಗಿ ಕಾತರಿಸುತ್ತಾನೆ. ಅವನನ್ನು ಪ್ರೀತಿಸುವವರಿಗೆ ಪೂರ್ಣವಾಗಿ ಆಭಾರಿಯಾಗಿರುತ್ತಾನೆ. ಆದರೆ ಆಷಾಢಭೂತಿಗಳನ್ನು ದೂರಮಾಡುತ್ತಾನೆ. ॥9॥

"ಅದರಲ್ಲಿ ಕೇವಲ ನಿನ್ನ ಕಲ್ಯಾಣ ಅಡಗಿದೆ. ಇದು ನನ್ನ ಅವತಾರದ ಸಾರ್ಥಕತೆಯೂ ಸಹ. ಇದು ನನ್ನ ನಿತ್ಯ ಬೋಧನೆ. ನನಗೆ ಯಾವಾಲೂ ಇದರ ಬಗ್ಗೆ ಕಾಳಜಿ ಇದೆ. ॥10॥

"ಓ ಶ್ಯಾಮ, ನಾನು ಹೇಳುತ್ತೇನೆ. ಇನ್ನು ಮುಂದೆ ನನ್ನ ನಾಮವನ್ನು ಯಾರು ಪ್ರೀತಿಯಿಂದ ಸ್ಮರಿಸುತ್ತಾರೋ ಅವರ ಆಸೆಗಳನ್ನು ಪೂರೈಸುತ್ತೇನೆ ಮತ್ತು ಅವರ ಭಕ್ತಿಭಾವವನ್ನು ಹೆಚ್ಚಿಸುತ್ತೇನೆ. ॥11॥

"ಯಾರು ನನ್ನ ಚರಿತ್ರೆಯನ್ನು ಅನುಭವದಿಂದ ಹಾಡುತ್ತಾರೋ ಅವರು ನನ್ನ ಶಕ್ತಿ, ಸದ್ಗುಣ ಮತ್ತು ಪಾಂಡಿತ್ಯಗಳನ್ನು ಪಡೆಯುತ್ತಾರೆ. ನಾನು ಅವರನ್ನು ಪೂರ್ಣವಾಗಿ ಆವರಿಸಿ ರಕ್ಷಿಸುತ್ತೇನೆ. ॥12॥

"ಯಾವ ಭಕ್ತರು ಹೃದಯಪೂರ್ವಕವಾಗಿ ಆತ್ಮಪೂರ್ವಕವಾಗಿ ನನ್ನಲ್ಲಿ ಒಂದಾಗುತ್ತಾರೋ ಅವರು ನನ್ನ ಜೀವನ ಚರಿತ್ರೆಯನ್ನು ಕೇಳುತ್ತ ಆನಂದವಾಗಿರುವರು. ॥13॥

"ನನ್ನ ಗುಣಗಾನ ಮಾಡುವವರಿಗೆ, ಸಂಪೂರ್ಣ ಆನಂದ, ಶಾಶ್ಚತ ಸುಖ ಮತ್ತು ಸಂತೃಪ್ತಿಯನ್ನು ದಯಪಾಲಿಸುತ್ತೇನೆ. ಇದು ಸತ್ಯವೆಂದು ನಂಬು. ॥14॥

"ಯಾರು ನನ್ನಲ್ಲಿ ಅನನ್ಯ ಶರಣಾಗತರಾಗಿರುವರೋ, ಶ್ರದ್ಧೆಯಿ೦ದ ನನ್ನ ಗುಣಗಾನಮಾಡುವರೋ, ನನ್ನ ಸ್ಮರಣೆ, ಚಿಂತನೆಗಳನ್ನು ಮಾಡುವರೋ, ಅವರನ್ನು ಉದ್ಧರಿಸುತ್ತೇನೆ. ಆದು ನನ್ನ ಆಶ್ಚಾಸನೆ. ॥15॥

"ನನ್ನ ನಾಮ ಸ್ಮರಣೆ ಮಾಡುವವನು, ಭಕ್ತಿಯಿಂದ ಪೂಜಿಸುವವನು, ಅಧ್ಯಯನ ಮಾಡುವವನು, ನನ್ನ ಚರಿತ್ರೆಯನ್ನು ಪಾರಾಯಣ ಮಾಡುವವನು, ನನ್ನನ್ನು ಧ್ಯಾನಿಸುವವನು, ಸದಾ ಸ್ಮರಿಸುವವನು ಹೇಗೆ ತಾನೆ ಲೌಕಿಕ ವಿಷಯ ವಸ್ತುಗಳನ್ನು ಬಯಸುತ್ತಾನೆ? ॥16॥

ನನ್ನ ನಿಜಭಕ್ತರನ್ನು ಸಾವಿನ ದವಡೆಗಳಿಂದ ಪಾರುಮಾಡುತ್ತೇನೆ. ನನ್ನ ಚರಿತ್ರೆಯನ್ನು ಕೇಳಿದಮಾತ್ರದಿಂದಲೇ ರೋಗಗಳು ವಾಸಿಯಾಗುತ್ತವೆ. ॥17॥

ಆದರಪೂರ್ವಕವಾಗಿ ನನ್ನ ಚರಿತ್ರೆಯನ್ನು ಕೇಳುವವನು, ಪೂರ್ಣವಾಗಿ ಧ್ಯಾನಿಸುವವನು, ಮನಸ್ಸಿನಲ್ಲಿ ನಿದಿಧ್ಯಾಸನ ಮಾಡುವವನು ನಿಶ್ಚಯವಾಗಿ ಶಾಂತಿಯನ್ನು ಪಡೆಯುತ್ತಾನೆ. ॥18॥

"'ನಾನು ಮತ್ತು ನೀನು' ಎಂಬುದು ಮಾಯವಾಗುತ್ತದೆ. ಶ್ರೋತೃಗಳ ಮನಸ್ಸು ಭಗವಂತನಲ್ಲಿ ಲೀನವಾಗುತ್ತದೆ. ಚಿತ್ತವು ಚೈತನ್ಯದ ಗಣಿಯಾಗುತ್ತದೆ ಮತ್ತು ಮನಸ್ಸು ಅನನ್ಯ ಪರಿಷೂರ್ಣತೆ ಮತ್ತು ಶ್ರದ್ಧೆಯಿಂದ ತುಂಬುತ್ತದೆ. ॥19॥

"'ಸಾಯಿ, ಸಾಯಿ' ಎಂಬ ನಾಮಸ್ಮರಣೆಯು ಸಕಲ ಕಲಿದೋಷವನ್ನು ನಾಶಮಾಡುತ್ತದೆ. ಒಮ್ಮೆ ನಮಸ್ಕರಿಸಿದರೆ ಸಾಕು ಹಿಂದಿನ ವಾಕ್‌ ಮತ್ತು ಶ್ರವಣದ ಪಾಪಗಳನ್ನು ನಾಶಮಾಡುತ್ತದೆ". ॥20॥

ಈ ಕಾರ್ಯವು ಸಾಮಾನ್ಯವಾದುದಲ್ಲವಾದರೂ ನಾನು ಶಿರಸಾವಹಿಸಿ ಆಜ್ಞೆಯನ್ನು ಪರಿಪಾಲಿಸಿರುವೆ. ವಾಕ್ಕೋವಿದರಾದ ಬಾಬಾರವರು ಇರುವಾಗ ನಾನು ದೀನನೆಂದೇಕೆ ಭಾವಿಸಬೇಕು. ॥21॥

ಕೆಲವು ಭಕ್ತರನ್ನು ಮಂದಿರಗಳನ್ನು ನಿರ್ಮಿಸಲು, ಕೆಲವರನ್ನು ಸಂಕೀರ್ತನೆಯಲ್ಲಿ ಮೈಮರೆಯುವಂತೆ ಮಾಡಿದರು. ಕೆಲವರನ್ನು ತೀರ್ಥಯಾತ್ರೆ ಮಾಡಲು ಕಳಿಸಿದರು ಮತ್ತು ನನ್ನನ್ನು ಕುಳಿತುಕೊಂಡು ಬರೆಯುವಂತೆ ಮಾಡಿದರು. ॥22॥

ಭಕ್ತರಲ್ಲೆಲ್ಲ ನಾನು ಪಾಮರ. ಕರುಣಾಸಾಗರ ಮತ್ತು ದಯಾಘನನಾದ ಸಾಯಿಯು ನನ್ನ ಯಾವ ಗುಣವನ್ನು ಕಂಡು ನನ್ನ ಮೇಲೆ ತಮ್ಮ ಕರುಣೆಯನ್ನು ಹರಿಸಿದರೋ ನನಗೆ ತಿಳಿಯದು. ॥23॥

ಗುರುವಿನ ಕೃಪೆ ಎಷ್ಟು ಅಭೂತಪೂರ್ವವಾಗಿದೆ. ಒಣಗಿರುವ ಗಿಡವು ಯಾವುದೇ ಪ್ರಯತ್ನವಿಲ್ಲದೆಯೇ ಚಿಗುರುತ್ತದೆ. ಎಂತಹ ಒಣಗಿದ ಮಣ್ಣೂ ಫಲಭರಿತವಾಗುತ್ತದೆ. ॥24॥

ಭವಿಷ್ಯದಲ್ಲಿ ಕೆಲವರು ಆಶ್ರಮಗಳನ್ನು, ಕೆಲವರು ಮಂದಿರಗಳನ್ನು, ಕೆಲವರು ಸ್ನಾನಘಟ್ಟಗಳನ್ನು ಕಟ್ಟಬಹುದು. ಆದರೆ ನಾನು ಮಾತ್ರ ಸಾಯಿಯ ಗುಣಗಾನ ಮಾಡುವ ನೇರವಾದ ಮಾರ್ಗವನ್ನು ಹಿಡಿಯುವೆ. ॥25॥

ಕೆಲವರು ಭಕ್ತಿಯಿಂದ ಸಾಯಿಯ ಉಪಾಸನೆ ಮಾಡಬಹುದು. ಕೆಲವರು ಪಾದವೊತ್ತಿ ಸೇವೆ ಮಾಡಬಹುದು. ಆದರೆ ನನ್ನ ಮನಸ್ಸು ಸಾಯಿಯ ಗುಣಗಾನ ಮಾಡಲು ಉತ್ಕಂಠಿತವಾಗಿದೆ. ॥26॥

ಕೃತಯುಗದಲ್ಲಿ ಧ್ಯಾನದಿಂದ ಪ್ರಾಪ್ತವಾಗುವ, ತ್ರೇತಾಯುಗದಲ್ಲಿ ಯಜ್ಞಕಾರ್ಯಗಳಿಂದ, ದ್ಧಾಪರಯುಗದಲ್ಲಿ ಅರ್ಚನೆಯಿಂದ ಲಭಿಸಿವುದನ್ನು ಈಗ ಕಲಿಯುಗದಲ್ಲಿ ನಾಮಸಂಕೀರ್ತನೆಯಿಂದ ಗುರುಭಜನೆಯಿಂದ ಪಡೆಯಬಹುದು. ॥27॥

ನಾನಾದರೊ ಅರ್ಹನಲ್ಲ, ಯಾವುದೇ ಕೆಲಸಕ್ಕೆ ಬಾರದವನು ಹಾಗೂ ಏನನ್ನೂ ತಿಳಿಯದವನು, ಹಾಗಿರಲು ಇಂತಹ ಕಷ್ಟ ಸಾಧ್ಯವಾದ ಕೆಲಸವನ್ನು ನಾನು ನಿರ್ವಹಿಸಲು ಹೇಗೆ ಸಾಧ್ಯ? ॥28॥

ನಾನು ಏನೂ ಪ್ರಯತ್ನಪಡದೆಯೇ ನಿಷ್ಕ್ರಿಯನಾಗಿ ಕುಳಿತಲ್ಲಿ ಅದು ಅವಿಧೇಯತೆಯ ಪಾಪಕರ್ಮವಾಗುತ್ತದೆ. ಮತ್ತು ಆಜ್ಞಾಪಾಲನೆ ಮಾಡಿದಲ್ಲಿ ಈ ಕಾರ್ಯವನ್ನು ನಿರ್ವಹಿಸಲು ಸಾಧ್ಯವೇ? ॥29॥

ಸಾಯಿ ಸಮರ್ಥರ ಸಹಜ ಸ್ಥಿತಿಯನ್ನು ವರ್ಣಿಸಲು ಯಾರಿಗೆ ಸಾಧ್ಯ? ಕೇವಲ ಸಾಯಿಮಾತ್ರ ಕೃಪೆತೋರಿ ಭಕ್ತನ ಮೂಲಕ ಮಾಡಿಸಲು ಸಾಧ್ಯ. ॥30॥

ಮಾತು ಸಮರ್ಥವಾಗಿ ತನ್ನ ಕೆಲಸ ಮಾಡಲಾರದು ಎಂದಾಗ ನಾನೇಕೆ ಹಂಬಲ ಬೆಳೆಸಿಕೊಂಡೆ? ಈ ವಿಚಾರವಾಗಿ ಮಾತನಾಡಲು ಸಾಯಿಯು ಯಾವುದೇ ಅವಕಾಶವನ್ನಾಗಲೀ ಸಂದರ್ಭವನ್ನಾಗಲೀ ಕೊಡಲಿಲ್ಲ. ॥31॥

ನಾನು ಲೇಖನಿಯನ್ನು ಹಿಡಿದಾಗ ಬಾಬಾರವರು ನಾನು ನನ್ನ ಭಾವವನ್ನೇ ಕಳೆದುಕೊಳ್ಳುವಂತೆ ಮಾಡಿದರು. ತಮ್ಮ ಕತೆಯನ್ನು ತಾವೇ ಬರೆಯಲು ಪ್ರಾರಂಭಿಸಿದರು. ಆದ್ದರಿಂದ ಎಲ್ಲಾ ಹೆಗ್ಗಳಿಕೆಯೂ ಅವರದೇ. ॥32॥

ಒಬ್ಬ ಸಂತನ ಚರಿತ್ರೆಯನ್ನು ಸಂತನೇ ಬರೆಯಬಲ್ಲನು. ಸಾಯಿಯ ತರ್ಕರಹಿತ ಗುಣಗಳನ್ನು ಅರ್ಥಮಾಡಿಕೊಳ್ಳುವುದು ಆಕಾಶವನ್ನು ಆಲಿಂಗನ ಮಾಡಿದಂತೆ. ॥33॥

ಸಾಯಿಯ ಅತಿ ಗಹನವಾದ ಮಹಿಮೆಗಳನ್ನು ವಿವರಿಸಲು ನಾನು ಬುದ್ಧಿಹೀನ. ತಾವೇ ಸ್ವತಃ ಇದನ್ನು ಮಾಡಬಹುದಿತ್ತು ಮತ್ತು ಕೊಟ್ಟ ವಚನದಿಂದ ಮುಕ್ತರಾಗಬಹುದಿತ್ತು. ॥34॥

ಆದರೆ, ಬಾಬಾ! ನಾನು ಬ್ರಾಹ್ಮಣನಾಗಿ ಜನಿಸಿದ್ದರೂ, ನನಗೆ ಶೃತಿ ಮತ್ತು ಸ್ಮೃತಿಗಳ ಜ್ಞಾನವಿಲ್ಲದಿದ್ದರೂ, ಅದು ನನ್ನ ಹುಟ್ಟಿಗೆ ಬಂದ ಕಷ್ಪು ಚುಕ್ಕೆಯಾಗಿದ್ದರೂ ನಾನು ನಿಮ್ಮ ಸಹವಾಸದಲ್ಲಿ ಇರುವುದೇ ಒಂದು ಭೂಷಣವಾಗಿದೆ. ॥35॥

ಶೃತಿ ಮತ್ತು ಸ್ಮೃತಿಗಳು ಬ್ರಾಹ್ಮಣನ ಎರಡು ಕಣ್ಣುಗಳು. ಒಂದರ ಜ್ಞಾನವಿಲ್ಲದಿದ್ದರೂ ಅವನು ಮಾಲೆಗಣ್ಣಿನವನು, ಎರಡೂ ಇಲ್ಲದವನು ಪೂರ್ಣ ಕುರುಡ. ನಾನಾದರೂ ಅತೀ ಕೆಳಮಟ್ಟದವನೂ, ನಮ್ರನೂ, ದೀನನೂ ಆಗಿರುವೆ. ಏಕೆಂದರೆ ನನಗೆ ಎರಡರಲ್ಲೂ ಕೊರತೆಯಿದೆ. ॥36॥

ಅಂಧರಿಗೆ ಊರುಗೋಲು ಹೇಗೋ ಹಾಗೆ ನೀನು ನನಗೆ ಆಸರೆ. ಹಾಗಿರುವಾಗ ನಾನೇಕೆ ಚಿಂತಿಸಲಿ? ನಿನ್ನ ಆಧಾರದಿಂದ ನಾನು ಈ ಕಷ್ಟವಾದ ಮಾರ್ಗದಲ್ಲಿ ನಿನ್ನನ್ನು ಹಿಂಬಾಲಿಸುತ್ತೇನೆ. ॥37॥

ಹೇಗೆ ಮುಂದುವರೆಯಬೇಕೆಂದು ನನಗೆ ತಿಳಿಯದು, ದೀನನಾದ ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನೀವೇ ನನಗೆ ಬುದ್ಧಿಶಕ್ತಿಯನ್ನು ನೀಡಿ ನಿಮ್ಮ ಕೆಲಸವನ್ನು ನೀವೇ ಮಾಡಿಸಿಕೊಳ್ಳಿರಿ. ॥38॥

ಮೂಕನನ್ನು 'ಬೃಹಸ್ಪತಿ'ಯಂತೆ ವಾಚಾಳನನ್ನಾಗಿ ಮಾಡುವ, ಹೆಳವನಿಗೆ ಮೇರುಪರ್ವತವನ್ನು ದಾಟುವ ಶಕ್ತಿನೀಡುವ, ಮತಿಗೆ ಮೀರಿದ ದೈವೀ ಶಕ್ತಿಯ ನಿಗೂಢತೆಯನ್ನು ಬಾಬಾ ಮಾತ್ರ ಅರಿಯಬಲ್ಲರು. ॥39॥

ನಾನು ಕೇವಲ ನಿಮ್ಮ ನಮ್ರನಾದ ದಾಸ. ನನ್ನನ್ನು ಪರಾವಲಂಬಿಯಾಗಿ ಮಾಡಬೇಡಿ. ನನ್ನ ಈ ದೇಹದಲ್ಲಿ ಉಸಿರು ಇರುವವರೆಗೆ ನನ್ನಿಂದ ನಿಮ್ಮ ಕೆಲಸವನ್ನು ನನ್ನ ಕೈಯಲ್ಲಿ ಮಾಡಿಸಿರಿ. ॥40॥

ಈಗ, ಓ ಶೋತ್ಕಗಳೇ! ನಿಮಗೆ ಈ ಗ್ರಂಥದ ಉದ್ದೇಶ ತಿಳಿದಿದೆ. ಸಾಯಿಯು ತಾವೇ ಸ್ವತಃ ಭಕ್ತರ ಕಲ್ಯಾಣಕ್ಕಾಗಿ ಬರೆಯುತ್ತಿದ್ದಾರೆ. ನಾನು ಕೇವಲ ಅವರ ಉಪಕರಣ. ॥41॥

ಮುರಳಿಗಾಗಲೀ, ಹಾರ್ಮೋನಿಯಂ ಪೆಟ್ಟಿಗೆಗಾಗಲಿ ಅವುಗಳಿಂದ ಹೊರಡುವ ಸ್ವರಗಳ ಬಗ್ಗೆ ಯೋಚನೆ ಇಲ್ಲ. ಕೇವಲ ವಾಚಕರಿಗೆ ಮಾತ್ರ ಅದರ ಬಗ್ಗೆ ಕಾಳಜಿ ಇದೆ. ಅದೇ ರೀತಿ ನಾವು ಏಕೆ ತೊಂದರೆಪಟ್ಟುಕೊಳ್ಳಬೇಕು? ॥42॥

'ಚಂದ್ರಕಾ೦ತ' ಸುರಿಸುವ ಅಮೃತ ಅದರದ್ದೇ! ಚಂದ್ರೋದಯವಾಗುವಾಗ ಚಂದ್ರ ನಿರ್ಮಿತವಾದದ್ದು. ಚಂದ್ರನಿಂದ ಸೃಷ್ಟಿಸಲ್ಪಟ್ಟ ಪವಾಡವೇ ಆಗಿದೆ. ॥43॥ ಸಮುದ್ರದ ಪೂರ್ಣ ಉಬ್ಬರ ಅದರ ಕಾರ್ಯವಲ್ಲ. ಅದೂ ಸಹ ಚಂದ್ರನ ಕೈಯಲ್ಲಿದೆ. ಸಾಗರಕ್ಕೆ ಅದನ್ನುಂಟುಮಾಡುವ ಶಕ್ತಿ ಇಲ್ಲ. ॥44॥

ಹಾಗೆಯೇ ಆಗಲಿ. ಸಾಗರದಲ್ಲಿ ಕೆಂಪುದೀಪವನ್ನು, ಹಡಗಿನ ಮಾರ್ಗದರ್ಶನಕ್ಕಾಗಿ ಹಾಗೂ ಅವು ಬಂಡೆಗಳಿಗೆ ಬಡಿಯದಿರಲಿ ಮತ್ತು ಸುಳಿಗಳಲ್ಲಿ ಸಿಕ್ಕಿಕೊಳ್ಳದಿರಲಿ ಎಂದು ಎಚ್ಚರಿಕೆ ನೀಡಿ ರಕ್ಷಿಸಲು ಇಟ್ಟಿರುತ್ತಾರೆ. ॥45॥

ಹಾಗೆಯೇ ಸಾಯಿನಾಥನ ಕತೆಗಳು ಅಮೃತದ ಮಧುರತ್ಚವನ್ನೂ ಮೀರಿಸುತ್ತವೆ. ದುಸ್ತರವಾದ ಭವಸಾಗರದ ಕಠಿಣ ಮಾರ್ಗಗಳನ್ನು ಸುಲಭವಾಗಿ ದಾಟಿಸಿ ನಮ್ಮನ್ನು ಸುಕ್ಷೇಮವಾಗಿ ದಡಸೇರಿಸುತ್ತವೆ. ॥46॥

ಆ ಸ೦ತಕಥೆಗಳು ಧನ್ಯ, ಧನ್ಯ. ಅವು ನಮ್ಮ ಕಿವಿಗಳಿಂದ ಒಳಗೆ ಪ್ರವೇಶಿಸಿ ಅ೦ತರಂಗವನ್ನು ಸ್ಪರ್ಶಿಸಿ ದೇಹದ 'ಅಹಂ'ಭಾವವನ್ನು ಹೊಡೆದೋಡಿಸಿ ಶುದ್ಧಮಾಡಿ ದ್ವಂದ್ವ ಭಾವವನ್ನು ನಾಶಮಾಡುತ್ತವೆ. ॥47॥

ನಮ್ಮ ಹೃದಯದಲ್ಲಿ ಹೆಚ್ಚು ಹೆಚ್ಚು ಕತೆಗಳು ಸೇರಿದಾಗ, ಸಂದೇಹಗಳು ಅತ್ತಿತ್ತ ಓಡುತ್ತವೆ ಮತ್ತು ಜ್ಞಾನವೃದ್ಧಿಯಾಗುತ್ತದೆ. ನಮ್ಮ ದೇಹದೊಡನೆ ನಮ್ಮನ್ನು ಗುರುತಿಸಿಕೊಳ್ಳುವುದು ಕ್ಲೀಣವಾಗುತ್ತದೆ. ॥48॥

ಬಾಬಾರವರ ಶುದ್ಧ ಯಶೋಗಾಥೆಯನ್ನು ವಿವರಿಸುವುದು ಮತ್ತು ಅವುಗಳನ್ನು ಹೃದಯಪೂರ್ವಕವಾಗಿ ಕೇಳುವುದು ಭಕ್ತರ ಪಾಪಗಳನ್ನೆಲ್ಲ ಸುಟ್ಟು ಹಾಕುತ್ತವೆ. ಇದು ಮೋಕ್ಟಕ್ಕೆ ಸುಲಭ ಸಾಧನೆ. ॥49॥

ಬ್ರಹ್ಮನ ಸೃಷ್ಟಿಯೂ ಮಾಯಾತೀತವಾಗಿದೆ. ಮಾಯೆಯನ್ನು ಗೆಲ್ಲುವ ಉಪಾಯಗಳೇನು? ನೈತಿಕ - ಸಾತ್ವಿಕ ಜೀವನವನ್ನು ನಡೆಸುವ ಭಕ್ತರನ್ನು ದೇವರು ಅನುಗ್ರಹಿಸುತ್ತಾನೆ. ಹಾಗಲ್ಲದೆ ಭಕ್ತರು ಮಾಯೆಯನ್ನು ಹೇಗೆ ತಾನೆ ಗೆಲ್ಲಲು ಸಾಧ್ಯ? ॥50॥

ಪರಿಷೂರ್ಣವಾದ ಆನಂದ ಎಂದರೇನು? ಭಕ್ತಿ, ಮುಕ್ತಿ, ವಿರಕ್ತಿಗಳು ಎಂದರೇನು? ನಾಲ್ಕು ವರ್ಣಗಳಿಗೆ ಮತ್ತು ನಾಲ್ಕು ಆಶ್ರಮಗಳಿಗೆ ಸೇರಿದ ತತ್ತ್ವಗಳೆಲ್ಲವೂ ಒಂದೇ, ಅಮೂರ್ತವಿಚಾರಗಳು. ॥51॥

ಈ ವಿಷಯಗಳ ಬಗ್ಗೆ ತಿಳಿಯಲು ಇಚ್ಛಿಸುವವರು ಜ್ಞಾನೇಶ್ವರ, ಏಕನಾಥ ಮತ್ತಿತರರು ರಚಿಸಿದ ಗ್ರಂಥಗಳನ್ನು ಅಧ್ಯಯನ ಮಾಡಿ ಅವು ನೀಡುವ ಸಂತೋಷವನ್ನು ಅನುಭವಿಸಲಿ. ॥52॥

ಕೃತಯುಗದಲ್ಲಿ 'ಶಮ' - ಇ೦ದ್ರಿಯನಿಗ್ರಹ ಮತ್ತು 'ದಮ' - ವಾಸನೆಗಳನ್ನು ತ್ಯಜಿಸುವುದು, ತ್ರೇತಾಯುಗದಲ್ಲಿ ಯಜ್ಞಯಾಗಾದಿಗಳು, ದ್ವಾಪರಯುಗದಲ್ಲಿ ಉಪಾಸನೆ ಮತ್ತು ಕಲಿಯುಗದಲ್ಲಿ ನಾಮಜಪ ಮತ್ತು ಸಂಕೀರ್ತನೆಯು ಮೋಕ್ಷಪಡೆಯಲು ಸರಳ ಸಾಧನೆಯಾಗಿವೆ. ॥53॥

ಬ್ರಾಹ್ಮಣ ಇತ್ಯಾದಿ ನಾಲ್ಕು ವರ್ಣದವರೆಲ್ಲರಿಗೂ ಗುರುಕಥಾಶ್ರವಣವು ಸರಳ ಸಾಧನೆ. ಸ್ತೀ, ಶೂದ್ರ ಅಥವಾ ಜಾತಿಹೀನರಿಗೂ ಇದೇ ಒಂದು ಸರಳ ಸಾಧನೆ. ॥54॥

ಹಿಂದಿನ ಜನ್ಮದ ಪುಣ್ಯಕಾರ್ಯಗಳ ಫಲಹೊಂದಿರುವವರು ಮತ್ರ ಈ ಕಥೆಗಳನ್ನು ಶ್ರವಣ ಮಾಡುವರು. ಯಾರಾದರೂ ನಿದ್ರೆಹೋದರೆ ದೇವರೇ ಅವರನ್ನು ಎಚ್ಚರಗೊಳಿಸುವನು. ॥55॥

ಯಾರು ವಿಷಯ ಭೋಗಗಳಲ್ಲೇ ಸದಾ ಮುಳುಗಿರುತ್ತಾರೋ ಮತ್ತು ಅವು ದೊರಕದಿದ್ದಲ್ಲಿ ದೀನಚಿತ್ತರಾಗಿರುವರೋ ಅವರನ್ನು ಈ ಸಂತ ಕಥಾಮೃತವು ವಿಷಯವಾಸನೆಗಳಿಂದ ವಿಮುಕ್ತಗೊಳಿಸುವುದು. ॥56॥

ಯೋಗ, ಯಾಗಗಳಿಗೆ, ಧ್ಯಾನಕ್ಕೆ, ಏಕಾಗ್ರತೆಗೆ ಸತತಾಭ್ಯಾಸ ಪ್ರಯತ್ನ ಬೇಕಾಗುತ್ತದೆ. ಆದರೆ ಕಥಾತ್ರವಣಕ್ಕೆ ಗಮನವಿಟ್ಟು ಕೇಳುವುದು ಹೊರತು ಪ್ರಯಾಸಪಡಬೇಕಾಗಿಲ್ಲ. ॥57॥

ಈ ರೀತಿ ಸಾಯಿ ಕತೆಯು ನಿರ್ಮಲವಾಗಿದೆ. ಇದನ್ನು ಪರಿಶುದ್ಧ ಮನಸ್ಸಿನ ಸಜ್ಜನರು ಪ್ರೇಮದಿಂದ ಆಲಿಸಿದರೆ ಪ್ರಯೋಜನವುಂಟು. ಪ್ರಬಲವಾದ ಪಂಚಮಹಾಪಾಪಗಳೂ ಭಸ್ಮವಾಗುತ್ತವೆ. ॥58॥

ನಾವು ಭವಪಾಶದಿಂದ ಬಂಧಿತರಾಗಿದ್ದೇವೆ. ಇದರಿಂದ ನಮ್ಮ ಸ್ವಸ್ವರೂಪವು ಮರೆಯಾಗಿದೆ. ಈ ಕತೆಗಳನ್ನು ಕೇಳಿದ ನಂತರ ಬಂಧಗಳು ಸಡಿಲಗೊಂಡು ನಾವು ಆತ್ಮಸ್ಪರೂಪವನ್ನು ಅರಿಯುತ್ತೇವೆ. ॥59॥

ಈ ಕತೆಗಳನ್ನು ಜೀವನ ಪೂರ್ತಿ ನೆನೆಸಿಕೊಳ್ಳುತ್ತಿರಬೇಕು ಮತ್ತು ನಿತ್ಯವೂ ಅವುಗಳನ್ನು ಪಠನ ಮಾಡುತ್ತಿರಬೇಕು ಅವು ಶ್ರೋತೃಗಳನ್ನು ಭವಬಂಧನದಿಂದ ಬಿಡಿಸಿ ಅವರಿಗೆ ಶಾಂತಿ, ಸಮಾಧಾನಗಳನ್ನು ತಂದುಕೊಡುತ್ತವೆ. ॥60॥

ಭಕ್ತಿ ಮತ್ತು ಶ್ರದ್ಧೆಯಿಂದ ಓದುವಾಗ, ಶ್ರವಣ ಮಾಡುವಾಗ, ನಾನು ಸಾಯಿಯನ್ನು ಧ್ಯಾನಿಸುವಂತಾಗಲಿ. ಅವರು ತಮ್ಮ ಸಗುಣ ರೂಪದಲ್ಲಿ ನನ್ನ ಮುಂದೆ ದರ್ಶನ ನೀಡಲಿ ಮತ್ತು ಅದು ನನ್ನ ಮನಸ್ಸಿನ ಮೇಲೆ ತಾಶ್ವತ ಮುದ್ರೆ ಒತ್ತಲಿ. ॥61॥

ಈರೀತಿ ಸದ್ಗುರು ಭಕ್ತಿಯು ಹೆಚ್ಚಲಿ. ಪ್ರಪಂಚದಿಂದ ವಿರಕ್ತಿ ಉಂಟಾಗಲಿ, ಗುರುಸ್ಮರಣೆಯನ್ನು ಪ್ರೇಮದಿಂದ ಮಾಡಲು ಉತ್ಸಾಹ ತುಂಬಲಿ ಮತ್ತು ನನ್ನ ಮನಸ್ಸನ್ನು ಪರಿಶುದ್ಧಗೊಳಿಸಲಿ. ॥62॥

ಈ ಉದ್ದೇಶವನ್ನು ಮನದಲ್ಲಿಟ್ಟುಕೊಂಡು ಸಾಯಿನಾಥರು ನನ್ನನ್ನು ಅನುಗ್ರಹಿಸಲಿ. ನನ್ನನ್ನು ನಿಮಿತ್ತಮಾತ್ರವನ್ನಾಗಿ ಮಾಡಿ ತಾವೇ ಸ್ವಯಂ ಗ್ರಂಥ ರಚನೆ ಮಾಡಲಿ. ॥63॥

ಹಸುವಿನ ಕೆಚ್ಚಲಿನಲ್ಲಿ ಹಾಲು ಉಕ್ಕಿ ಹರಿಯುತ್ತಿದ್ದರೂ ಅದು ತನ್ನ ಕರುವಿಗೆ ಮಾತ್ರ ಹಾಲು ಕುಡಿಸುತ್ತದೆ. ಅದೇ ರೀತಿ ಸಾಯಿನಾಥರ ಪ್ರೇಮವೂ ಸಹ. ॥64॥ ಚಾತಕಪಕ್ಷಿಯಂತೆ ಕಾತರದಿಂದ ನನಗಾಗಿ ಸಾಯಿಮಾತೆಯು ಘನವಾದ ಆನಂದದ ಮಳೆ ಸುರಿಸಿದಳು, ನನ್ನ ಅಲ್ಪ ಬಾಯಾರಿಕೆಯನ್ನು ಹಿಂಗಿಸಿದಳು ಮತ್ತು ತನ್ನ ಭಕ್ತರ ಬಾಯಾರಿಕೆಯನ್ನು ಪೂರ್ಣವಾಗಿ ಇಂಗಿಸುತ್ತಾಳೆ. ॥65॥

ಪ್ರೀತಿ ಮತ್ತು ಭಕ್ತಿಗಳು ಎಷ್ಟು ಕೌತುಕ. ತಾಯಿಯು ತನ್ನ ಮಗುವಿನ ಬಗ್ಗೆ ಉಕ್ಕಿ ಬರುವ ಪ್ರೀತಿಯಿಂದ ಮಗು ಕೇಳದಿರುವಾಗಲೂ ತನ್ನ ಹಾಲನ್ನು ಆ ಮಗುವಿನ ಬಾಯಿಗೆ ಒತ್ತಾಯಪೂರ್ವಕವಾಗಿ ಕುಡಿಸುತ್ತಾಳೆ. ॥66॥

ಅವಳ ಆಯಾಸ ಯಾರಿಗೆ ಗೊತ್ತು? ಮಗು ಏನನ್ನೂ ಅರಿಯದು. ತಾಯಿಯಲ್ಲದೆ ಮತ್ಯಾರು ಆ ಮಗುವಿಗೆ ಕೇಳದೇನೇ ತನ್ನ ಮೊಲೆಯೂಡಿಸುತ್ತಾಳೆ? ॥167॥ ಆ ಮಗುವನ್ನು ಆಭರಣಗಳಿಂದ ಅಲಂಕರಿಸಿದಾಗ ಮಗುವಿಗೆ ಅದರ ಯಾವ ಪ್ರಾಮುಖ್ಯತೆಯೂ ತಿಳಿದಿರುವುದಿಲ್ಲ. ತಾಯಿ ಈ ಆನಂದವನ್ನು ಅನುಭವಿಸುತ್ತಾಳೆ. ಸದ್ಗುರುವಿನ ರೀತಿಯೂ ಹಾಗೇನೆ. ॥68॥

ನನ್ನಲ್ಲಿರುವ ಈ ಮಗುವಿನ ಮುಗ್ಧತೆಯನ್ನು ಯಾರು ಪ್ರೀತಿಯಿಂದ ತೃಪ್ತಿಪಡಿಸುತ್ತಾರೆ? ತಾಯಿಯಲ್ಲದೆ ಮತ್ಯಾರಿಗೆ ಈ ರೀತಿಯ ನಿಜವಾದ ಕಾಳಜಿ ಇರುತ್ತದೆ. ಈ ರೀತಿಯ ವಾತ್ಸಲ್ಯ ಬಹು ಅಪರೂಪವಾದದ್ದು. ॥69॥

ಸದ್ಗುಣಿಮಾತೆಯನ್ನು ಪಡೆಯುವುದೂ, ಭಗವಂತನ ಅನುಗ್ರಹ ಪಡೆಯುವುದೂ ಮಹಾ ಪುಣ್ಯದ ಫಲ. ಆದರೂ ಮಗು ತಾಯಿಯ ಪ್ರಸವವೇದನೆಯನ್ನು ಅರಿತಿರುವುದಿಲ್ಲ. ॥70॥

ಅದೇನೇ ಇರಲಿ, ಈ ಬಗ್ಗೆ ಬಾಬಾರವರು ಮತ್ತಷ್ಟು ಹೆಚ್ಚಿಗೆ ಹೇಳಿರುವುದನ್ನು ನಾನು ನಿಮಗೆ ಹೇಳುತ್ತೇನೆ. ಓ ಸಜ್ಜನ ಶ್ರೋತೃಗಳೇ, ದಯಮಾಡಿ ಅದನ್ನು ಗಮನವಿಟ್ಟು ಆದರ ಪೂರ್ವಕವಾಗಿ ಕೇಳಿರಿ. ॥71॥

ಕ್ರಿ. ಶ. 1916 ರಲ್ಲಿ ನನ್ನ ಸರ್ಕಾರಿ ಸೇವೆ ಮುಗಿಯಿತು ಮತ್ತು ಒಂದು ನಿಶ್ಚಿತವಾದ ಪಿಂಚಣಿಯನ್ನು ನಿಗದಿಪಡಿಸಲಾಯಿತು. ನನಗೆ ಶಿರಡಿ ಯಾತ್ರೆ ಮಾಡುವ ಸಮಯ ಕೂಡಿ ಬಂದಿತು. ॥72॥

ಅದು ಗುರು ಪೂರ್ಣಿಮೆಯ ದಿನ. ಗುರುಪೂಜೆಯನ್ನು ಮಾಡಲು ಭಕ್ತರು ನೆರೆದಿದ್ದರು. ಚಿಂಚೋಣಿಕರ ಅಣ್ಣನು, ತಾನಾಗಿಯೇ ಬಾಬಾರವರಲ್ಲಿ ವಿನಂತಿ ಮಾಡಿದನು. ಅವನ ಕೋರಿಕೆ ಏನೆಂದು ನೋಡೋಣ. ॥73॥

ನನ್ನ ಬಗ್ಗೆ ಅಣ್ಣನಿಗೆ ಬಹಳ ಕಾಳಜಿ ಇತ್ತು. ಅವನು ಬಾಬಾರವರಲ್ಲಿ ನಿವೇದಿಸಿಕೊಂಡನು. "ಸಂಸಾರವು ಬೆಳೆಯುತ್ತಿರುವುದರಿಂದ ಅವನ ಮೇಲೆ ಕರುಣೆ ತೋರಿಸಿರಿ ॥74॥

"ಅವನಿಗೆ ಮತ್ತೇನಾದರೂ ಕೆಲಸ ಕೊಡಿ. ಈ ಪಿಂಚಣಿ ಸಾಕಾಗುವುದಿಲ್ಲ. ಅಣ್ಣಾ ಸಾಹೇಬನ ಚಿಂತೆಯನ್ನು ದೂರಮಾಡಿ. ಈ ರೀತಿ ಏನನ್ನಾದರೂ ಮಾಡಿ." ॥75॥

ಅದಕ್ಕೆ ಉತ್ತರವಾಗಿ ಬಾಬಾ ಹೇಳಿದರು - "ಅವನಿಗೆ ಮತ್ತೊಂದು ನೌಕರಿಯು ಸಿಗುತ್ತದೆ. ಈಗ ಅವನು ನನ್ನ ಸೇವೆ ಮಾಡಲಿ. ಅವನಿಗೆ ಸಂಸಾರ ಸುಖವೂ ದೊರೆಯುತ್ತದೆ.॥76॥

"ಅವನ ಸಂಸಾರ ಯಾವಾಗಲೂ ಉದ್ಧಾರವಾಗುತ್ತದೆ ಮತ್ತು ಯಾವಜ್ಜೀವಪರ್ಯಂತ ಅವನಿಗೆ ಬೇರೆ ಏನೂ ಬೇಕಾಗುವುದಿಲ್ಲ. ಅವನು ಪೂರ್ಣ ಶ್ರದ್ಧೆಯಿಂದ ನನ್ನನ್ನು ಅವಲಂಬಿಸಿದ್ದೇ ಆದಲ್ಲಿ ಅವನ ಆಪತ್ತುಗಳನ್ನೆಲ್ಲಾ ಪರಿಹರಿಸುತ್ತೇನೆ. ॥77॥

"ತಮ್ಮ ಇಚ್ಛಾನುಸಾರ ವರ್ತಿಸುತ್ತೇವೆ ಎಂದು ಹೇಳುವ ಜನರು ಇರುತ್ತಾರೆ, ಅವರು ದಾರಿ ತಪ್ಪಿದವರಾಗಿರುತ್ತಾರೆ. ಧಮ್ಮಾಚರಣೆಯಿಂದ ವಿಮುಖರಾದವರು ಮೊದಲು ಅಂತಹ ಜನರಿಂದ ದೂರವಾಗಿರುತ್ತಾರೆ. ॥78॥

"ಅ೦ತಹ ಜನರು ಸಿಕ್ಕಲಿ ಅವರಿಂದ ದೂರವಾಗಿರಿ. ಅವರನ್ನು ಅತಿಭಯಂಕರವೆಂದು ತಿಳಿಯಿರಿ. ಅವರ ನೆರಳಿಗೂ ಸಹ ಭಯಪಡಬೇಕು ಮತ್ತು ಅವರನ್ನು ಅತ್ಯಂತ ಕಷ್ಟದಿ೦ದಾದರೂ ದೂರವಿಡಬೇಕು. ॥79॥

"ಆಚಾರಹೀನನೂ, ಶೀಲಭ್ರಷ್ಟನೂ, ವಿಚಾರಹೀನನೂ, ಕರ್ಮಭ್ರಷ್ಟನೂ, ಇಷ್ಟಾನಿಷ್ಟಗಳನ್ನು ಪರಾಮರ್ಶಿಸದೆ ಇರುವವನೂ ಜೀವನದಲ್ಲಿ ಏನಾದರೂ ಒಳ್ಳೆಯದನ್ನೂ, ಅಭೀಷ್ಟವನ್ನೂ ಹೇಗೆ ಸಾಧಿಸಬಲ್ಲನು? ॥80॥

"ಹಿ೦ದಿನ ಜನ್ಮಗಳ ವಿಶೇಷ ಅನುಬಂಧಗಳ ಪಾಶವಿಲ್ಲದಿದ್ದಲ್ಲಿ ಯಾರೂ ನನ್ನ ಹತ್ತಿರ ಬರುವುದಿಲ್ಲ. ಅದು ನಾಯಿಯೋ, ಹಂದಿಯೋ, ಸೊಳ್ಳೆಯೋ ಆಗಿರಬಹುದು. ಆದುದರಿಂದ ಯಾರನ್ನೂ ದೂರಮಾಡಬೇಡ. ॥81॥

"ಇಂದಿನಿಂದ ಅವನು ನನ್ನ ಸೇವೆಯನ್ನು ಪ್ರೀತಿ ಮತ್ತು ಭಕ್ತಿಗಳಿಂದ ಮಾಡಲಿ. ದೇವಾದಿ ದೇವನು ಅವನನ್ನು ಅನುಗ್ರಹಿಸುವನು. ಅವನು ಅಕ್ಷಯ ಫಲವನ್ನು ಪಡೆಯುವನು. ॥82॥

"ಅವನು ಯಾವ ರೀತಿ ಪೂಜೆ ಮಾಡಬೇಕು? 'ನಾನು ಯಾರು' ಎಂಬುದನ್ನು ಅವನು ನಿಶ್ಚಯವಾಗಿ ಅರಿಯಬಹುದು. ಸಾಯಿಯ ದೇಹವೂ ನಶಿಸುತ್ತದೆ. ಆದರೆ ಬ್ರಹ್ಮನು ಮಾತ್ರ ಅವಿನಾಶಿ ಮತ್ತು ಪೂಜಿಸಲ್ಪಡುವವನು. ॥83॥

"ನಾನು ಸರ್ವವ್ಯಾಪಿ, ನಾನು ಅಷ್ಟಧಾತು ಪ್ರಕೃತಿ ಸ್ವರೂಪದ ಮೂರ್ತಸ್ವರೂಪ" ಹೀಗೆಂದು ಅರ್ಜುನನಿಗೆ ಭಗವಂತನು ಭಗವದ್ಗೀತೆಯಲ್ಲಿ ಹೇಳಿರುವನು. ॥84॥

ಈ ಜಗತ್ತು ಅನೇಕ ನಾಮ, ರೂಪಗಳಿಂದ, ಚರ ಮತ್ತು ಅಚರ ವಸ್ತುಗಳಿಂದ ಉಂಟಾಗಿದೆ. ಅದು ನನ್ನಲ್ಲಿ ಅಷ್ಟಧಾತುಗಳ ಪ್ರಕೃತಿಯನ್ನೊಳಗೊಂಡಿದೆ. ಈ ತತ್ತ್ವವು ನನ್ನಿಂದಲೇ ಸೃಷ್ಟಿಸಲ್ಪಟ್ಟಿದೆ. ॥85॥

"ನನ್ನ ಸ್ಪಸ್ವರೂಪವೇ 'ಓಂ'ಕಾರ. ನಾನು ಕೇವಲ ಅದರ ವಾಚಕ. ವಿಶ್ವದಲ್ಲಿ ಅನೇಕ ವಸ್ತುಗಳಿವೆ.ಅದರಲ್ಲೆಲ್ಲಾ ವ್ಯಾಪಿಸಿರುವವನು ನಾನೇ. ॥86॥

"ಆತ್ಮಕ್ಕಿಂತ ಭಿನ್ನ ವಸ್ತುವಿಲ್ಲ ಆದುದರಿಂದ ಯಾವ ಕಾಮನೆಯು ಇರಬೇಕು? ನಾನು ದಶ ದಿಕ್ಕುಗಳಲ್ಲಿಯೂ ಎಲ್ಲದರಲ್ಲಿಯೂ ವ್ಯಾಪಿಸಿದ್ದೇನೆ. ॥87॥

"ಎಲ್ಲವೂ ಪರಿಷೂರ್ಣದಿಂದ ಕೂಡಿರುವಾಗ, 'ನಾನು' ಮತ್ತು 'ನನ್ನದು' ಎಂಬ ಭಾವಗಳು ಕರಗಿ ಹೋಗುತ್ತವೆ. ಸರ್ವ ವಸ್ತುಗಳಲ್ಲಿಯೂ ಸರ್ವಸ್ವ ನಾನೇ ಇರುವಾಗ ಯಾವ ಆಸೆಗಳನ್ನು ಹೊ೦ದಲಾಗುತ್ತದೆ? ॥88॥

"ಕಾಮನೆಗಳು ಬುದ್ಧಿಯಿಂದ ಹುಟ್ಟುತ್ತವೆ. ಅವುಗಳಿಗೆ ಆತ್ಮದ ಜೊತೆ ಯಾವುದೇ ಸಂಬಂಧ ಇರುವುದಿಲ್ಲ. ಸಾಯಿ ಮಹಾರಾಜರೂ ಆತ್ಮ ಸ್ಟರೂಪರು. ಅವರಲ್ಲಿ ಆಸೆಗಳು ಹೇಗೆ ಹುಟ್ಟುತ್ತವೆ? ॥89॥

ಅನೇಕ ಪ್ರಕಾರಗಳ ಕಾಮನೆಗಳು ಇವೆ. ಆದರೆ ಅದರ ಸಾರವಾದ 'ನಾನು ಯಾರು?' ಎಂಬುದನ್ನು ಅರಿತಾಗ ಆ ಕಾಮನೆಗಳು ಸೂರ್ಯನ ಬಿಸಿ ಕಿರಣಗಳು ಕರಗಿಸುವ ಮಂಜಿನ ಹನಿಗಳಂತೆ ಕರಗಿಹೋಗುತ್ತವೆ. ॥90॥

"ನಾನು ಮನಸ್ಸು, ಬುದ್ಧಿ, ಇಂದ್ರಿಯಗಳು ಅಲ್ಲ. ಅಥವಾ ನಾನು ಸ್ಥೂಲವಾದ ವಿರಾಟ್‌ ಸಹ ಅಲ್ಲ. ವಿಶ್ವ ಸೃಷ್ಟಿಯ ಮೊದಲಿನ ಹಿರಣ್ಯ ಗರ್ಭದ ರೂಪವೂ ನಾನಲ್ಲ. ಆದರೆ ನಾನು ಆದಿ ಇಲ್ಲದ ಸನಾತನದ ಸಾಕ್ಷಿ ಆಗಿರುವೆ. ॥91॥

"ಈರೀತಿ ನಾನು ಇ೦ದ್ರಿಯಾತೀತನಾಗಿರುವೆ. ನನಗೆ ಯಾವುದೇ ಇಂದ್ರಿಯ ವಸ್ತುಗಳಲ್ಲಿ ಆಸಕ್ತಿ ಇಲ್ಲ. ಆದರೆ ನಾನಿಲ್ಲದ ಸ್ಥಳ ಯಾವುದೂ ಇಲ್ಲ. ನಾನು ಕರ್ತನೂ ಅಲ್ಲ ಅಥವಾ ಯಾವುದೇ ಕಾರ್ಯದ ಕಾರಣನೂ ಅಲ್ಲ. ॥92॥

"ಮನಸ್ಸು, ಬುದ್ಧಿ, ಮತ್ತಿತರ ಇಂದ್ರಿಯಗಳು ಸ್ಥೂಲ ದೇಹದ ಕರಣಗಳು. ಇದನ್ನು ಅರಿತಲ್ಲಿ ಈ ಜ್ಞಾನದಿಂದ ಅಂತರಾತ್ಮದ ಆವರಣವನ್ನು ತೆಗೆದಲ್ಲಿ ವಿರಕ್ತಿಯು ಪ್ರಕಟವಾಗುತ್ತದೆ. ॥93॥

"ತನ್ನ ಆತ್ಮಸ್ಪರೂಪವನ್ನು ಮರೆಯುವುದೇ ಮಾಯೆ. ಶುದ್ಧ ಪೂರ್ಣಾನಂದವನ್ನು ಸ್ಮರಿಸುವುದೇ ನಾನು. ಚೈತನ್ಯ ಘನರೂಪನೇ ನಾನು. ॥94॥

"ಎಲ್ಲರನ್ನೂ ಆತ್ಮದೆಡೆಗೆ ಅಂದರೆ ನನ್ನೆಡೆಗೆ ತಿರುಗಿಸುವುದೇ ಒಂದು ಸೇವೆ ಮತ್ತು ನನಗೆ ತೋರುವ ಭಕ್ತಿ. ನಾನು ಯಾವಾಗ ಚಿದಾನಂದವನ್ನು ಅನುಭವಿಸುವೆನೋ ಅದೇ ಶುದ್ಧ ಸ್ಥಿತಿಯ ಜ್ಞಾನ. ॥95॥

"ನಾನೇ ಬ್ರಹ್ಮ ಸ್ವರೂಪ. ಪ್ರಜ್ಞಾನವೇ ಬ್ರಹ್ಮ. ಮಿಥ್ಯಾ ಜಗತ್ತಿನ ಬಗ್ಗೆ ಅರಿತೊಡನೆ ಲೌಕಿಕ ಮಾಯೆ ಹೊರಟುಹೋಗುತ್ತದೆ. ಬ್ರಹ್ಮನೇ ಸತ್ಯಸ್ತ್ವರೂಪ. ಅದೇ ನಾನು. ॥96॥

"ನಾನು ಶುದ್ಧ, ಬುದ್ಧ, ಮುಕ್ತ. ನಾನು ವಾಸುದೇವ (ಸರ್ವವ್ಯಾಪಿ). ನಾನೇ ಓಂಕಾರ. ನಾನೇ ಸತ್ಯ. ನನ್ನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸುವುದರಲ್ಲೇ ನಿನ್ನ ಹಿತವು ಅಡಗಿದೆ. ॥97॥

"ಈ ರೀತಿ ನನ್ನ ಸತ್ಯಸ್ತರೂಪವನ್ನು ಅರಿತು ಸೇವಿಸುವುದೇ ಸರಿಯಾದ ಮಾರ್ಗ. ಮತ್ತೆ ನನ್ನಲ್ಲಿ ಪೂರ್ಣ ಶರಣಾಗಿ ಮತ್ತು ನನ್ನಲ್ಲೇ ಒಂದಾಗಿ. ॥98॥

"ನದಿಯು ಸಮುದ್ರದಲ್ಲಿ ಶರಣಾದಾಗ, ಅದು ಹಿಂದೆ ಬರಲು ಸಾಧ್ಯವೇ? ನದಿಯು ಸಾಗರವನ್ನು ಆಲಂಗಿಸಿದಾಗ ಪ್ರತ್ಯೇಕತೆಯು ಎಲ್ಲಿ ಉಳಿಯುತ್ತದೆ? ॥99॥

"ಎಣ್ಣೆಯಲ್ಲಿ ನೆನೆಸಿದ ಬತ್ತಿಯನ್ನು ದೀಪಕ್ಕೆ ಹಿಡಿದಾಗ ಅದೇ ಪ್ರಕಾಶಯುಕ್ತ ಜ್ಯೋತಿಯಾಗುತ್ತದೆ. ಅದೇ ರೀತಿ ಸಂತರ ಚರಣಗಳಲ್ಲಿ ಶರಣಾದ ವ್ಯಕ್ತಿಯೂ ಸಂತನಾಗುತ್ತಾನೆ. ॥100॥

"'ಅಲ್ಲಾ-ಮಾಲಿಕ್‌'ನು ಚೈತನ್ಯಘನ ಪರಬ್ರಹ್ಮನು. ಅವನನ್ನೇಚಿಂತಿಸುವವನು ಶಾಂತನಾಗಿರುತ್ತಾನೆ. ಆಶೆಗಳಿರುವುದಿಲ್ಲ ಮತ್ತು ಸಮದೃಷ್ಟಿಯುಳ್ಳವನಾಗಿರುತ್ತಾನೆ. ಅವನಿಗೆ ಪರಬ್ರಹ್ಮನಲ್ಲದೆ ಬೇರೆ ಅಸ್ತಿತ್ವವೆಲ್ಲಿದೆ?॥101॥

"ಆತ್ಮಜ್ಞಾನ ಎಲ್ಲಿರುವುದಿಲ್ಲವೋ, ಅಹಂಭಾವ ಎಲ್ಲಿರುವುದಿಲ್ಲವೋ, ಶಾಂತಿ ಮತ್ತು ಜಗಳ (ಲೌಕಿಕವಾದ) ಎರಡು ಮುಖಗಳು ಎಲ್ಲಿರುವುದಿಲ್ಲವೋ, ಲೌಕಿಕ ವಸ್ತುಗಳ ಮೇಲೆ ಮೋಹವಿಲ್ಲವೋ ಈ ನಾಲ್ಕೂ ಗುಣಗಳು ಇರುವಲ್ಲಿ 'ಅಹಂಕಾರ' ಹೇಗೆ ಇರಲು ಸಾಧ್ಯ?" ॥102॥

ಸಾರಾಂಶದಲ್ಲಿ, ಸಾಯಿಯಲ್ಲಿ ಈ ಎಂಟುಗುಣಗಳೂ ಸಂಪೂರ್ಣವಾಗಿ ಇದ್ದುವು. ಆಗ ಅಹಂಕಾರಕ್ಕೆ ಜಾಗ ಎಲ್ಲಿದೆ? ಹಾಗಿರುವಾಗ ಅಹಂಕಾರವನ್ನು ಹೇಗೆ ಪ್ರಚೋದಿಸಲಿ. ॥103॥

ಯಾರ ಆತ್ಮವು ವಿಶ್ವದ ಕಣಕಣಗಳಲ್ಲಿ ಸಮ್ಮಿಳಿತವಾಗಿದೆಯೋ ಅಂತಹವನ ಭಾಗವೇ ನಾನು ಆಗಿದ್ದೇನೆ. ಸಾಯಿ ಚರಣಗಳಲ್ಲಿ ಸಮರ್ಪಿಸಿಕೊಳ್ಳಿ. ಅದೇ ನನ್ನ ಸೇವೆ. ॥104॥

"ನನ್ನ ಸೇವೆ ಮಾಡುವುದು, ನನ್ನ ಭಜನೆ ಮಾಡುವುದು ಮತ್ತು ನನ್ನಲ್ಲಿ ಸಂಪೂರ್ಣ ಶರಣಾಗುವುದು ನನ್ನಲ್ಲಿ ಒಂದಾಗುವಂತೆ ಮಾಡುತ್ತವೆ". ಹೀಗೆಂದು ಶ್ರೀಕೃಷ್ಣನು ಭಾಗವತದಲ್ಲಿ ಹೇಳಿರುವನು. ॥105॥

"ಕೀಟವು ಭ್ರಮರದ ಧ್ಯಾನದಲ್ಲೇ ಇದ್ದರೆ ತಾನೇ ಭ್ರಮರವಾಗಿಬಿಡುತ್ತದೆ. ಅದೇ ರೀತಿ ಒಬ್ಬ ಶಿಷ್ಯನು ನಿರಂತರ ತನ್ನ ಗುರುವಿನ ಭಜನೆ ಮಾಡುತ್ತಲೇ ಅವನು ಗುರುಸಮಾನನೇ ಆಗುವನು. ॥106॥

'ಸಮಾನ' ಎಂಬ ಪದವನ್ನು ಉಪಯೋಗಿಸಿದರೂ ಒಂದು ಪ್ರತ್ಯೇಕತೆ ಉಳಿಯುತ್ತದೆ. ಗುರುವು ಅದನ್ನು ಸಹಿಸಲಾಗದಿದ್ದರೂ, ಒಂದು ಕ್ಷಣವಾದರೂ ಗುರುವಿನ ಇರುವಿಕೆಯು ಶಿಷ್ಯನಿಲ್ಲದೆ ಇರಲು ಸಾಧ್ಯವಿಲ್ಲ ಮತ್ತು ಶಿಷ್ಯನು ಗುರುವಿನಿಂದ ಪ್ರತ್ಯೇಕವಾಗಿಲ್ಲ. ॥107॥

ಅದು ಈ ರೀತಿ ಆಯಿತು. ನಾನು ಪೂಜಿಸಬೇಕೆಂದು ಅಪ್ಪಣೆ ನೀಡಿದವನು, ಅವನು ತಾನು ಯಾರೆಂದು ವಿವರಿಸಿದನು. ನಾನು ಹೇಳುತ್ತಿರುವುದನ್ನು ಸಮರ್ಥಿಸುತ್ತಿರುವುದಕ್ಕೆ ನನ್ನ ನೆನಪಿನಿಂದ ಮರುಕಳಿಸಿದ ಘಟನೆಯನ್ನು ನಾನು ಈಗ ತಿಳಿಸುತ್ತೇನೆ. ॥108॥

ಒಬ್ಬ ಪಠಾಣನು (ರೋಹಿಲ) ಶಿರಡಿಗೆ ಬಂದನು. ಅವನು ಬಾಬಾರವರ ಸದ್ಗುಣಗಳಿಂದ ಆಕರ್ಷಿತನಾದನು. ಅಲ್ಲಿ ಬಹಳ ಕಾಲ ನೆಲೆಸಿದನು ಮತ್ತು ಬಾಬಾರವರಿಗೆ ಪ್ರೀತಿಯಿಂದ ಭಕ್ತಿಪೂರ್ವಕವಾಗಿ ಅರ್ಪಿಸಿಕೊ೦ಡನು. ॥109॥ ಅವನು ಕೋಣದ ರೀತಿಯಲ್ಲಿ ಭಾರಿ ದೇಹದವನಾಗಿದ್ದನು. ಅವನು ಸ್ಟೇಚ್ಛಾಚಾರಿಯೂ, ಯಾರನ್ನೂ ಲಕ್ಷಿಸದವನೂ ಆಗಿದ್ದನು. ಕೇವಲ ಕಫನಿಯನ್ನು ಕೀಲುಗಳ(ಮಣಿಕಟ್ಟಿನ)ವರೆಗೆ ಧರಿಸುತಿದ್ದನು. ॥101॥

ಹಗಲಾದರೇನು,ಇರುಳಾದರೇನು, ಮಸೀದಿಯಾದರೇನು, ಚಾವಡಿಯಾದರೇನು, ಅವನು ಕುರಾನ್‌ ಪಠಣವನ್ನು ಎತ್ತರದ ದ್ಹನಿಯಲ್ಲಿ, ಅತಿ ಉತ್ಸಾಹದಿಂದ ಮತ್ತು ಮೈಚಳಿಬಿಟ್ಟು ಮಾಡುತ್ತಿದ್ದನು. ॥111॥

ಮಹಾರಾಜರು ಶಾಂತಿಯ ಅಪರಾವತಾರ. ಆದರೆ ಹಳ್ಳಿಗರು ಅತಿಯಾಗಿ ಅತಾಂತಿ ಹೊಂದಿದ್ದರು. ಅರ್ಧರಾತ್ರಿಯಲ್ಲೂ ನಿಲ್ಲದಅವನ ವಾಚನವು ಎಲ್ಲರ ನಿದ್ರೆಯನ್ನು ಭಂಗಗೊಳಿಸುತ್ತಿತ್ತು. ॥112॥

ಹಗಲಲ್ಲಿ ಜನರು ಸುಡುತ್ತಿರುವ ಸೂರ್ಯನ ಬಿಸಿಲಲ್ಲಿ ಗದ್ದೆ ಮತ್ತು ಕಾಡುಗಳಲ್ಲಿ ಕಷ್ಟಪಡಬೇಕಾಗುತ್ತಿತ್ತು. ರಾತ್ರಿಯಾದಾಗ ಆರಾಮವಾಗಿ ನಿದ್ರೆಮಾಡಲು ಆಗುತ್ತಿರಲಿಲ್ಲ. ಆದುದರಿ೦ದ ಜನರು ಬೇಸರಗೊಂಡಿದ್ದರು. ॥113॥

ಅದಿರಲಿ. ಬಾಬಾರವರು ಮಾತ್ರ ಏನೂ ತೊಂದರೆಗೊಂಡಿರಲಿಲ್ಲ. ಜನರ ಮಟ್ಟಿಗೆ ತಾವು ದೊಡ್ಡ ಪಾಪವನ್ನು ಮಾಡಿದ್ದೇವೆಂದೇ ಅಂದುಕೊಂಡರು. ರಾತ್ರಿಶಾಂತಿಯುತ ನಿದ್ರೆಯಿಲ್ಲ, ಅವರು ರೋಹಿಲಾನ ಮೇಲೆ ಬೇಸರಗೊಂಡಿದ್ದರು. ॥114॥

ಅವರು ಸಂದಿಗ್ಧಪರಿಸ್ಥಿತಿಯಲ್ಲಿದ್ದರು. ಎಷ್ಟು ಸಮಯ ಇದನ್ನು ಸಹಿಸಲು ಸಾಧ್ಯ? ಹಗಲು ರಾತ್ರಿ ಈ ಪೀಡೆಯು ಅವರಿಗೆ ಒಂದು ದೊಡ್ಡ ಸಮಸ್ಯೆಯಾಯಿತು. ಅವರು ಇದರಿಂದ ಚಿಂತಿತರಾದರು. ॥115॥



ರೋಹಿಲಾನಾದರೋ ಬಹುದೊಡ್ಡ ತಲೆಹರಟೆಯ ಮನುಷ್ಯ ಅದಕ್ಕೆ ಸರಿಯಾಗಿ ಅವನಿಗೆ ಬಾಬಾರವರ ಉತ್ತೇಜನವೂ ಇತ್ತು. ಮೊದಲಿಗಿಂತ ಹೆಚ್ಚಾಗಿ ಅವನನ್ನು ಹಿಡಿಯುವರೇ ಇಲ್ಲದೆ ಪರಿಸ್ಥಿತಿ ಹದಗೆಟ್ಟಿತು. ॥116॥

ಅವನು ಬಹಳ ದುರಹಂಕಾರಿಯೂ, ಅವಿಧೇಯನೂ, ಜನರ ಹತ್ತಿರ ದುರ್ವರ್ತನೆ ಮಾಡುತ್ತಲೂ ಇದ್ದನು. ಮತ್ತೆ ಇಡೀ ಹಳ್ಳಿಯೇ ಅವನ ಮೇಲೆ ತಿರುಗಿಬಿದ್ದಿತು. ॥117॥

ಸಾಯಿಯಾದರೋ ಅತ್ಯಂತದಯಾರ್ದ್ರ ಹೃದಯಿಯಾಗಿ, ತಾಯಿಯ ರೀತಿಯಲ್ಲಿ ಸದಾ ತನ್ನಲ್ಲಿ ತರಣಾಗತರಾದವರ ಪರ ವಹಿಸುತ್ತಿದ್ದರು. ಆದುದರಿಂದ ಎಲ್ಲಾ ಹಳ್ಳಿಗರೂ ಒಟ್ಟಾಗಿ ಅವನಿಗೆ ತಿರುಗಿಬಿದ್ದರು. ॥118॥

ಆದರೆ ಬಾಬಾರವರು ಯಾವುದಕ್ಕೂ ಗಮನಕೊಡಲಿಲ್ಲ. ಬದಲಾಗಿ, ಅವರು ಹಳ್ಳಿಗರಿಗೆ ಹೇಳಿದರು, "ರೋಹಿಲನಿಗೆ ತೊಂದರೆ

ಕೊಡಬೇಡಿ. ಅವನು ನನಗೆ ಅತ್ಯಂತ ಪ್ರಿಯವ್ಯಕ್ತಿ. ॥1191॥

"ಈ ರೋಹಿಲನ ಪತ್ನಿ ಒಬ್ಬ ತಾಟಕಿ. ಮತ್ತು ಅವನೊಡನೆ ವಾಸಮಾಡಲು ತಯಾರಿಲ್ಲ. ಅವನನ್ನು ಮೋಸಗೊಳಿಸಿ ನನ್ನಲ್ಲಿಗೆ ಬರಲು ಕಾತರಳಾಗಿದ್ದಾಳೆ. ॥120॥

"ಆ ಲಜ್ಜೆಗೆಟ್ಟ ಹೆಂಗಸು ಪರದೆ ಮರ್ಯಾದೆಯಿಂದ ಇರುವುದಿಲ್ಲ. ಅವಳು ನೀತಿಗೆಟ್ಟವಳು ಮತ್ತು ಲಜ್ಜೆಗೆಟ್ಟವಳು. ಅವಳನ್ನು ಹೊರಗೋಡಿಸಿದರೆ ಮತ್ತೆ ಬಲವಂತವಾಗಿ ಮನೆಯೊಳಗೆ ನುಗ್ಗುತ್ತಾಳೆ. ॥121॥

"ಅವನು ಜೋರಾಗಿ ಕೂಗಿ ಹೇಳುವುದನ್ನ ನಿಲ್ಲಿಸಿದ ಕೂಡಲೇ ಈ ದುರ್ಬುದ್ಧಿಯುಳ್ಳ ಹೆಂಗಸು ಒಳಗೆ ಪ್ರವೇಶಿಸಲು ಅವಕಾಶಪಡೆಯುತ್ತಾಳೆ. ಅವನು ಕೂಗಿದಾಗ ಅವಳು ಅವನನ್ನು ಕಾಯಾ, ವಾಚಾ, ಮನಸಾ ಶುದ್ಧನನ್ನಾಗಿ ಮಾಡಿ ಓಡಿಹೋಗುತ್ತಾಳೆ. ಆದ್ದರಿಂದ ನನಗೆ ಅಗಾಧವಾದ ಸಂತೋಷ ಉಕ್ಕಿಬರುತ್ತದೆ. ॥122॥

"ಯಾರೂ ಅವನನ್ನು ವಿರೋಧಿಸಬೇಡಿ. ಅವನ ಮನಸ್ಸಿಗೆ ತೃಪ್ತಿಯಾಗುವಷ್ಟು ಅರಚಲಿ. ಅವನಿಲ್ಲದೆ ನಾನು ರಾತ್ರಿಯನ್ನು ಕಳೆಯಲಾರೆ. ಅವನಿಂದಾಗಿ ನನಗೆ ಅತಿ ಸಂತೋಷವಾಗುತ್ತದೆ. ॥123॥

"ಈ ರೀತಿಯ ಕೂಗಾಟಗಳು ನನಗೆ ಅತ್ಯಂತ ಹಿತಕರವಾಗಿರುತ್ತವೆ. ಈ ರೀತಿಯಿಂದಲಾದರೂ ರೋಹಿಲನು ಪರೋಪಕಾರಿಯಾಗಿರುತ್ತಾನೆ. ನನ್ನನ್ನು ಬಹುಸಂತೋಷ ಪಡಿಸುತ್ತಾನೆ. ॥124॥

"ಅವನು ಯಥೇಚ್ಛವಾಗಿ ಕೂಗಲಿ, ಅದೇ ನನಗೆ ಬಹಳ ಇಷ್ಟ ಇಲ್ಲದಿದ್ದಲ್ಲಿ ರೋಹಿಲನ ಪತ್ನಿ ಬಹಳ ದುಷ್ಟಳು. ನನಗೆ ತುಂಬ ಕಷ್ಟಕೊಡುತ್ತಾಳೆ‌. ॥125॥

"ಆಯಾಸಗೊಂಡಾಗ, ತಾನಾಗಿಯೇ ಶಾಂತನಾಗುತ್ತಾನೆ. ನಿಮ್ಮ ಉದ್ದೇಶ ನೆರವೇರುತ್ತದೆ. ಮತ್ತು ದುಷ್ಟ ಹೆಂಗಸು ನನಗೆ ತೊಂದರೆ ಕೊಡುವುದಿಲ್ಲ?” ॥126॥

ಈ ರೀತಿ ಸಾಯಿಗುರು ಹೇಳಿದಾಗ, ಮುಂದಿನ ಯಾವುದೇ ಪ್ರಯತ್ನವೆಲ್ಲ ವ್ಯರ್ಥ, ಬಾಬಾರವರ ಮನಸ್ಸು ಆಂದೋಲನಗೊಳ್ಳದಿದ್ದಲ್ಲಿ ನಾವು ಏಕೆ ಅದರಬಗ್ಗೆ ಯೋಚಿಸಬೇಕು? ॥127॥

ಹಾಗೆಯೇ ರೋಹಿಲನೂ ಬಹಳ ಉತ್ತೇಜಿತನಾಗಿದ್ದನು. ಅದಲ್ಲದೆ ಈಗ ಅವನಿಗೆ ಬಾಬಾರವರ ಅನುಮತಿಯೂ ದೊರಕಿದೆ. ಆದ್ದರಿಂದ ಅವನು ಕುರಾನಿನ ಪದಗಳನ್ನು ಬಹಳ ಜೋರಾಗಿ ಹೇಳಲು ಪ್ರಾರಂಭಿಸಿದನು ಮತ್ತು ಗಲಾಟೆ ಎಬ್ಬಿಸಿದನು.॥128॥

ಬಾಬಾರವರ ತಾಳ್ಮೆಯನ್ನು ನೋಡಿ ಜನರು ಬಹಳ ಅಚ್ಚರಿಗೊಂಡರು. ಅದರಿಂದ ಉಂಟಾಗುವ ತಲೆಸಿಡಿತದ ಬದಲು ಅವನ ಜೋರಾದ ಕೂಗುವಿಕೆಯೂ ಅವರನ್ನು ತಲ್ಲೀನರನ್ನಾಗಿಸಿತು. ॥129॥

ಅವನ ಅರಚಾಟ ಎಷ್ಟು ಭಯಂಕರವಾಗಿತ್ತು? ಅವು ಅವನ ಗಂಟಲನ್ನು ಹೇಗೆ ಒಣಗಿಸಿಲ್ಲವೋ? ಆದರೂ ಬಾಬಾರವರು ಒಂದೇ ಸಮನೆ ಹೇಳುತ್ತಿದ್ದರು, 'ಅವನನ್ನು ದೂಷಿಸಬೇಡಿ.' ॥130॥

ತೋರಿಕೆಗೆ, ರೋಹಿಲನು ಹುಚ್ಚನಾದ ಆಧುನಿಕ ಸಂತನ ರೀತಿ ಕಾಣುತ್ತಿದ್ದನು. ಆದರೆ ಅವನು ಬಾಬಾರವರನ್ನು ಅತ್ಯಂತ ಆದರದಿಂದ ನೋಡುತ್ತಿದ್ದನು. ಅವನು ಧರ್ಮದತತ್ತ್ವಗಳಿಗನುಸಾರವಾಗಿ ಸಂತೋಷದಿಂದ ಕುರಾನಿನ ಪದಗಳನ್ನು ಹಾಡುತ್ತಿದ್ದನು. ॥131॥

ಅವನು ತನ್ನ ಧ್ವನಿಯು ಮೃದುವಾಗಿದೆಯೋ ಕೀರಲು ಆಗಿದೆಯೋ ತಿಳಿಯದೆ ಅವನಿಗೆ ಸ್ಫೂರ್ತಿ ಬಂದೊಡನೆ ಭಗವ೦ತನ ನಾಮವನ್ನು ಗರ್ಜಿಸತ್ತಿದ್ದ. ॥132॥

ಗೊಗ್ಗರ ದನಿ ಅವನಿಗೆ ನಿಸರ್ಗದತ್ತವಾಗಿತ್ತು. ಅವನು ನಿರಂತರ ಗರ್ಜಿಸುತ್ತಿದ್ದನು - ಅಲ್ಲಾಹೋ ಅಕ್ಬರ್ ಎಂದು ಮತ್ತು ಗೀತೆಗಳನ್ನು ಆನಂದದಿಂದ ಹಾಡುತ್ತಿದ್ದನು. ॥133॥

ಬಾಬಾರವರು ನಾಸ್ತಿಕರ ಸಂಗವನ್ನು ಇಷ್ಟಪಡುತ್ತಿರಲಿಲ್ಲ. ಹೀಗಿರುವಾಗ ನಿರಂತರ ಭಗವನ್ನಾಮಸ್ಕರಣೆ ಮಾಡುತ್ತಿದ್ದ ಆಸ್ತಿಕನಾದ ರೋಹಿಲನನ್ನು ಓಡಿಸಲು ಯೋಚಿಸುವರೇ? ॥134॥

ಎಲ್ಲಿ ನನ್ನ ಭಕ್ತರು ನನ್ನ ಭಜನೆಗಳನ್ನು ಹಾಡುತ್ತಾರೋ, ಅಲ್ಲೆಲ್ಲ ನಾನು ನೆಲಸಿರುತ್ತೇನೆ. ಅಲ್ಲಿ ನಾನು ನಿದ್ರೆ ಮಾಡದೆ ಎಚ್ಚರವಾಗಿ ಇರುತ್ತೇನೆ. ಭಗವದ್ಗೀತೆಯ ಈ ಭಗವದ್ವಾಣಿಯನ್ನು ನಿಜವಾಗಿಸುವಂತೆ ಬಾಬಾರವರು ಈ ರೀತಿ ವರ್ತಿಸಿದರು. ॥135॥

ರೋಹಿಲನು ಭಿಕ್ಷೆಯಿಂದ ಬಂದಿದ್ದರಲ್ಲಿ ಬದುಕುತ್ತಿದ್ದನು. ಆಗಾಗ್ಗೆ ಉಪವಾಸವೇ ಇರುತ್ತಿದ್ದನು. ಅವನಿಗೆ ಹೆಂಡತಿ ಹೇಗಿರಲು ಸಾಧ್ಯ ಮತ್ತು ಆಕೆ ಬಾಬಾರವರನ್ನು ತೊಂದರೆಕೊಡಲು ಹೇಗೆ ಸಾಧ್ಯ? ॥136॥

ರೋಹಿಲನು ದಟ್ಟದರಿದ್ರನು. ಅವನ ಮದುವೆ ಹೇಗೆ ಸಾಧ್ಯ? ಅಥವಾ ಹೇಗೆ ಪತ್ನಿ ಇರುವಳು? ಬಾಬಾರವರು ಬಾಲ್ಯದಿಂದಲೇ ಬ್ರಹ್ಮಚಾರಿ. ಹಾಗಿರುವಾಗ ಇಡೀ ಕತೆಯೇ ಅಯೋಮಯ. ॥137॥

ಅವನು ಕಂಠಶೋಷಣೆ ಮಾಡಿಕೊಳ್ಳಲಿ, ಬಾಬಾರವರು ನಾಮಸ್ಕರಣೆಯಿಂದ ತೃಪ್ತರಾಗಿದ್ದಾರೆ. ಪ್ರತಿನಿತ್ಯ ಅವರು ಅವುಗಳನ್ನು ಆಲಿಸಿದ್ದಾರೆ. ಆ ಪಠನೆಯಮುಂದೆ ನಿದ್ರೆಯು ವಿಷವಾಗಿತ್ತು. ॥138॥

ಪದಗಳ ಮೋಕ್ಷಪ್ರದಾಯಕ ಬೋಧನೆಗಳಿಗೆ ಹೋಲಿಸಿದಾಗ ಹಳ್ಳಿಗರ ಫಿರ್ಯಾದು ಬಹಳ ಹಗುರವಾಯಿತು. ಬಾಬಾರವರ ಈ ನಡವಳಿಕೆ ಹಳ್ಳಿಗರಿಗೆ ಸರಿಯಾದ ನೀತಿಪಾಠಕಲಿಸುವ ಹಾಗಿತ್ತು. ॥139॥

ಭಗವಂತನ ನಾಮವನ್ನು ಪ್ರೀತಿಸುವ ಕಾರಣಕ್ಕಾಗಿ ತಾವು ರೋಹಿಲನ ಸಹವಾಸವನ್ನು ಇಷ್ಟಪಡುತ್ತಾರೆಂಬ ವಿಷಯವನ್ನು ಎಲ್ಲರಿಗೂ ತಿಳಿಸಿದರು. ॥140॥



ದೃಶ್ಯ, ದೃಷ್ಟಾರ, ದೃಕ್‌ ಇವು ಮೂರೂ ಅವನಿಗೆ ಭಗವತ್ಸ್ವರೂಪವೇ. ಅಂತಹ ವ್ಯಕ್ತಿ ಬ್ರಾಹ್ಮಣನೇ ಆಗಲಿ, ಪಠಾಣನೇ ಆಗಲಿ ಸರಿಸಮಾನರೆಂದು ಪರಿಗಣಿಸಲ್ಪಡುತ್ತಾರೆ. ॥141॥

ಒಮ್ಮೆ, ಮಧ್ಯಾಹ್ನದ ಆರತಿಯ ನಂತರ ಜನರು ತಮ್ಮ ಮನೆಗಳಿಗೆ ಹಿಂತಿರುಗಲು ಪ್ರಾರಂಭಿಸಿದಾಗ ಬಾಬಾರವರು ಮಧುರ ವಚನಗಳನ್ನು ತಮ್ಮ ಮುಖದಿಂದ ನುಡಿದರು. ಅದನ್ನು ಕೇಳಿ. ॥142॥

"ನೀವು ಎಲ್ಲೇ ಇರಲಿ, ಏನೇ ಮಾಡುತ್ತಿರಲಿ, ಯಾವಾಗಲೂ ನೆನಪಿಡಿ; ಏನೆಂದರೆ ನೀವು ಮಾಡಿದ ಕಾರ್ಯಗಳ ಒಂದು ಸಣ್ಣ ವಿವರವೂ ನನಗೆ ತಿಳಿಯುತ್ತಿರುತ್ತದೆ. ॥143॥

"ಈ ರೀತಿ, ನಾನು ವಿವರಿಸಿದ ಹಾಗೆ, ನಾನು ಎಲ್ಲರ ಹೃದಯವಾಸಿ, ಸರ್ವವ್ಯಾಪಿ. ನಾನು ಸರ್ವೇಶ. ॥144॥

"ನಾನು ಇಡೀ ಸೃಷ್ಟಿಯನ್ನು ಒಳಗೆ ಮತ್ತು ಹೊರಗೆ ಉಕ್ಕಿ ಹೋಗುವಷ್ಟು ವ್ಯಾಪಿಸಿದ್ದೇನೆ. ಈ ವಿಶ್ವಕ್ಕೆ ಭಗವಂತನೇ ಸೂತ್ರಧಾರ ಮತ್ತು ನಾನು ಸೂತ್ರವನ್ನು ಹಿಡಿದವನು. ॥145॥

"ನಾನು ಸಕಲ ಜೀವಿಗಳಿಳೂ ತಾಯಿ. ನಾನು ತ್ರಿಗುಣಗಳಲ್ಲೂ ಸಮಾನಾವಸ್ಥೆಯಲ್ಲಿರುತ್ತೇನೆ. ನಾನು ಸಕಲ ಇಂದ್ರಿಯಗಳನ್ನು ಪ್ರವರ್ತನೆಗೊಳಿಸುವವನು. ನಾನೇ ಸೃಷ್ಟಿ ಸುರಕ್ಷಕ ಮತ್ತು ಸೃಷ್ಟಿ ಸಂಹಾರಕ. ॥146॥

"ನನ್ನನ್ನೇ ಧ್ಯಾನಿಸುವವನಿಗೆ ಯಾವ ಸಂಕಟವೂ ಇರುವುದಿಲ್ಲ. ಆದರೆ ನನ್ನ ಮರೆತ ಕ್ಷಣವೇ ಮಾಯೆಯು ಅವನನ್ನು ಆವರಿಸುತ್ತದೆ. ॥147॥

"ಯಾವ ರೂಪವನ್ನು ಆವಾಹಿಸಿದರೂ ಅದು ನನ್ನ ಪ್ರತಿಬಿ೦ಬಮಾತ್ರ. ಅದು ಒ೦ದು ಹುಳವೋ, ಇರುವೆಯೋ, ಬಡಪಾಯಿಯೋ, ರಾಜನೋ ಆಗಿರಬಹುದು". ಈ ಅಪರಿಮಿತ ವಿಶ್ವವು ಚರ ಮತ್ತು ಅಚರ ವಸ್ತುಗಳಿಂದ ಕೂಡಿದೆ. ಇವೆಲ್ಲವೂ ಬಾಬಾರವರ ಸ್ವಸ್ವರೂಪವೇ. ॥148॥

ಇದೆಂತಹ ಅಚ್ಚರಿಯ ಸಂಕೇತ? ಸಂತನಿಗೂ ಭಗವಂತನಿಗೂ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ. ಅಭೇದ ರೂಪಿಯಾಗಿ, ಚರ ಮತ್ತು ಅಚರವಾದ ವಿಶ್ವದ ಉದ್ಧಾರಕ್ಕಾಗಿ ಅವತಾರವೆತ್ತುತ್ತಾನೆ. ॥149॥

ಗುರುವಿನ ಚರಣಗಳಲ್ಲಿ ಶರಣಾಗಲು ಇಚ್ಛಿಸುವವನು ಗುರುವಿನ ಗುಣಗಾನ ಮಾಡಬೇಕು ಅಥವಾ ಗುರುಚರಿತ್ರೆಯ ಕೀರ್ತನೆ ಮಾಡಬೇಕು ಅಥವಾ ಅಂತಹ ಕತೆಗಳನ್ನು ಭಕ್ತಿಯಿಂದ ಕೇಳಬೇಕು. ॥150॥

ಈ ಜ್ಞಾನವನ್ನು ಪಡೆಯಲು ಇಚ್ಛಿಸುವವನು, ತೀವ್ರವಾಗಿ ಆಲಿಸಿ ಅವನು ಅದರೊಂದಿಗೆ ಲೀನವಾಗಿ ಉಪದೇಶಮಾಡುತ್ತಲೇ ತದ್ರೂಪನಾಗುವನು. ಅದರಿಂದ ಪರಮಚೇತನವು ಅವನ ಮುಂದೆ ಪ್ರಕಟವಾಗುತ್ತದೆ ಮತ್ತು ಅವನ ಮನಸ್ಸು ಉನ್ಮತ್ತವಾಗುತ್ತದೆ. ॥151॥

ಲೌಕಿಕ ಸಂಸಾರದಲ್ಲಿ ಪೂರ್ಣವಾಗಿ ಮುಳುಗಿದ್ದರೂ ಸಂತರ ಚರಿತ್ರೆಗಳನ್ನು ಕೇಳುವವರು ಸ್ವಲ್ಪವೂ ಪ್ರಯತ್ನವಿಲ್ಲದೆ ಸದ್ಗುಣಿಗಳಾಗುತ್ತಾರೆ. ಏಕೆಂದರೆ ಅದು ಅವರ ಸ್ವಭಾವವೇ ಆಗುತ್ತದೆ. ॥152॥

ಹಾಗಿದ್ದಲ್ಲಿ, ಶ್ರದ್ಧಾ ಭಕ್ತಿಗಳಿಂದ ಕೇಳಿದವರು ಮತ್ತೆಷ್ಟು ಒಳ್ಳೆಯದನ್ನು ಪಡೆಯಬಹುದು. ಓ ಶ್ರೋತೃಗಳೇ, ಕೇಳಿರಿ, ನಿಮ್ಮ ಸ್ವಹಿತಕ್ಕಾಗಿಯೇ ಯೋಚಿಸಿರಿ. ॥153॥

ಗುರುವಿನ ಚರಣಗಳಲ್ಲಿ ಭಕ್ತಿ ವೃದ್ಧಿಯಾಗುತ್ತದೆ ಮತ್ತು ಯಾವುದೇ ನೇಮನಿಷ್ಠೆಗಳೂ ಬೇಕಾಗುವುದಿಲ್ಲ. ಪರಮಾನಂದವು ದೊರಕುತ್ತದೆ. ॥154॥

ಒಮ್ಮೆ ಮನಸ್ಸನ್ನು ನಿರ್ಬಂಧಗೊಳಿಸಿದಲ್ಲಿ, ಕಥಾಶ್ರವಣದ ಆಕಾಂಕ್ಷೆ ಉತ್ಕಟವಾಗುತ್ತದೆ. ಇ೦ದ್ರಿಯಾಭಿಲಾಷೆಯ ಒಲವು ಸುಲಭವಾಗಿ ಬಿಡಿಸಿಕೊಳ್ಳುತ್ತದೆ ಮತ್ತು ಪರಮಾನಂದವು ಪ್ರಕಟವಾಗುತ್ತದೆ. ॥155॥

ಬಾಬಾರವರ ಈ ಮಧುರ ವಚನಗಳನ್ನು ಕೇಳಿ, ನಾನು ನನ್ನ ಮನಸ್ಸಿನಲ್ಲೇ ಯಾವ ಉದ್ಯೋಗವನ್ನೂ ಇನ್ನು ಮುಂದೆ ತೆಗೆದು ಕೊಳ್ಳಬಾರದೆಂದೂ ಮತ್ತು, ನನ್ನ ಉಳಿದ ಜೀವನವನ್ನು ಗುರುಸೇವೆಗೆ ಮೀಸಲಾಗಿಡಬೇಕೆಂದು ನಿರ್ಧರಿಸಿದೆನು. ॥156॥

ಆದರೆ ನನ್ನ ಮನಸ್ಸು ಬಾಬಾರವರ ಭರವಸೆಯ ಸುತ್ತ ಸುತ್ತುತ್ತಿತ್ತು - "ಅವನಿಗೆ ಊವ್ಯೋಗ ಸುಲಭವಾಗಿ ದೊರೆಯುತ್ತದೆ". ನನಗೆ ಅದರ ಬಗ್ಗೆ ರುಜುವಾತು ದೊರೆಯುವ ಬಗ್ಗೆ ಅಚ್ಚರಿಯಾಯಿತು. ॥157॥

ಬಾಬಾರವರ ಶಬ್ಧಗಳು ಎಂದಿಗೂ ಸುಳ್ಳಾಗುವುದಿಲ್ಲ. ಅವು ಎಂದಿಗೂ ನಡೆಯದಿರುವುದಿಲ್ಲ. ನಾನು ಮತ್ತೆ ಅದೇ ಜನರ ಮಧ್ಯೆ ಕೆಲಸಮಾಡಬೇಕಾಗಬಹುದು. ಆದರೆ ಅದು ನನಗೆ ಹಿತಕಾರಿಯಾಗಿರುವುದಿಲ್ಲ. ॥158॥

ಅಣ್ಣಾನು ಸ್ವಯಂಪ್ರೇರಿತನಾಗಿ ನನ್ನ ಬಗ್ಗೆ ಕೇಳಿದ್ದು ನಿಜವೇ. ನನಗೆ ಇಚ್ಚೆ ಇರಲಿಲ್ಲ. ಆದರೆ ನಮ್ಮ ಪ್ರಾರಬ್ಧಕರ್ಮವನ್ನು ನಾವೇ ಭೋಗಿಸಬೇಕಲ್ಲವೆ? ॥159॥ ನನ್ನ ಅಂತರಂಗದಲ್ಲಿ ನನ್ನ ಸಂಸಾರದ ನಿರ್ವಹಣೆಗಾಗಿ ಉದ್ಯೋಗ ಮಾಡಲು ಆಸೆ ಪಟ್ಟೆ. ಸಾಯಿಯು ಪರಿಹಾರ ರೂಪಕವಾಗಿ ಒಂದು ಸಿಹಿ ಗುಳಿಗೆಯನ್ನು ಔಷಧಿಯ ರೂಪದಲ್ಲಿ ನೀಡಿದರು. ॥160॥

ಆ ಔಷಧಿಯು ಸಿಹಿ ಇರುವುದೆಂಬ ನಿರೀಕ್ಷೆಯಲ್ಲಿ ನಾನು ಪಡೆದು ಭಾಗ್ಯವಂತನಾದೆ. ಅನಿರೀಕ್ಷಿತವಾಗಿ ಒಂದು ಉದ್ಯೋಗ ಬಂದಿತು, ನಾನು ಅದನ್ನು ಹಣದಾಸೆಗಾಗಿ ಸ್ವೀಕರಿಸಿದೆ. ॥161॥

ಅದು ಬೆಲ್ಲವಾದರೂ ಸಿಹಿ, ಸದಾಕಾಲ ಅದನ್ನೇ ತಿನ್ನುತ್ತಿದ್ದರೆ ಸಾಕಾಗುತ್ತದೆ. ನಾನು ಬಾಬಾರವರ ಉಪದೇಶಾಮೃತದಲ್ಲಿ ಅದ್ದಿದ ಬೆರಳುಗಳನ್ನು ನೆಕ್ಕುವುದನ್ನು ಆರಿಸಿಕೊಂಡೆನು. ॥162॥

ಆ ಉದ್ಯೋಗವು ಶಾಶ್ಚತವಾದುದಲ್ಲ. ಅದು ಅನಿರೀಕ್ಷಿತವಾಗಿ ಬಂದ ರೀತಿಯಲ್ಲೇ ನಿಂತು ಹೋಯಿತು. ಬಾಬಾರವರು ನನ್ನನ್ನು ಒಂದೇ ಸ್ಥಳದಲ್ಲಿರಿಸಿ ನಾನು ಮಾಡುತ್ತಿದ್ದುದರ ಆನಂದವನ್ನು ಅವರೊಡನಿದ್ದುಕೊಂಡೇ ಆಸ್ಪಾದಿಸುವಂತೆ ಮಾಡಿದರು. ॥163॥

ವಿಶ್ವವು ಪೂರ್ಣವಾಗಿ ಜಡ ಹಾಗೂ ಅಚರ ವಸ್ತುಗಳು ಪರಮಾತ್ಮನ ಸ್ವರೂಪವೇ ಆದ ಜೀವದಿಂದ ತುಂಬಿದೆ, ಆದರೆ ಪರಮಾತ್ಮನು

ಬ್ರಹ್ಮಾಂಡದ ಆಚೆಗೂ ಇದ್ದಾನೆ ಮತ್ತು ಪರಬ್ರಹ್ಮ ವಸ್ತು ಪರಾತ್ಪರನಾಗಿದ್ದಾನೆ ॥164॥

ಭಗವಂತನು ಜಗತ್ತಿಗಿಂತ ಬೇರೆ ಇಲ್ಲ. ಆದರೆ ಜಗತ್ತು ಭಗವಂತನಿಗಿಂತ ಬೇರೆಯೇ, ಏಕೆಂದರೆ ಜಗತ್ತು ಅವನಿಂದ ಚೇತನವನ್ನು ಸ್ವೀಕರಿಸುತ್ತದೆ ಮತ್ತು ಅದರಿಂದಲೇ ಅಸ್ತಿತ್ವದಲ್ಲಿದೆ. ಆದರೆ ಭಗವಂತನು ಜಗತ್ತಿಗೇ ಆಧಾರ. ॥165॥

ದಯಮಾಡಿ ಅರ್ಥಮಾಡಿಕೊಳ್ಳಿರಿ. ಭಗವಂತನ ಉಪಾಸನೆಗೆ ಎಂಟು ಮಾರ್ಗಗಳು ಇವೆ. ವಿಗ್ರಹಾರಾಧನೆ, ಯಜ್ಞ ಇತ್ಯಾದಿ. ಎಲ್ಲವನ್ನೂ ಹೋಲಿಸಿದಾಗ ಗುರುವೇ ಉತ್ತಮನು. ॥166॥

ಕೃಷ್ಣನು ತಾನೇ ಸ್ಪತಃ ಪೂರ್ಣ ಬ್ರಹ್ಮನು. ಆದರೂ ಸಹ ಅವನು ಸಾಂದೀಪನಿಯ ಚರಣಗಳಿಗೆ ಶಿರಬಾಗಿ ಹೇಳುವನು - "ಸದ್ಗುರುವಿನ ಸ್ಮರಣೆಯು ನಾರಾಯಣನಾದ ನನ್ನನ್ನು ಸಂತಸಗೊಳಿಸಲು ಸತ್ಯವಾದ ಮಾರ್ಗ. ॥167॥

"ಸದ್ಗುರುವಿನ ಭಜನೆಯು ನನ್ನನ್ನು ಸ್ತುತಿಮಾಡುವುದಕ್ಕಿಂತ ಸಹಸ್ರಪಾಲು ಶ್ರೇಷ್ಠವಾದದ್ದು, ಅದೇ ಸದ್ಗುರುವಿನ ಶ್ರೇಷ್ಠತೆ ಮತ್ತು ಗಹನವಾದ ಮಹಿಮೆ." ॥168॥

ಯಾರು ಗುರು ಸ್ಮರಣೆಯಿಂದ ವಿಮುಖನಾಗಿರುವನೋ ಅವನು ದುರದೃಷ್ಟವಂತ ಮತ್ತು ಪಾಪಿ. ಅವನು ದುಃಖಕರವಾದ ಜನನ ಮರಣದ ಚಕ್ರದಲ್ಲಿ ಸಿಲುಕಿ ತನ್ನ ನಾಶಕ್ಕೆ ತಾನೇ ಕಾರಣನಾಗುತ್ತಾನೆ. ॥169॥

ಹುಟ್ಟು ಮತ್ತು ಸಾವು, ಒಂದರ ನಂತರ ಮತ್ತೊಂದು. ಇದು ಅಂತ್ಯವಿಲ್ಲದ ಚಕ್ರವ್ಯೂಹ. ಆದ್ದರಿಂದ ಈ ಕತೆಗಳ ಶ್ರವಣ ಮಾಡಿ ಆತ್ಮೋದ್ಧಾರ ಮಾಡಿಕೊಳ್ಳಿರಿ. ॥170॥

ಸ೦ತರ ಮುಖದಿಂದ ಬರುವ ಸಹಜವಾಣಿಯೂ ಅವಿದ್ಯೆಯ ಬಂಧವನ್ನು ಹರಿದು ನಮ್ಮನ್ನು ಅತಿ ಸಂಕಟದಿಂದ ಪಾರುಮಾಡುತ್ತದೆ. ಆದುದರಿಂದ ನಾವೆಲ್ಲರೂ ಈ ಕತೆಗಳನ್ನು ಜೀರ್ಣಿಸಿಕೊಳ್ಳೋಣ. ॥171॥

ನಮಗೆ ಭವಿಷ್ಯ ಯಾವ ರೀತಿ ಇರಬಹುದೆಂಬುದು ತಿಳಿದಿಲ್ಲ ಅಂತಹ ಸಮಯಗಳಲ್ಲಿ ಯಾವ ರೀತಿಯ ಸಹಾಯ ದೊರೆಯುವುದೆಂಬುದು ತಿಳಿದಿಲ್ಲ. ಇದು ವಿಧಿಯ ಆಟ. ಪ್ರೀತಿಯ ಭಕ್ತನು ಕೇವಲ ಒಬ್ಬ ಪ್ರೇಕ್ಟಕನಷ್ಟೇ. ॥172॥

ಸಾಕಷ್ಟು ಬುದ್ಧಿಶಕ್ತಿ ಅಥವಾ ಯಾವುದೇ ವಿವೇಚನಾ ಶಕ್ತಿಯಿಲ್ಲದಿರುವಾಗ, ಸಾಯಿಯಂತಹ ಸಮರ್ಥ ಗುರುವು ನನಗೆ ದೊರಕಿದ ಅದೃಷ್ಟವನ್ನು ಹೇಗೆ ತಾನೇ ವಿವರಿಸಲಿ! ಆದೂ ಸಹ ಅವರ ಲೀಲೆ. ॥173॥

ಈ ಗ್ರಂಥದ ಪ್ರಯೋಜನವನ್ನು ಈಗಾಗಲೇ ನಿವೇದಿಸಿದ್ದೇನೆ ಮತ್ತು ಬಾಬಾರವರು ನೀಡಿರುವ ಆಶ್ಚಾಸನೆಗಳನ್ನೂ ಸಹ. ಅವರಿಂದಾಗಿ, ನಾನು, ನೀನು ಮತ್ತು ಉಪಾಸನೆ ಈ ಮೂರು ವಿಷಯಗಳ ಭಿನ್ನತೆಯ ಬಗ್ಗೆ ನಿರ್ದೇಶನ ದೊರಕಿತು. ॥174॥

ಈಗ ನೀವು ಶ್ರೋತೃಗಳು ಕೇಳುತ್ತಿರುವಿರಿ. ಮುಂದಿನ ಅಧ್ಯಾಯದಲ್ಲಿ ಸಾಯಿನಾಥ ಸಮರ್ಥರು ಶಿರಡಿಯಲ್ಲಿ ಯಾವ ರೀತಿ ಪ್ರಕಟಗೊ೦ಡರು ಎಂಬುದರ ಬಗ್ಗೆ ಆಲಿಸಿರಿ. ॥175॥

ನೀವೆಲ್ಲರೂ, ಯುವಕರು ಮತ್ತು ವೃದ್ಧರು, ಸರಳರು ಮತ್ತು ನಂಬಲರ್ಹರ, ನಿಮ್ಮ ಸಂಸಾರ ಜೀವನದ ಕೆಲವು ಕ್ಷಣಗಳನ್ನು ವಿನಿಯೋಗಿಸಿ ಸಾಯಿಯ ಅದ್ಭುತವಾದ ಚರಿತ್ರೆಯನ್ನು ಆಲಿಸಿರಿ. ॥176॥

ಸಾಯಿಯು ಸ್ವತಃ ಅವತಾರಪುರುಷರಾಗಿದ್ದರೂ, ನಿರ್ವಿಕಾರಿಯಾಗಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ. ಒಬ್ಬ ಗೃಹಸ್ಥನು ತನ್ನ ನಿತ್ಯ ಜೀವನದಲ್ಲಿ ವ್ಯವಹಾರಿಕ ಕಾರ್ಯಗಳಲ್ಲಿ ನಿಮಗ್ನನಾಗಿರುವಂತೆ, ಮಾಯೆಯು ನಿರ್ದೇಶಿಸಿದಂತೆ ನಟಿಸುತ್ತಾರೆ. ॥177॥

"ಸಮರ್ಥಸಾಯಿ" ಈ ಮಂತ್ರ ಜಪಿಸುತ್ತ ಅವರ ಪವಿತ್ರ ಚರಣಗಳಲ್ಲಿ ಸೇವಿಸಪವರಿಗೆ ಅವರು ಸೂತ್ರವನ್ನು, ಭಕ್ತರನ್ನು ಸಾಂಸಾರಿಕ ಬಂಧನದಿ೦ದ ಮುಕ್ತ ಮಾಡಲು ಬೇಕಾದಂತೆ ಆಡಿಸುತ್ತಾರೆ ಅವರ ಜೀವನ ಚರಿತ್ರೆಯು ಪವಿತ್ರವಾದುದು. ॥178॥

ಸಾರಾಂಶದಲ್ಲಿ, ಸಾಯಿ ಚರಿತ್ರೆಯು ಪವಿತ್ರವಾದುದು. ಯಾರು ಇದನ್ನು ವಾಚನ ಮಾಡುತ್ತಾರೋ, ಯಾರು ಆಲಿಸುತ್ತಾರೋ, ಅಂತಹವರ ಹೃದಯಗಳು ಶುದ್ಧೀಕರಣ ಹೊಂದುತ್ತದೆ. ಅಂತರಂಗಗಳು ಪವಿತ್ರವಾಗುತ್ತವೆ. ॥179॥

ಪ್ರೀತಿಯಿಂದ ಕಥಾ ಶ್ರವಣ ಮಾಡಿದಲ್ಲಿ ಎಲ್ಲಾ ಭವ ಬ೦ಧನಗಳೂ ಕಳಚಿಕೊಳ್ಳುವುವು. ಸಾಯಿ ಕೃಪಾಘನನು. ತನ್ನ ಕೃಪೆಯನ್ನು ಸುರಿಸುತ್ತಾನೆ. ಪರಿಷೂರ್ಣ ಶುದ್ಧ ಜ್ಞಾನವು ಪ್ರಕಟಗೊಳ್ಳುತ್ತದೆ. ॥180॥

ಆಲಸಿ, ಚಂಚಲ ಮನಸ್ಸು ಇಂದ್ರಿಯ ವಸ್ತುಗಳಿಗೆ ಅಂಟಿಕೊಳ್ಳುವುದು ಮತ್ತು ಜಿಹ್ವಾ ಚಾಪಲ್ಯ ಇವುಗಳು ಶ್ರವಣ ಮಾರ್ಗದಲ್ಲಿ ಅಡಚಣೆಯಾಗಿ ನಿಲ್ಲುತ್ತವೆ. ಅವುಗಳನ್ನು ದೂರಮಾಡಿದಾಗ ಮಾತ್ರ ಶ್ರವಣವು ಒಂದು ಸು೦ದರ ಅನುಭವ. ॥181॥

ವ್ರತಗಳನ್ನು ಪೂರ್ಣಗೊಳಿಸಲು ಉದ್ಯಾಪನೆ ಮಾಡಬೇಕಾಗಿಲ್ಲ. ದೇಹವನ್ನು ಹಿಂಸಿಸಲು ಉಪವಾಸ ಮಾಡಬೇಕಗಿಲ್ಲ. ತೀರ್ಥಯಾತ್ರೆ ಮಾಡಬೇಕಾಗಿಲ್ಲ. ಕಥಾ ಶ್ರವಣ ಮಾಡಿದರೆ ಸಾಕು. ॥182॥

ಅಕೃತ್ರಿಮವಾದ ಪ್ರೀತಿ ಮತ್ತು ಭಕ್ತಿಯ ತಿರುಳನ್ನು ಅರಿತಾಗ ಪರಮಾರ್ಥ ಸ್ಥಿತಿಯನ್ನು ಸುಲಭವಾಗಿ ಪಡೆಯಬಹುದು, ದ್ವೈತಭಾವವು ನಾಶವಾಗುತ್ತದೆ. ॥183॥

ನೀವು ಬೇರೆ ಯಾವುದೇ ರೀತಿಯ ಸಾಧನೆ ಮಾಡಬೇಕಿಲ್ಲ, ಸಾಯಿ ಸಚ್ಚರಿತೆಯ ಶ್ರವಣ ಮಾಡೋಣ. ಅದು ಎಲ್ಲಾ

ಸಂಚಿತ ಕರ್ಮಗಳನ್ನು, (ಹಿಂದಿನ ಮತ್ತು ಈಗಿನ ಜನ್ಮದ ಕರ್ಮಗಳು ಪುನರ್ಜನ್ಮಕ್ಕೆ ಕಾರಣವಾದುದು,) ನಾಶಮಾಡುತ್ತದೆ. ಇಲ್ಲದಿದ್ದರೆ ಅವು ಕ್ಷೀಣವಾಗುತ್ತವೆ. ॥184॥

ಒಬ್ಬ ಜಿಪುಣಾಗ್ರೇಸರನು ಎಲ್ಲಿದ್ದರೂ, ಅವನ ಮನಸ್ಸು ಹುದುಗಿರುವ ಸಂಪತ್ತಿನ ಮೇಲೆಯೇ ಹಗಲು ರಾತ್ರಿ ಇರುತ್ತದೆ. ಅದೇ ರೀತಿ ಸಾಯಿಯು ನಮ್ಮ ಮನಸ್ಸಿನಲ್ಲಿ ನೆಲೆಯಾಗಬೇಕು. ॥185॥


ಎಲ್ಲರಿಗೂ ಶುಭವಾಗಲಿ.


ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ಈ ಗ್ರಂಥ ರಚನೆಗೆ ನೀಡಿದ ಒಪ್ಪಿಗೆ" ಎಂಬ ಮೂರನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.


ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.


।ಸನ್ಮಂಗಳವಾಗಲಿ।




No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....