Wednesday, July 13, 2022

08 ಸಾಯಿ ಸಮರ್ಥರ ಅವತಾರ / Sri Sai Baba's incarnation

 ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

"ಸಾಯಿ ಸಮರ್ಥರ ಅವತಾರ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.


ಹಿಂದಿನ ಅಧ್ಯಾಯದಲ್ಲಿ ಬಾಬಾರವರು ಹಿ೦ದುವೂ ಅಲ್ಲ ಮುಸ್ಲಿಮರೂ ಅಲ್ಲ ಎಂಬುದನ್ನು ನಿರೂಪಿಸಲಾಗಿದೆ. ಬಾಬಾರವರ ವಾಸಸ್ಥಾನವಾದ ಶಿರಡಿಯು ಅದೆಷ್ಟು ಪುಣ್ಯ ಮಾಡಿದೆ? ॥1॥ ಪ್ರಾರಂಭದಲ್ಲಿ ಬಾಬಾರವರು ಒಬ್ಬ ಸಾಧಾರಣ ಬಾಲಕ. ಅನಂತರ ಅವರು ವಿಲಕ್ಷಣ ಫಕೀರರಾಗಿ ಬದಲಾದರು. ಮೊದಲು ಬಂಜರಾಗಿದ್ದ ಸ್ಥಳದಲ್ಲಿ ಹೇಗೆ ಒಂದು ಸುಂದರ ತೋಟವನ್ನು ಮಾಡಿದರು. ॥2॥ ಕಾಲಾಂತರದಲ್ಲಿ ಅದೇ ಜಾಗದಲ್ಲಿ ವಾಡಾ ಹೇಗೆ ಕಟ್ಟಲ್ಪಟ್ಟಿತು ಮತ್ತು ಬಾಬಾರವರ ಸಾಹಸಮಯ ಕ್ರಿಯೆಗಳಾದ ಖಂಡಯೋಗ, ಧೋತಿ-ಪೋತಿ ಇವುಗಳನ್ನು ನಿಮಗೆ ವಿವರಿಸಲಾಗಿದೆ. ॥3॥ ಇತರರ ಸೇವೆ ಮಾಡುತ್ತ ತಮ್ಮನ್ನೇ ಸವೆಸಿಕೊಳ್ಳುವಾಗ ಬಾಬಾರವರು ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದರು. ಸಾಯಿಯವರು ಎಲ್ಲ ಭಕ್ತರಿಗೂ ರಕ್ಷಕರಾಗಿದ್ದರು. ಅವುಗಳನ್ನು ಹೇಗೆ ವಿವರಿಸಲಿ? ॥4॥ ಈಗ ಮಾನವ ಜನ್ಮದ ಮಹತ್ವವನ್ನು ಕೇಳಿರಿ. ಸಾಯಿಯ ಭಿಕ್ಷುಕತನ, ಬಾಯಜಾ ಬಾಯಿಯ ಸಂತ ಸೇವೆ, ಸಾಯಿಗೆ ಊಟಮಾಡಿಸುವ ಅದ್ಭುತ ಇವುಗಳನ್ನು ಕೇಳಿರಿ. ॥5॥ ತಾತ್ಯಾ, ಬಾಬಾ ಮತ್ತು ಮ್ಹಾಳಸಾಪತಿಯವರು ಮೂವರೂ ಒಟ್ಟಿಗೆ ಮಸೀದಿಯಲ್ಲಿ ಹೇಗೆ ಮಲಗುತ್ತಿದ್ದರು, ಈ ಮಹಾತ್ಮರು ರಾಹತಾದಲ್ಲಿನ ಕುತಾಲಚಂದರ ಮನೆಗೆ ಹೇಗೆ ಹೋಗಿ ಬರುತ್ತಿದ್ದರು? ॥6॥


ಪ್ರತಿ ದಿನ ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಈ ರೀತಿ ವರ್ಷಗಳು ಉರುಳಿದವು. ಜೀವನದ ಅರ್ಧ ಸಮಯ ನಿದ್ದೆಯಲ್ಲಿ ಕಳೆಯುತ್ತದೆ. ಉಳಿದ ಕಾಲದಲ್ಲಿ ಶಾಂತವಾಗಿ ಸುಖ ಪಡೆಯುವುದಿಲ್ಲ. 7 ಮಗುವಾಗಿದ್ದಾಗ ಮಾನವನು ಆಟ ಪಾಠದಲ್ಲಿ ಕಳೆಯುತ್ತಾನೆ. ಯೌವನದಲ್ಲಿ ಹೆಣ್ಣಿನ ಮಾಯೆಯಲ್ಲಿ, ಅನಂತರ ವೃದ್ಧಾಪ್ಯದಲ್ಲಿ ದೇಹವು ಬಲಹೀನವಾಗುತ್ತದೆ. ಈ ರೀತಿ ಪ್ರತಿಯೊಬ್ಬನೂ ದುರ್ಬಲವಾಗಿಯೇ ಕಳೆಯುತ್ತಾನೆ. 8 ಹುಟ್ಟುವುದು, ದೇಹವನ್ನು ಬಲವಾಗಿಸುವುದು, ಉಸಿರಾಡುವುದು ಮತ್ತು ಜೀವಿತ ಕಾಲವನ್ನು ಹೆಚ್ಚುಮಾಡುವುದು ಇವುಗಳೇ ಜೀವನದ ಉದ್ದೇಶವೇನು? ॥9॥ ಪರಮಾತ್ಮನನ್ನು ತಲಪುವುದೇ ಮಾನವ ಜನ್ಮದ ಗುರಿ. ಇಲ್ಲದಿದ್ದಲ್ಲಿ ಮಾನವನಿಗೂ, ನಾಯಿ-ಹಂದಿ ಮುಂತಾದ ಪ್ರಾಣಿಗಳಿಗೂ ಇರುವ ವ್ಯತ್ಯಾಸವೇನು? ॥10॥ ನಾಯಿ, ಹಂದಿಗಳೂ ತಿನ್ನುತ್ತವೆ ಮತ್ತು ಯಥೇಚ್ಛವಾಗಿ ಸಂತಾನೊತ್ಪತ್ತಿ ಮಾಡುತ್ತವೆ. ಹಾಗಿರುವಾಗ ಇಬ್ಬರ ಜೀವನವೂ ಒಂದೇ ಇದ್ದಲ್ಲಿ ಮಾನವ ಜೀವನದ ಉತ್ಕೃಷ್ಟತೆಯೆಲ್ಲಿ? 11 ತಿನ್ನುವುದು, ಸಂತೋಷವಾಗಿರವುದು, ಸಂತತಿಹೊಂದುವುದು - ಈ ಮೂರಕ್ಕೆ ಮಾತ್ರ ಈ ಮಾನವ ಶರೀರವನ್ನು ಉಪಯೋಗಿಸುವುದಾದರೆ ಇದೇ ಜೀವನದ ಗುರಿಯಾದರೆ ಈ ಮಾನವ ಜನ್ಮವು ಅರ್ಥಹೀನ. ॥12॥ ಇಡೀ ಜೀವನವನ್ನೇ ಹಸಿವು, ನಿದ್ರೆ, ಭಯ, ಮೈಥುನ ಈ ನಾಲ್ಕು ಕಾರ್ಯಗಳಿಗೆ ಮಾತ್ರ ಮೀಸಲಿಟ್ಟಲ್ಲಿ ಮಾನವ ಜನ್ಮಕ್ಕೂ ಪ್ರಾಣಿಗಳಿಗೂ ವ್ಯತ್ಯಾಸವೇನು? ನಿನ್ನ ವಿವೇಚನೆಯನ್ನು ಉಪಯೋಗಿಸಿ ನೀನೇ ನಿರ್ಧರಿಸು. 13 ಮಾನವ ದೇಹದ ಸಾರ್ಥಕತೆಯು ಇದೊಂದೇ ಆದರೆ ಒಂದು ಮರದ ಜೀವನವೂ ಇದಕ್ಕಿಂತ ಕಡಿಮೆ ಬೆಲೆಯದಲ್ಲ. ತಿದಿ ಕೂಡಾ ಗಾಳಿಯನ್ನು ಹೊರಹಾಕುತ್ತದೆ. ನಾಯಿಗಳೂ ದೇಹವನ್ನು ಪೋಷಿಸುತ್ತವೆ. 14


ಮಾನವನು ಸ್ವತಂತ್ರ ಜೀವಿ. ಅವನು ನಿರ್ಭಯನು, ಸ್ವತಂತ್ರ ಮತ್ತು ಶಾಶ್ಚತ - ಈ ಜ್ಞಾನವನ್ನು ಪಡೆದಲ್ಲಿ ಅವನ ಜೀವನ ಸಾರ್ಥಕ ಎಂದು ಹೇಳಬಹುದು. ॥15 ಯಾವ ವ್ಯಕ್ತಿಯು ತಾನು ಎಲ್ಲಿಂದ ಬಂದಿದ್ದೇನೆ, ತಾನು ಯಾರು ಮತ್ತು ತನ್ನ ಜನ್ಮದ ಗುರಿಯೇನು, ಜೀವಿತದ ಉದ್ದೇಶವೇನು ಅವುಗಳನ್ನು ಅರಿತಾಗ ಜ್ಞಾನಿಯೆಂದು ಕರೆಯಬಹುದು. ಈ ಅರಿವು ಇಲ್ಲದಿದ್ದಲ್ಲಿ ಬೇರೆ ಎಲ್ಲವೂ ವ್ಯರ್ಥ. ॥16॥ ಎಣ್ಣೆ ದೀಪದಲ್ಲಿರುವ ಬತ್ತಿಯಂತೆ ಮೊದಲು ಮತ್ತು ಕೊನೆಯಲ್ಲಿ ಒಂದೇ ಸಮನೆ ಇರುತ್ತದೆ. ಆದರೆ ಆಗಾಗ ಮಿಣುಕು ಎನ್ನುತ್ತದೆ ಮತ್ತು ಪ್ರತಿಕ್ಷಣವೂ ಬದಲಾಗುತ್ತ ಇರುತ್ತದೆ. ಮಾನವ ದೇಹದಸ್ಥಿತಿಯೂ ಅದೇ ಆಗಿದೆ. ॥17॥ ಬಾಲ್ಯ, ಯೌವನ ಮತ್ತು ವೃದ್ಧಾಪ್ಯ ಇವುಗಳ ಮೂಲಕ ಪ್ರತಿಯೊಬ್ಬರೂ ಹಾದುಹೋಗುತ್ತಾರೆ. ಆದರೆ ಎಷ್ಟು ಸ್ವಾಭಾವಿಕವಾಗಿ ಅವು ಬಂದು ಹೋಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ॥18॥ ಈಗ ನೋಡಿದ್ದು ಅದೇ ಕ್ಷಣ ನಾಶವಾಗುತ್ತದೆ. ಆ ರೀತಿ ಅಸಂಖ್ಯಾತ ಹಂತಗಳು ಒಂದೇ ರೀತಿಯದ್ದಾಗಿ ಕಾಣುತ್ತವೆ. ಅದೇ ರೀತಿ ಒಂದು ಕ್ಷಣ ಅನುಭವಿಸಲು ಸಾಧ್ಯವಾದ ಈ ದೇಹ ಮತ್ತೊಂದು ಕ್ಷಣ ಅದೇ ರೀತಿಯಾಗಿ ಇರಲಾರದು. ॥19॥ ಈ ದೇಹವು ಅತಿ ಕ್ಷುಲ್ಲಕವಾದದ್ದು ಅದು ಕೊಳೆ, ಮಲ, ಅನಿಲಗಳು, ಕೀವು, ಎಂಜಲು ಇತ್ಯಾದಿಗಳನ್ನು ಹೊಂದಿರುತ್ತದೆ. ಮತ್ತು ಮೃತ್ಯು ಪ್ರತಿಕ್ಷಣ ಸುಳಿದಾಡುತ್ತಿರುತ್ತದೆ. ॥20॥ ಈ ಮಾನವ ಶರೀರ ಕ್ರಿಮಿಕೀಟಗಳ ತವರೂರು. ಅನೇಕ ರೋಗಗಳ ನೆಲೆವೀಡು. ಕ್ಷಣಿಕ ಮತ್ತು ಅಲ್ಪಸವಯದಲ್ಲೇ ನಾಶವಾಗುವಂತಹದು. ॥21 ಇದು ಒಂದು ಮಾಂಸ ಮಜ್ಜೆಗಳ ಶೇಖರಣೆ. ಮೂಳೆ ಮತ್ತು ಚರ್ಮದ ಪ೦ಜರ, ದುರ್ನಾತಹೊಡೆಯುವಮೂತ್ರದ ಗೊಬ್ಬರದ ಸಾಗಾಣಿಕೆ ಬಂಡಿ, ವಾಂತಿ ಮಾಡಲ್ಪಡುವ (ಕಫ ಮತ್ತು ಆಮದ) ಚೀಲ - ನಿಜವಾಗಿಯೂ ಇದು ಆತ್ಮೋನ್ನತಿಗೆ ಒಂದು ತಡೆಗೋಡೆ. ॥22॥ ಚರ್ಮ, ರಕ್ತ ಮತ್ತು ಮಾಂಸ, ಮಜ್ಜೆ, ಕೊಬ್ಬು, ರಕ್ತನಾಳಗಳು, ಮೂಳೆಗಳು, ವಾಯುಗಳು - ಇವೆಲ್ಲವೂ ದೇಹವನ್ನು ಅಶುದ್ಧಿಮಾಡಿ ಕೇವಲ ಅಲ್ಪಕಾಲದವರೆಗೆ

ಮಾತ್ರ ಇರಲು ಅನುವು ಮಾಡುತ್ತವೆ. ॥23॥ ಈ ಮಾನವ ಶರೀರವು ಪಾಪಭರಿತವಾಗಿ, ಅಶಾಶ್ವತವಾಗಿ ಮತ್ತು ಅಲ್ಪ ಕಾಲದವರೆಗೆ ಇರುವಂತಹುದಾಗಿದ್ದರೂ, ಈ ದೇಹಮಾತ್ರದಿಂದಲೇ ಪರಿಶುದ್ಧವಾದ ಪರಮಾತ್ಮನನ್ನು ತಲುಪಬಹುದು. ॥24 ಜನನ ಮರಣಗಳೆಂಬ ಚಕ್ರವು ಅವಿರತವಾಗಿರುತ್ತದೆ. ಮೃತ್ಯುವಿನ ಯೋಚನೆಯೂ ಸಹ ಭಯಂಕರವಾದುದು. ಈ ಜೀವನವು ಯಾವುದೇ ಸುಳಿವನ್ನೂ ಕೊಡದೇ ಅಂತ್ಯವಾಗುತ್ತದೆ. ॥25॥ ಯಾರು ಹುಟ್ಟುವರು, ಯಾರು ಸಾಯುವರು, ಹಗಲುಗಳೆಷ್ಟು. ರಾತ್ರಿಗಳೆಷ್ಟು ಇವುಗಳ ಲೆಕ್ಕವನ್ನು ಯಾರು ಇಟ್ಟಿರುತ್ತಾರೆ? ಮಾರ್ಕಂಡೇಯನಂತೆ ವರದಿಂದ ಜನಿಸಿದವರೂ ಮೃತ್ಯುದವಡೆಯಿಂದ ತಪ್ಪಿಸಿಕೊಳ್ಳಲಾರರು. ॥26॥ ಈ ರೀತಿ ಅಲ್ಬಾಯುವಾದ ಮಾನವ ಜೀವದಲ್ಲಿ ಧರ್ಮಗ್ರಂಥಗಳನ್ನು ಓದುವುದರಲ್ಲಿ ಮತ್ತು ಭಗವ೦ತನ ಚರಿತ್ರೆಗಳನ್ನು ಆಲಿಸುವುದರಲ್ಲಿ ಕಳೆದ ಸಮಯ ಮಾತ್ರ ಫಲಕಾರಿ ವತ್ತು ಇನ್ನಿತರೆ ರೀತಿಯಲ್ಲಿ ಕಳೆದ ಸಮಯ ವ್ಯರ್ಥ. ॥27॥ ಕೇವಲ ಇದು ಮಾತ್ರ ಜೀವನದಲ್ಲಿ ಅತ್ಯುತ್ತಮ ಮಾರ್ಗವೆಂದು ಅಚಲವಾದ ದೃಢನಿಶ್ಚಯ ಇರಬೇಕು. ಆದರೆ ಯಾರೂ ಸ್ವತಃ ತಾವೇ ಅನುಭವಿಸುವವರೆಗೆ ಇದನ್ನು ನಂಬುವುದಿಲ್ಲ. 28 ಆದರೆ ಅದರ ಅನುಭವಪಡೆಯಲು ಆಳವಾದ ಅಧ್ಯಯನ ಮಾಡಬೇಕು - ನಂತರವೇ ಆತ್ಮವು ಶಾಶ್ವತವಾದ ಆನಂದವನ್ನು ಪಡೆದು ಆ ಸಂಪತ್ತನ್ನು ಅನುಭವಿಸುತ್ತದೆ. ॥29॥


ಭಗವಂತನ ಕೃಪೆಯಿಂದ ಒಬ್ಬ ವ್ಯಕ್ತಿಯು ಸಪ್ತಸಾಗರ ಪರ್ಯ೦ತ ಜಾಗದ ಒಡೆಯನಾಗಿದ್ದರೂ, ಒಳ್ಳೆಯ ಪತ್ನಿ, ಮಗ, ಶ್ರೀಮಂತಿಕೆ, ಆಸ್ತಿ ಎಲ್ಲವೂ ಇದ್ದರೂ ಸಹ ಮನಸ್ಸಿನಲ್ಲೇ ಅತೃಪ್ತನಾಗಿರುತ್ತಾನೆ. 30 ಪ್ರತಿಯೊಬ್ಬನೂ ಶಾಶ್ವತ ಸುಖ, ಶಾಂತಿಗಳನ್ನು ತಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಅದರ ಬಗ್ಗೆ ಯೋಚಿಸುತ್ತಿರಬೇಕು. ಎಲ್ಲರಲ್ಲೂ ಇರುವ ಪರಮಾತ್ಮನ ಸೇವೆಮಾಡಬೇಕು. ಇದು ಜೀವನದಲ್ಲಿ ಅತ್ಯಂತ ಉಪಯುಕ್ತವಾದ ಶ್ರದ್ಧೆ. ॥31॥ ಈ ಮಾನವ ದೇಹವು ಚರ್ಮ, ಮಾಂಸ, ರಕ್ತ ಮತ್ತು ಮೂಳೆಗಳಿಂದ ಮಾಡಲ್ಪಟ್ಟಿದೆ. ಇದು ಪರಮಾರ್ಥದ ಮಾರ್ಗದಲ್ಲಿ ಅಡಚಣೆ. ಆದ್ದರಿಂದ ಅದಕ್ಕೆ ಅಂಟಿದ ಮೋಹವನ್ನು ಬಿಡು. 32 ಅದನ್ನು ಯಾವಾಗಲೂ ನಿನ್ನ ಸೇವಕನೆಂದು ಪರಿಗಣಿಸು. ಅದನ್ನು ಮುದ್ದಿಸಬೇಡ. ಎಂದಿಗೂ ಅದರ ಆಸೆಗಳಿಗೆ ಬಲಿಯಾಗಬೇಡ. ಅವುಗಳಿಂದ ನರಕಕ್ಕೆ ನೀನೇ ಮೆಟ್ಟಿಲು ತೋಡಿದಂತಾಗುತ್ತದೆ. 33॥ ಆಹಾರ ಮತ್ತು ವಸ್ತ್ರಗಳು ಕೇವಲ ಅದನ್ನ ಸ೦ರಕ್ಷಿಸಲು ಮಾತ್ರ ಬೇಕು. ಅದು ಅಶಾಶ್ಚತವೆಂಬುದನ್ನು ಅರಿತು ಕೇವಲ ಆತ್ಮೋದ್ಧಾರಕ್ಕಾಗಿ ಮತ್ತು ಜನನ ಮರಣಗಳೆಂಬ ಚಕ್ರದಿಂದ ಹೊರಬರಲು ಮಾತ್ರ ಉಪಯೋಗಿಸಲು ಜೋಪಾನಮಾಡಬೇಕು. ॥34॥ ಜನನ ಮತ್ತು ಮರಣಗಳೆರಡೂ ಅನರ್ಥಗಳೇ. ಪ್ರತಿಕ್ಷಣವೂ ನಾಶಕ್ಕೆ ದಾರಿ ಮಾಡಿಕೊಡುತ್ತವೆ. ಇದು ಒಂದು ಕ್ಷಣಿಕ ಸುಖವಾಗಿ ಆಜೀವಪರ್ಯಂತ ದು:ಖವನ್ನು ತರುವಂತಹುದು. ॥35 ಯಾವ ರೀತಿ ಬಳಕುವ ವಿದ್ಯುಲ್ಲತೆಯು ಕೇವಲ ಕ್ಷಣಿಕವಾಗಿ ಬಂದು ಮಾಯವಾಗುತ್ತದೆಯೋ, ಸಾಗರದ ಅಲೆಗಳು ಯಾವ ರೀತಿ ಕ್ಷಣಿಕವೋ, ಈ ದೇಹವೂ ಅದೇ ರೀತಿ ಕ್ಷಣಿಕವಾದುದು. ಆದುದರಿಂದ ಯೋಚಿಸಿರಿ. 36॥ ಈ ದೇಹ, ಮನೆ, ಮಕ್ಕಳು ಮತ್ತು ಪತ್ನಿ - ಇವೆಲ್ಲವೂ ನಾಶವಾಗುತ್ತವೆ. ಆದರೆ ತಮ್ಮ ತಂದೆ, ತಾಯಿಗಳ ದೇಹವನ್ನು ಹೆಗಲ ಮೇಲೆ ಹೊತ್ತುಕೊ೦ಡು ಹೋಗಿ ಬೀಳ್ಕೊಡುವಾಗಲೂ ಯಾರೂ ಇದನ್ನು ಆಲೋಚಿಸುವುದಿಲ್ಲ. 37॥ ಅವರು ಮೃತಹೊಂದಿದ್ದಾರೆ. ಈ ದಿನ ಆರೋಗ್ಯದಿಂದಿರುವವನೂ ಸಹ ಅವರ ನಂತರ ಸಾಯುತ್ತಾನೆ. ಪ್ರತಿಯೊಬ್ಬರೂ ಜನನ ಮರಣದ ಚಕ್ರದಲ್ಲಿ ಸಿಲುಕಿರುತ್ತಾರೆ. ಆದರೆ ಒಂದು ಕ್ಷಣವೂ ಇದನ್ನು ಹೇಗೆ ನಿಗ್ರಹಿಸಬಹುದೆಂದು ಯೋಚಿಸುವುದಿಲ್ಲ. 38 ಕುಟುಂಬದ ಉನ್ನತಿಯನ್ನು ನೋಡುತ್ತಲೇ ಬೇಗನೆ ಜೀವನವು ಕಳೆದು ಹೋಗುತ್ತದೆ. ಆದರೆ ತನ್ನ ಕರ್ತವ್ಯವನ್ನು ಎಂದಿಗೂ ಮರೆಯುವುದಿಲ್ಲ ಮತ್ತು ಜೀವನದ ಪರಿಮಿತಿಯನ್ನು ಲೆಕ್ಕಮಾಡಿರುತ್ತದೆ. 39॥ ಅಂತಿಮ ಕ್ಷಣ ಬಂದಾಗ ಅದು ಒಂದು ಅರೆಕ್ಷಣವೂ ಕಾಯುವುದಿಲ್ಲ. ಮೀನುಗಾರನು ಬಲೆಬೀಸಿದಾಗ ಮೀನುಗಳು ಸಿಕ್ಕಿಹಾಕಿಕೊಳ್ಳುವ ಹಾಗೆ ಜೀವನವು ಮೃತ್ಯುವಿನ ಸ್ಪರ್ಶದಲ್ಲಿ ವಿಲವಿಲ ಒದ್ದಾಡಿ ಜೀವನವು ಅಂತ್ಯವಾಗುತ್ತದೆ. 40 ಪೂರ್ವಜನ್ಮದ ಪುಣ್ಯಕಾರ್ಯಗಳ ಶೇಖರಣೆಯಿಂದಾಗಿ ಮತ್ತು ಪುಣ್ಯವನ್ನು ಒಟ್ಟುಮಾಡಿರುವುದರ ಫಲದಿಂದಾಗಿ ಮಾನವ ಜನ್ಮ ಪಡೆಯುತ್ತಾನೆ. ಆದ್ದರಿಂದ ಪ್ರತಿಯೊಂದು ಕ್ಷಣವನ್ನೂ ಒಳ್ಳೆಯ ರೀತಿ ಉಪಯೋಗಿಸಬೇಕು. 41 ಗಂಗೆಯನ್ನು ಶಿವನ ತಲೆಯಲ್ಲಿ ನಿಲ್ಲಿಸಲು ಮಾಡಿದಂತಹ ಭಗೀರಥ ಪ್ರಯತ್ನ ಮಾಡಿದರೂ ಮಾನವ ಜನ್ಮ ಪಡೆಯಲು ಸಾಧ್ಯವಿಲ್ಲ. ವಿಧಿವಶಾತ್‌ ಅನಿರೀಕ್ಷಿತವಾಗಿ ನಮಗೆ ಪಡೆಯಲು ಸಾಧ್ಯವಾಗಿದೆ. ಅದನ್ನು ನಿರ್ಲಕ್ಷ್ಯದಿಂದ ವ್ಯ್ಯರ್ಥಮಾಡಬಾರದು. 42 ಮುಂದಿನ ಜನ್ಮದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವೆನೆಂದು ಯೋಚಿಸುವವನು ಮೂರ್ಖನು. ಈ ಜೀವನ ತಪ್ಪಿ ಹೋದಮೇಲೆ ಅದೇ ರೀತಿ ನಡೆಯುವುದೆಂಬುದು ನಿಶ್ಚಿತವಿಲ್ಲ. ॥43॥


ಅನೇಕ ಪಾಪಿಗಳು ದೇಹಧಾರಿಗಳಾಗಿದ್ದಾರೆ. ಅವರ ಅನುವಂಶಿಕ ಉತ್ಪತ್ತಿ ಇಗಳು ಸೃಷ್ಟಿಯ ಅಂಗಗಳನ್ನು ತಲುಪಿ, ಆಗಿನ ಕರ್ಮಾನುಸಾರ ಒಂದು ಹೊಸ ಆಕಾರವನ್ನು ಪಡೆಯುತ್ತದೆ. ॥44॥ ಇನ್ನೂ ಅನೇಕ ಅಧಮಾಧಮರೂ, ನೀಚರೂ ಇದ್ದಾರೆ. ಅವರು ಮೊದಲು ಚಲಿಸುವಂತವರಾಗಿ ಅನಂತರ ಅಚಲ(ಜಡ)ರಾಗಿ ತಮ್ಮ ಕರ್ಮಗಳು ಹಾಗೂ ಯೋಚನೆಗಳಿಗನುಸಾರವಾಗಿ ಹುಟ್ಟುತ್ತಾರೆ. ॥45 ಯಾವ ರೀತಿ ಒಬ್ಬನು ಜ್ಞಾನವನ್ನು ಸಂಪಾದನೆ ಮಾಡುತ್ತಾನೋ ಅಥವಾ ಕರ್ಮಗಳನ್ನು ಆಚರಿಸುತ್ತಾನೋ ಅವುಗಳಿಗನುಗುಣವಾಗಿ ದೇಹವನ್ನು ಪಡೆಯುತ್ತಾನೆ. ಇದು.ಶೃತಿಗಳಲ್ಲಿ ನಮೂದಿಸಿರುವ ವಿಷಯ. 46॥ "ಪ್ರತಿಯೊಬ್ಬನೂ. ತನ್ನ ಪ್ರಜ್ಞೆಗನುಸಾರವಾಗಿ ಜನ್ಮ ತಾಳುತ್ತಾನೆ" ಎಂದು ಕರುಣಾಮಯಿ ಶೃತಿಮಾತೆ ಹೇಳುತ್ತಾಳೆ. ಆದುದರಿಂದ ಅವನ ಪ್ರಜ್ಞೆಯ ಭಂಡಾರಕ್ಕೆ ಅನುಗುಣವಾಗಿ ಆತ್ಮವು ಜನ್ಮತಾಳುತ್ತದೆ. ॥47॥ ಪರಮಾತ್ಮನ ಲೀಲೆಗಳು ಬುದ್ಧಿಗೆ ಮೀರಿದವು. ಅವುಗಳನ್ನು ಸಂಪೂರ್ಣವಾಗಿ ಅರಿಯುವುದು ಅಶಕ್ಯ. ಆದರೆ ಮಾನವನು ಪುಣ್ಯವಂತನೆಂದು ಪರಿಗಣಿಸಬೇಕು. ಅವನು ಪರಮಾತ್ಮನ ಅಂಶವನ್ನೂ ಅರಿಯಬಲ್ಲನು. ॥48॥ ನರದೇಹವು ದೊರಕುವುದು ಪರಮ ಭಾಗ್ಯ. ಅದರಲ್ಲಿ ಬ್ರಾಹ್ಮಣನಾಗಿ ಹುಟ್ಟುವುದು ಮಹತ್ಪುಣ್ಯವು. ಪರಮಾತ್ಮನ ಕೃಪೆಯಿಂದ ಸಾಯಿ ಚರಣಗಳನ್ನು ಪಡೆಯುವುದು ಇನ್ನೂ ಅಲಭ್ಯ ಇವೆಲ್ಲವೂ ಅತ್ಯಂತ ವಿರಳ. ॥49॥ ಬೇರೆಬೇರೆ ರೀತಿಯ ಜೀವಿಗಳಿದ್ದಾಗ್ಯೂ ಮಾನವ ಜನ್ಮವು ಎಲ್ಲಕ್ಕಿಂತಲೂ ಪರಮೋತ್ತಮ. ನಾವು ಎಲ್ಲಿಂದ ಬಂದಿರುವೆವು? ನಮ್ಮ ಸೃಷ್ಟಿಕರ್ತ ಯಾರು? ಇಂತಹ ಪ್ರಶ್ನೆಗಳಿಗೆ ವಿವೇಕಿಯಾದ ಮಾನವನ ಮನಸ್ಸು ಮಾತ್ರ ಉತ್ತರಿಸಲು ಸಾಧ್ಯ. ॥50॥ ಇನ್ನಿತರ ಯೋನಿಜರಿಗೆ ಈ ಜ್ಞಾನವಿರುವುದಿಲ್ಲ. ಅವು ಹುಟ್ಟುತ್ತವೆ, ಸಾಯುತ್ತವೆ. ಅವು ಭೂತ, ವರ್ತಮಾನ ಮತ್ತು ಭವಿಷ್ಯತ್ತನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಹಾಗೂ ಭಗವ೦ತನ ಅಸ್ತಿತ್ವವನ್ನೂ ಅರಿಯಲಾರವು. 51 ಆದುದರಿಂದಲೇ ಪರಮಾತ್ಮನು, ಮಾನವನ ಸೃಷ್ಟಿಯಾದ ನಂತರ ಮಾನವನು ಇಂದ್ರಿಯನಿಗ್ರಹ ಮತ್ತು ವೈರಾಗ್ಯದಿಂದ ಅವನನ್ನು ಪೂಜಿಸಬಲ್ಲನೆಂದು ಯೋಚಿಸಿ ಆನಂದಸಂಪನ್ನ ನಾದನು. ॥52॥ ವಿನಾಶಿಯಾದ ಮಾನವನು ಸಾಧನೆಯನ್ನು ಮಾಡಿದರೆ ಶಾಶ್ವತವಾದ ಪರಮಾತ್ಮನನ್ನು ಪಡೆಯುತ್ತಾನೆ. ಸಾಧನೆಯಿಂದ ಪರಮಾತ್ಮನನ್ನು ಪಡೆಯಲು ನರದೇಹಕ್ಕಿಂತ ಬೇರೆ ಉಪಕರಣ ಇನ್ನೊಂದಿಲ್ಲ. 53


ಒಬ್ಬ ಹಾವಾಡಿಗನು ಬಹಳ ಚತುರನಾಗಿರುತ್ತಾನೆ. ಅವನು ಅಜ್ಞಾನಿಗಳ ಮುಂದೆ ಆಟ ತೋರಿಸುವುದಿಲ್ಲ. ಅದಕ್ಕಾಗಿ ಕುಶಲ ಪ್ರೇಕ್ಷಕರು ಅವನನ್ನು ಹೊಗಳಬಲ್ಲಂತಹವರಿಗಾಗಿ ಕಾಯುತ್ತಾನೆ. ॥54 ಅದೇ ರೀತಿ ಅಸಂಖ್ಯಾತ ಕ್ರಿಮಿ, ಕೀಟಗಳು, ಪ್ರಾಣಿಗಳು, ಪಕ್ಷಿಗಳು, ಗಿಡಗಳು, ಇವುಗಳನ್ನು ಸೃಷ್ಟಿಸಿದ ಮೇಲೆ ಪರಮಾತ್ಮನಿಗೆ ಆಶ್ಚರ್ಯವಾಯಿತು ಮತ್ತು ನಿರಾಶೆಯೂ ಆಯಿತು. ಅವನಿಗೆ ತನ್ನಸೃಷ್ಠಿ ಪ್ವಿಕಾರ್ಯವು ಅರ್ಥಹೀನವಾಗಿ ಕಂಡಿತು. ॥55 ಈ ಅನಂತ, ವಿಶಾಲ ವಿಶ್ವದಲ್ಲಿ ಸೂರ್ಯ, ಚಂದ್ರ ಮತ್ತು ಅಸಂಖ್ಯಾತ ತಾರೆಗಳಿದ್ದವು. ಆದರೆ ಸೃಷ್ಟಿಕರ್ತನ ಸೃಷ್ಟಿಯ ಬಗ್ಗೆ ಒಂದು ಕ್ಷಣವಾದರೂ ಅಚ್ಚರಿಯನ್ನು ವ್ಯಕ್ತಪಡಿಸುವವರು ಯಾರೂ ಇರಲಿಲ್ಲ. ॥56॥ ಒಂದೇ ಒಂದು ಜೀವಿಯೂ ಭಗವಂತನ ಇಡೀ ಸೃಷ್ಟಿಯ ಹಿಂದಿನ ಉದ್ದೇಶದ ಬಗ್ಗೆ ಯೋಚಿಸ ಹೋಗಲಿಲ್ಲ. ॥57॥ "ನನ್ನ ಇಡೀ ಸೃಷ್ಟಿಯೇ ನಿರರ್ಥಕ. ಹರಿತ ಬುದ್ಧಿಶಕ್ತಿಯಿಂದ ನನ್ನ ಸೃಷ್ಟಿಯ ಅಗಾಧತೆ ಮತ್ತು ವಿಶಾಲತೆಯನ್ನು ಪ್ರಶಂಸೆ ಮಾಡುವಂತಹ ಜೀವಿಯನ್ನು ಸೃಷ್ಟಿಸುವವರೆಗೆ ಇದು ನಿಷ್ಟಯೋಜಕ". ॥58 ಈ ರೀತಿ ಸ್ವತಃ ತಾನೇ ಯೋಚಿಸಿ ಪರಮಾತ್ಮನು ಮಾನವನನ್ನು ಸೃಷ್ಟಿಸಿದನು. ಅವನಿಗೆ ತನ್ನ ವಿವೇಚನಾಶಕ್ತಿಯಿಂದ ತನ್ನ ಶಕ್ತಿಯನ್ನು ಅರಿಯಬಹುದಾಯಿತು. ॥59॥ ನನ್ನ ವೈಭವವು ಅಗಾಧ, ನನ್ನ ಶಕ್ತಿಯು ಅಪೂರ್ವ, ಈ ಸೃಷ್ಟಿಯು ನನ್ನ ಮಾಯೆಯ ಫಲ. ಆಶ್ಚರ್ಯಚಕಿತನಾಗಿ ಅವನು 'ಇದೆಲ್ಲವೂ ನನ್ನ ಮಾಯೆಯ ಆಟ' ಎಂದು ತಿಳಿದುಕೊಳ್ಳುತ್ತಾನೆ. ॥60॥ ಅವನು ಮಾತ್ರ ಜ್ಞಾನ ಸಂಪಾದನೆ ಮಾಡಬಲ್ಲನು. ಅವನೊಬ್ಬನು ಮಾತ್ರ ನನ್ನಲ್ಲಿ ಏಕಾಗ್ರಚಿತ್ತನಾಗಬಹುದು ಮತ್ತು ಅರಿಯಬಲ್ಲನು. ಅವನು ಮಾತ್ರ ಅದರಿಂದ ಲಾಭಪಡೆಯಬಲ್ಲನು - ಆಗ ಮಾತ್ರ ಸೃಷ್ಟಿಕಾರ್ಯದ ನಾಟಕ ಸಂಪೂರ್ಣವಾಗುತ್ತದೆ. ॥61॥ ನನ್ನ ಸೃಷ್ಟಿಯ ನಾಟಕದ ಸಾರ್ಥಕತೆಯು ಪ್ರೇಕ್ಷಕರ ಆನಂದ ಸಂಪನ್ನತೆಯಲ್ಲಿದೆ. ಮಾನವನು ನನ್ನ ರಾಜ್ಯವನ್ನೂ ಮತ್ತು ನಾನೊಬ್ಬನೇ ಜಗನ್ನಿಯಾಮಕ ಮತ್ತು ಜಗನ್ನಿಯಂತ್ರಕ ಎಂಬುದನ್ನು ಅರಿತಾಗ ಅತ್ಯಂತ ಕೃತಾರ್ಥನಾಗುತ್ತಾನೆ. 62॥


ಜೀವನದಲ್ಲಿ ಕೇವಲ ಕಾಮ್ಯಕ ಕರ್ಮಗಳನ್ನು ಮಾಡಿ ಅದರಿಂದ ದ್ರವ್ಯಾರ್ಜನೆ ಮತ್ತು ಶರೀರ ಪೋಷಣೆಯು ಅಲ್ಲ. ಜೀವವು ಬದುಕಿರುವವರೆಗೆ ತತ್ವಜ್ಞಾನ ಸಂಪಾದನೆ ಮಾಡಬೇಕು. ಅದರಿಂದಲೇ ಜೀವನದ ಸಫಲತೆ. ॥63॥ ತತ್ವಚ್ಞಾನವೇ ಅದ್ವೈತದ ಭಾವ. ಅದೇ ಉಪನಿಷತ್‌ಗಳಲ್ಲಿ ವಿವರಿಸಿರುವ ಬ್ರಹ್ಮಜ್ಞಾನ. ಅದೇ ಪರಮಾತ್ಮನ ಉಪಾಸನೆ. ಅದೇ ಭಕ್ತರಿಗೆ ನಿಜವಾದ ಪರಬ್ರಹ್ಮ ॥64॥ ಗುರು ಮತ್ತು ಬ್ರಹ್ಮ ಎರಡೂ ಬೇರೆ ಬೇರೆ ಅಲ್ಲ. ಅದ್ವೈತ ಜ್ಞಾನವನ್ನು ಅರಿತವನು ಭಕ್ತಿಯನ್ನು ಸಾಧನೆಮಾಡಿದಂತೆ. ಈ ಅರಿವು ಮಾಯೆಯನ್ನು ಜಯಿಸಲು ಸುಲಭೋಪಾಯ. ॥65 ಯಾರು ಶ್ರದ್ಧಾವಂತರೊ, ಜ್ಞಾನ ಸಂಪಾದನೆ ಮಾಡಿದ್ದಾರೋ, ವೈರಾಗ್ಯಭಾವವನ್ನು ಹೊಂದಿದ್ದಾರೋ, ಆತ್ಮತತ್ತ್ವವನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೋ, ಅವರು ನಿಜವಾಗಿಯೂ ಅದೃಷ್ಟವಂತ ಭಕ್ತರು. ॥66॥ ತಮ್ಮ ಸ್ವಸ್ವರೂಪವನ್ನು ಅರಿಯದೆ ಇರುವವರು ತಮ್ಮ ಅಜ್ಞಾನವನ್ನು ದೂರಮಾಡದೆ, ತಾವೇ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆಂದು ನಂಬಿದ್ದಾರೋ, ಅವರಿಗೆ ಇದು ಒಂದು ವಿಲಕ್ಷಣವಾದ ಪ್ರತಿಬಂಧವಾಗಿ ಸಾಧನೆಯಲ್ಲಿ ಅಡ್ಡಿಪಡಿಸುತ್ತದೆ. ॥67॥ ಜ್ಞಾನ ಮತ್ತು ಅಜ್ಞಾನ ಇವೆರಡೂ ಅವಿದ್ಯೆ ಎಂಬ ವಿಕಾರದಿ೦ದ ಜನಿಸಿದವು. ಒಂದು ಮುಳ್ಳಿನಿಂದ ಇನ್ನೊಂದು ಮುಳ್ಳನ್ನು ತೆಗೆಯುವ ರೀತಿಯಲ್ಲಿ ನೀವು ಅವೆರಡನ್ನೂ ತ್ಯಜಿಸಬೇಕು. ॥68॥ ಜ್ಞಾನದಿಂದ ಅಜ್ಞಾನವನ್ನು ದೂರಮಾಡಿ. ಜ್ಞಾನ-ಅಜ್ಞಾನ ಇವೆರಡಕ್ಕೂ ಅತೀತರಾಗಿ ಹೋಗಿ, ನಿರ್ಮಲ ಸ್ವಸ್ಟರೂಪಾವಸ್ಥೆಯನ್ನು ತಲುಪಿರಿ. ಇದೊಂದೇ ಮಾನವಜನ್ಮದ ಗುರಿ. 69॥ ಪರಿಶುದ್ಧವಾದ ಜ್ಞಾನವು ವಿಷಯವಾಸನಾ ರೂಪಿ ಅಶುದ್ಧವಾದ ಎಣ್ಣೆಯು ಮುಗಿಯುವವರೆಗೆ ಅಜ್ಞಾನದ ಕರಿಕಿಟ್ಟವನ್ನು ತೆಗೆದು ಅಹಂಕಾರವೆಂಬ ದಪ್ಪನಾದ ಬತ್ತಿಯು ನಾಶವಾಗುವವರೆಗೆ ಪ್ರಕಾಶಮಾನವಾಗಿ ಪ್ರಜ್ಞಲಿಸುವುದಿಲ್ಲ. 70॥ ಈ ನರದೇಹದಿಂದ ಮಾಡುವ ಕರ್ಮಗಳು ನಿವಾರ್ಯ ಅಥವಾ ಅನಿವಾರ್ಯವಾಗಲಿ. ಬುದ್ಧಿ, ಕರ್ತವ್ಯದ ಪರಿಮಿತಿಯೊಳಪಟ್ಟು ನಿಶ್ಚಯವಾದ ಕರ್ತವ್ಯವೆಂದು ತಿಳಿದು ನಿರ್ವಹಿಸಬೇಕು. 71 ಯಾರಿಗಾದರೂ ಯಾವುದೇ ಕೆಲಸವಿಲ್ಲದಿದ್ದಲ್ಲಿ, ಸಂಪತ್ತು ಮತ್ತ ಶಾಂತಿಗಳನ್ನು ಅನುಭವಿಸಬೇಕು. ಇಲ್ಲದಿದ್ದರೆ ರಾಮನಾಮವನ್ನು ಭಜಿಸುತ್ತ ಆಶಾರಹಿತನಾಗಿ ನಿಶ್ಚಿಂತೆಯಿಂದ ಇರಬೇಕು. ॥72॥


ಶರೀರ, ಇಂದ್ರಿಯ, ಮನಸ್ಸು ಮತ್ತು ಬುದ್ಧಿ ಆತ್ಮಬೋದೆಗೆ ಅಡಚಣೆಗಳು. ಆದರೆ ಈ ಉಪಾಧಿಗಳಿಂದಲೇ ಆತ್ಮವು ಈ ಸಂಸಾರವನ್ನು ಅಥವಾ ಅಸ್ತಿತ್ವವನ್ನು ಅನುಭವಿಸಬಹುದು. ಆತ್ಮವು ತಾನೇ ಅನಾದಿ ಮತ್ತು ನಿರ್ಮೋಹವಾದದ್ದು 73 ಹೊರನೋಟಕ್ಕೆ ಮಾತ್ರ ಆತ್ಮವು ಸುಖಪಡುವಂತೆ ತೋರುತ್ತದೆ. ಏಕೆಂದರೆ ಸ್ವಭಾವತಃ ಅದು ಸುಖಿಸುವುದೂ ಇಲ್ಲ. ಇದನ್ನು ತರ್ಕ ವಿಜ್ಞಾನದಿಂದ ಮತ್ತು ಊಹೆಗಳಿಂದ ಪ್ರಮಾಣೀಕರಿಸಲಾಗಿದೆ. 74 ಜೀವನದ ನಿಜಧರ್ಮವನ್ನು ಅರ್ಥಮಾಡಿಕೊಂಡು, ಮಾಡಬೇಕಾದ ಕರ್ತವ್ಯ ಕರ್ಮಗಳನ್ನು ಬುದ್ಧಿಗೆ ವಹಿಸಿ ಬುದ್ಧಿಯ ಧರ್ಮವನ್ನು ಅದಕ್ಕೇ ಬಿಡಿ. ನಿಷ್ಕಾಮವಾಗಿ ಕರ್ಮಗಳನ್ನು ಮಾಡಬೇಕು. ॥75॥ ಪ್ರತಿಯೊಬ್ಬರ ಧಾರ್ಮಿಕ ಕರ್ತವ್ಯಗಳನ್ನು ಯಾವಾಗಲೂ ಅಂತರಾತ್ಮದ ಧ್ಯಾನದಲ್ಲಿ ಲೀನಮಾಡಬೇಕು. ಇದೇ ನಮ್ಮ ಜನ್ಮದ ಗುರಿ. ಅದರಿಂದಲೇ ಅಂತರಂಗದ ಸಮಾಧಾನ ಪಡೆಯಬಹುದು. 76 ಜೀವನದ ನಾಲ್ಕು ಪುರುಷಾರ್ಥಗಳನ್ನು ಸಾಧಿಸಲು ಮಾನವ ಜನ್ಮವನ್ನು ಬಿಟ್ಟು ಬೇರೆ ಜನ್ಮದಲ್ಲಿ ಯಾವುದೇ ರೀತಿಯಿಂದ ಸಾಧ್ಯವಿಲ್ಲ. ಯಾವ ಪುರುಷನು ಅವುಗಳನ್ನು ಅಭ್ಯಸಿಸಿ ಪರಿಣತನಾಗುವನೋ ಅವನು ಪರಮಾತ್ಮನನ್ನು ಪಡೆಯುತ್ತಾನೆ. 77 ಆದುದರಿಂದ, ದೇಹವು ನಾಶವಾಗುವವರೆಗೆ ಆತ್ಮಜ್ಞಾನವನ್ನು ಪಡೆಯಲು ಪ್ರಯತ್ನಿಸು. ಮಾನವ ಜನ್ಮದ ಒಂದು ಕ್ಷಣವನ್ನೂ ವ್ಯರ್ಥಗೊಳಿಸಬೇಡ. 78॥ ಸಮುದ್ರದಲ್ಲಿರುವ ಉಪ್ಪುನೀರು ಮೋಡವಾಗಿ ಆಕಾಶದಿಂದ ಕೆಳಗೆ ಬೀಳುವಾಗ ಅಮೃತದಂತೆ ಹೇಗೆ ಮಧುರವಾಗಿರುತ್ತದೆಯೋ ಹಾಗೆಯೇ ಗುರುವಿನ ಪದತಲದಲ್ಲಿ ಆನಂದವನ್ನು ಅನುಭವಿಸಬಹುದು. ॥79 ಅದೇ ರೀತಿ ಮನುಷ್ಯ ಜನ್ಮದಲ್ಲಿ ಗುರುವಿಲ್ಲದೆ ಆನಂದಸ್ಥಿತಿಯನ್ನು ಪಡೆಯಲು ಆಗುವುದಿಲ್ಲ. ಗುರುವು ಅವಶ್ಯವಾದ ಸಹಾಯಹಸ್ತ ನೀಡಿದಾಗ ಮಾತ್ರವೇ ಜೀವಿಗಳು

ಉದ್ಧಾರವಾಗುವುವು. 80॥


ಪವಿತ್ರವಾದ ಮಂತ್ರಗಳು, ತೀರ್ಥಗಳು, ದೇವತೆಗಳು, ಬ್ರಾಹ್ಮಣರು, ಜ್ಯೋತಿಷಿಗಳು ಮತ್ತು ಔಷಧಿಕಾರರು- ಈ ಸಾಲಿನಲ್ಲಿ ಏಳನೆಯವರಾಗಿರುವರು - ಇವರೆಲ್ಲರಲ್ಲೂ ಶ್ರದ್ಧೆ ಇರಲೇ ಬೇಕು. ॥81 ಇವುಗಳಲ್ಲೆಲ್ಲ ಎಷ್ಟರಮಟ್ಟಿಗೆ ಶ್ರದ್ಧೆ ಇದೆಯೋ ಅಷ್ಟರಮಟ್ಟಿಗೆ ಮಾತ್ರ ಸಫಲತೆ ಸಿಗುತ್ತದೆ. ಮನಸ್ಸಿನ ತೀವ್ರತೆಯ ಆಧಾರದ ಮೇಲೆ ಸಫಲತೆಯೂ ಬದಲಾಗುತ್ತದೆ. ॥82॥ ಈ ಸಂಸಾರಕ್ಕೆ ಬಂಧಿಸಲ್ಪಟ್ಟವರಾಗಿ ಸಂತರು ಅವರ ಹೃದಯದಲ್ಲಿ ಮೋಕ್ಷದ ಬಗ್ಗೆ ಆಸೆ ಹುಟ್ಟಿಸುತ್ತಾರೆ. ಮೋಕ್ಷ ಪಡೆಯುವ ಸಾಧಕರಿಗೆ ಮೋಕ್ಷವನ್ನು ದಯಪಾಲಿಸುತ್ತಾರೆ. ಸಂತರು ಪರರಿಗೆ ಉಪಕಾರಮಾಡುವುದಕ್ಕೋಸ್ಕರವಾಗಿಯೇ ಅಗ್ರಾಹ್ಯ ಸ್ಥಿತಿಯಿಂದ ಅಸ್ತಿತ್ವ ಪಡೆಯುತ್ತಾರೆ. 83॥ ಪ್ರವಚನಗಳಿಂದ, ಪುರಾಣಗಳನ್ನು ಓದುವುದರಿಂದ ಯಾವುದನ್ನು ಸಾಧಿಸಲು ಅಸಾಧ್ಯವೋ ಅದನ್ನು ಒಬ್ಬ ಸದ್ಗುರುವಿನ ನಡವಳಿಕೆಯಿ೦ದ ಅರ್ಥಮಾಡಿಕೊಳ್ಳಬಹುದು. ಗುರುವಿನ ಮನೋವೃತ್ತಿ ಮತ್ತು ಉದಾಹರಣೆಗಳೇ ಅವರ ಮೌನವಾದ ಉಪದೇಶಗಳು. ॥84


ಕ್ಷಮೆ, ಶಾಂತಿ, ನಿರ್ಮೋಹತ್ವ, ದಯೆ ಅವುಗಳನ್ನು ಅಭ್ಯಸಿಸುವವರು ಮತ್ತು ಪರೋಪಕಾರ ಮಾಡುವವರು, ಅಹಂಭಾವವನ್ನು ತೊರೆದವರು ಮತ್ತು ಇಂದ್ರಿಯನಿಗ್ರಹ ಶಕ್ತಿಯುಳ್ಳ ವ್ಯಕ್ತಿಗಳನ್ನು ಕಾಣುವುದು ಬಹು ಅಪರೂಪ. 85 ಪುಸ್ತಕಗಳನ್ನು ಓದಿ ಸಾಧಿಸದೆ ಇರುವುದನ್ನು ಶಾಸ್ತ್ರಗಳಲ್ಲಿ ತಿಳಿಸಿರುವ ಮೇಲೆ ಹೇಳಿದ ಸದ್ಗುಣಗಳನ್ನು

ಅಭ್ಯಾಸಮಾಡುವ ವ್ಯಕ್ತಿಯನ್ನು ಅವಲೋಕಿಸುವುದರಿಂದಲೇ ಪಡೆಯಬಹುದು. ಅಸಂಖ್ಯಾತ ನಕ್ಷತ್ರಗಳು ಮಾಡಲಾರದೆ ಇರುವುದನ್ನು ಕೇವಲ ಸೂರ್ಯನೊಬ್ಬನೇ ಮಾಡಬಲ್ಲನು. 86 ಇದೇ ರೀತಿ, ಆದರ್ಶ ಸಂತರು ತಮ್ಮ ಅನೇಕಾನೇಕ ಅಸಾಧಾರಣ ಕ್ರಿಯೆಗಳಿಂದ ಭವಸಾಗರಕ್ಕೆ ಕಟ್ಟುಬಿದ್ದವರನ್ನು ಬಿಡಿಸುತ್ತಾರೆ ಮತ್ತು ಪರಮಾನಂದದ ಸ್ಥಿತಿಗೆ ಉತ್ಪತ್ತಿಸ್ಥಾನವಾಗಿರುತ್ತಾರೆ. ॥87॥ ಅಂತಹ ಮಹಾನ್‌ ಸಂತರಲ್ಲಿ ಸಾಯಿಯು ಒಬ್ಬರು. ದೈವೀಗುಣಗಳಿಂದ ಮತ್ತು ಪರಿಪೂರ್ಣತೆಯಿಂದ ಕೂಡಿದವರು. ಆದರೆ ಅವರು ಫಕೀರರ ರೀತಿಯಲ್ಲಿ ಜೀವಿಸುತ್ತಿದ್ದರು. ಸದಾ ಸ್ವಸ್ವರೂಪದಲ್ಲಿ ನೆಲೆಸಿದ್ದವರು. ॥88॥ ಸಮತ್ವದಲ್ಲಿ ಅವಿಚ್ಛಿನ್ನ ಶ್ರದ್ಧೆಯುಳ್ಳವರು. ನಾನು ಮತ್ತು ನನ್ನದು ಎಂಬ ಷದಗಳನ್ನು ಎಂದಿಗೂ ಉಚ್ಚರಿಸದವರು. ಎಲ್ಲಾ ಜೀವಿಗಳಲ್ಲೂ ಕರುಣೆ ತೋರಿದವರು. ಅವರು ಈ ಭೂಮಿಯಮೇಲಿನ ಭಗವಂತನ ಅವತಾರ. 89 ಅವರು ಸುಖದಿಂದ ಸಂತೋಷಪಡುವುದಾಗಲೀ, ಕಷ್ಟ ಬಂದಾಗ ದುಃಖಿಸುವುದಾಗಲೀ ಇರಲಿಲ್ಲ. ಅವರಿಗೆ ಬಡವ ಶ್ರೀಮ೦ತರಿಬ್ಬರೂ ಒಂದೇ. ಇದು ಬಹಳ ಅಸ್ಪಾಭಾವಿಕವಲ್ಲವೇ? ॥90॥ ಯಾರ ಹುಬ್ಬಿನ ಚಲನೆಯೇ ದರಿದ್ರರನ್ನು ಕ್ಷಣಾರ್ಧದಲ್ಲಿ ಶ್ರೀಮಂತನನ್ನಾಗಿ ಮಾಡುವುದೋ ಅವರು ಮನೆಯಿಂದ ಮನೆಗೆ ಜೋಳಿಗೆ ಹಿಡಿದು ಭಿಕ್ಷಕ್ಕೆ ಹೋಗುತ್ತಿದ್ದರು. ॥91 ಯಾರ ಮನೆಗಳ ಬಾಗಿಲಿಗೆ ಬಾಬಾರವರು ಭಿಕ್ಷೆಗೆ ಹೋಗಿ ಕೈ ಚಾಚಿ, 'ಓ ಮಹಿಳೆಯರೇ! ಒಂದು ಕಾಲು ಭಾಗ ಭಾಕರಿ(ರೊಟ್ಟಿ)ಯನ್ನು ನೀಡಿ' ಎಂದು ಬೇಡುತ್ತಿದ್ದರೋ ಅಂತವರೇ ಧನ್ಯರು. ॥92॥ ಲೋಟವನ್ನು ಒಂದು ಕೈಯಲ್ಲಿ ಹಿಡಿದು ಜೋಳಿಗೆಯನ್ನು ಮತ್ತೊಂದರಲ್ಲಿ ಹಿಡಿದು ಅವರೇ ಬಾಗಿಲಿನಿಂದ ಬಾಗಿಲಿಗೆ ಕೆಲವು ಮನೆಗಳಿಗೆ ನಿತ್ಯವೂ ಹೋಗುತ್ತಿದ್ದರು. 93॥ ತರಕಾರಿ, ಸಾ೦ಬಾರು, ಹಾಲು

ಮತ್ತು ಮಜ್ಜಿಗೆ ಎಲ್ಲವನ್ನೂ ಜನರಿಂದ ಲೋಟಕ್ಕೆ ಹಾಕಿಸಿಕೊಳ್ಳುತ್ತಿದ್ದರು. ನೋಡಿ, ಅವರು ತಿನ್ನುವ ವೈಖರಿಯಿಂದ ಅಚ್ಚರಿಗೊಳ್ಳುವಿರಿ. 94 ಬೇಯಿಸಿದ ಅನ್ನ ಅಥವಾ ರೊಟ್ಟಗಾಗಿ ಜೋಳಿಗೆಯನ್ನು ಹಿಡಿಯುವರು. ನೀರಾಗಿರುವ ಖಾದ್ಯವಸ್ತುಗಳನ್ನು ಲೋಟದಲ್ಲಿ ಸಂಗ್ರಹಿಸುತ್ತಿದ್ದರು. ॥95 ಅವರಿಗೆ ವಿವಿಧ ರೀತಿಯ ಆಹಾರ ಪದಾರ್ಥಗಳ ಬಗ್ಗೆ ಬೇರೆ ಬೇರೆಯಾಗಿ ರುಚಿ ನೋಡಲು ಆಸೆ ಹುಟ್ಟಲು ಹೇಗೆ ಸಾಧ್ಯ? ಅವರ ನಾಲಿಗೆಗೆ ರುಚಿಯ ವಾಸನೆ ಎಂದೂ ತಿಳಿಯದೆ ಇರುವಾಗ ಅವರಿಗೆ ಆಸೆ ಹುಟ್ಟಲು ಹೇಗೆ ಸಾಧ್ಯ? ॥96॥ ಅವರು ಜೋಳಿಗೆಯಲ್ಲಿ ಬೀಳುವ ಆಹಾರದಿಂದ

ತೃಪ್ತರಾಗುತ್ತಿದ್ದರು. ಅದು ರುಚಿಯಾಗಿದೆಯೋ ಇಲ್ಲವೋ ಎಂಬುದನ್ನು ಅರಿಯರು. ಏಕೆಂದರೆ ಅವರ ನಾಲಿಗೆ ಎಂದಿಗೂ ಭೇದಭಾವ ಮಾಡಲಿಲ್ಲ. 97 ಬೆಳಗಿನ ಸಮಯ ಅವರು ನೆರೆಹೊರೆಯವರಿಂದ ಭಿಕ್ಷೆ ಬೇಡುತ್ತಿದ್ದರು. ಅದನ್ನು ತಮ್ಮ ಜೋಳಿಗೆಯಲ್ಲಿ ತುಂಬಿಸಿಕೊಳ್ಳುತ್ತಿದ್ದರು ಮತ್ತು ಅದರಿಂದ ತೃಪ್ತರಾಗುತ್ತಿದ್ದರು. ॥98॥ ಅದನ್ನೂ ಪ್ರತಿನಿತ್ಯವೂ ಮಾಡುತ್ತಿರಲಿಲ್ಲ. ಅವರಿಗೆ ಹೋಗಬೇಕೆನಿಸಿದಾಗ ಹೋಗುತ್ತಿದ್ದರು. ಕೆಲವು ವೇಳೆ ಅವರು ಹಳ್ಳಿಯ ಒಳಗೆ ಹೋಗುತ್ತಿದ್ದರು. ಒಂದು ದಿನದಲ್ಲಿ ಹನ್ನೆರಡು ಬಾರಿಯೂ ಬೇಡಿದ್ದಾರೆ. ॥99॥ ಈ ರೀತಿ ಭಿಕ್ಷಿಬೇಡಿ ತಂದ ಆಹಾರವನ್ನು

ಒಂದು ಮಡಕೆಯಲ್ಲಿ ಹಾಕಿ ಮಸೀದಿಯಲ್ಲಿಡುತ್ತಿದ್ದರು. ಕಾಗೆ ನಾಯಿಗಳೂ ಅದರಿಂದ ತಿನ್ನುತ್ತಿದ್ದವು. ಅವರು ಎಂದಿಗೂವುಗಳನ್ನು ಓಡಿಸುತ್ತಿರಲಿಲ್ಲ. ॥100॥ ಮಸೀದಿಯನ್ನು ಮತ್ತು ಮುಂದಿನ ಬಯಲನ್ನು ಗುಡಿಸುತ್ತಿದ್ದ ಹೆಂಗಸರು 10-12 ರೊಟ್ಟಿಗಳನ್ನು ಮಡಕೆಯಿಂದ ಮನೆಗೆ ತೆಗೆದು ಕೊಂಡುಹೋಗುತ್ತಿದ್ದರು. ಆದರೆ ಯಾರೂ ತಡೆಯುತ್ತಿರಲಿಲ್ಲ. 101 ಯಾರು ನಾಯಿ ಮತ್ತು ಬೆಕ್ಕುಗಳನ್ನು ಕನಸಿನಲ್ಲಿಯೂ ತಿರಸ್ಕರಿಸಿ ಓಡಿಸುತ್ತಿರಲಿಲ್ಲವೋ ಅವರು ಬಡವರನ್ನು ದೀನರನ್ನು ಹೇಗೆ ತಿರಸ್ಕರಿಸುವರು? ಅವರ ಜೀವನವೇ ಧನ್ಯ! 102





ಪ್ರಾರಂಭದಲ್ಲಿ ಅವರನ್ನು ಜನರು ಒಬ್ಬ ಹುಚ್ಚು ಫಕೀರನೆಂದು ತಿಳಿದಿದ್ದರು. ಭಿಕ್ಷೆ ಬೇಡಿ ಹೊಟ್ಟೆತು೦ಬಿಸುವವನು ಯಾವ ವೈಭವವನ್ನು ಹೊಂದಲು ಸಾಧ್ಯ? 103 ಆದರೆ ಫಕೀರನು ಸ್ವಭಾವತಃ ದಯಾಳುವಾಗಿದ್ದನು. ಯಾರಿಂದಲೂ ಏನನ್ನೂ ಪ್ರತಿಯಾಗಿ ಪಡೆಯುವ ಅಪೇಕ್ದೆಯಿರಲಿಲ್ಲ ಪ್ರೇಮಸ್ಪರೂಪನು, ಬಾಹ್ಯದಲ್ಲಿ ಚಂಚಲನಂತೆ ಕಂಡರೂ ಅ೦ತರಂಗದಲ್ಲಿ ಸ್ಥಿತಪ್ರಜ್ಞನಾಗಿದ್ದನು. ಅವನ ವರ್ತನೆ ವರ್ಣನಾತೀತ. 104 ಅ೦ತಹ ಸಾಮಾನ್ಯವಾದ ಹಳ್ಳಿಯಲ್ಲಿ

ಕೆಲವು ಭಾಗ್ಯವಂತರಿದ್ದರು. ಅವರೂ ದಯಾಳುವಾಗಿದ್ದರು. ಅವರು ಅವನನ್ನು ಸಂತರೆಂದು ಗೌರವಿಸಿದರು. ॥105ತಾತ್ಯಾ ಕೋತೆಯ ತಾಯಿ, ಬಾಯಜಾ ಬಾಯಿ, ಕೆಲವು ರೊಟ್ಟಿಗಳನ್ನು ಒಂದು ಬುಟ್ಟಿಯಲ್ಲಿಟ್ಟುಕೊಂಡು ತಲೆಯಮೇಲೆ ಹೊತ್ತುಕೊಂಡು ಮಧ್ಯಾಹ್ನದ ವೇಳೆ ಕಾಡಿನೊಳಗೆ ಹೋಗುತ್ತಿದ್ದಳು. 106॥ ಅವಳು ಮೈಲಿಗಟ್ಟಲೆ ನಡೆಯುತ್ತ, ಹುಚ್ಚು ಫಕೀರನನ್ನು ಹುಡುಕುತ್ತ, ದಟ್ಟವಾದ ಹೊದೆಗಳ ನಡುವೆ ಪಾದಚಾರಿಯಾಗಿ ನಡೆಯುತ್ತ ಬಾಬಾರವರನ್ನು ಕಂಡೊಡನೆ ಕಾಲಿಗೆ ನಮಸ್ಕರಿಸುತ್ತಿದ್ದಳು. 107॥ ಅವಳ ಭಕ್ತಿಯನ್ನು ವಿವರಿಸಲು ಯಾರಿಗೆ ಸಾಧ್ಯ? ರಸವಿಲ್ಲದ ಅಥವಾ ರಸಸಹಿತವಾದ ತರಕಾರಿ ಪಲ್ಯವನ್ನು, ರೊಟ್ಟಿಯನ್ನೂ ಬಾಬಾರವರಿಗೆ ಕೈಯಾರೆ ತಿನ್ನಿಸುತ್ತಿದ್ದಳು. ಕಾಡಿನಲ್ಲಿ ಮಧ್ಯಾಹ್ನ ಅಥವಾ ಅಪರಾಹ್ನದ ನಂತರ ತಿನ್ನಿಸುವಳು. ॥108 ಬಾಬಾರವರೂ ಸಹ ಅವಳ ಈ ಭಕ್ತಿಯನ್ನು ತಮ್ಮ ಜೀವಿತಕಾಲದಲ್ಲಿ ಮರೆಯಲಿಲ್ಲ. ಭೂತಕಾಲವನ್ನೂ ನೆನಪಿನಲ್ಲಿಟ್ಟುಕೊಂಡು ಅವರು ಅವಳಿಗೆ ಒಬ್ಬ ಭಾಗ್ಯವಂತನಾದ ಪುತ್ರನನ್ನು ಕರುಣಿಸಿದರು. ॥109॥ ಪತಿ, ಪತ್ನಿಯರಿಬ್ಬರಿಗೂ ಫಕೀರನಲ್ಲಿ ಅಪಾರ ಶ್ರದ್ಧೆ ಇತ್ತು. ಆ ಫಕೀರನೇ ಅವರಿಗೆ ದೇವರು. ಭಗವ೦ತನು ಭಕ್ತನ ಶ್ರದ್ಧೆಯಲ್ಲಿ ಅರುತ್ತಾನೆ ಅಲ್ಲವೇ? ॥110॥ ಫಕೀರನು ಧ್ಯಾನಸ್ಥನಾಗಿರುತ್ತಿದ್ದನು.

ಆಗ ಬಾಯಜಾ ಬಾಯಿ ಎಲೆಯನ್ನು ಹರಡಿ ಬುಟ್ಟಿಯಿ೦ದ ಆಹಾರವನ್ನು ತೆಗೆದು ಬಡಿಸುತ್ತಿದ್ದಳು. ಮತ್ತು ತಿನ್ನಿಸಲು ಪ್ರಯತ್ನಿಸುತ್ತಿದ್ದಳು. 111॥ “ಫಕೀರತನ ನಿಜವಾದ ರಾಜತ್ವ, ಫಕೀರತನ ಮಾತ್ರ ಎಂದೆಂದೂ ಇರುವುದು. ಐಶ್ವರ್ಯವು ಹೇಗೆ ಬೇಗ ಅದೃಶ್ಯವಾಗುತ್ತದೆ ನೋಡು!” ಬಾಬಾ ಇದನ್ನು ಸದಾ ಹೇಳುತ್ತಿದ್ದರು. 112 ಅನ೦ತರ ಬಾಬಾರವರು ಕಾಡನ್ನು ದೂರ ಮಾಡಿದರು. ಅವರು ಹಳ್ಳಿಯಲ್ಲೇ ವಾಸಮಾಡಲು ಪ್ರಾರಂಭಿಸಿದರು. ಮಸೀದಿಯಲ್ಲಿ ಆಹಾರ ಸ್ವೀಕರಿಸುತ್ತಿದ್ದರು. ಹೀಗೆ ತಾಯಿಯ ತೊಂದರೆಗಳಿಗೆ ಅಂತ್ಯ ಹಾಡಿದರು. ॥113॥ ಅಲ್ಲಿಂದೀಚೆಗೆ ಇಬ್ಬರಿಂದಲೂ

ಪ್ರಾರಂಭವಾದ ಈ ಅಭ್ಯಾಸ ಮುಂದುವರೆಯಿತು. ಅನಂತರ ತಾತ್ಯಾ ಅದನ್ನು ಮುಂದುವರೆಸಿದನು. ॥114





ಯಾರಹೃದಯದಲ್ಲಿ ವಾಸುದೇವನು ಶಾಶ್ಚತವಾಗಿ ನೆಲೆಸುತ್ತಾನೋ ಅಂತಹವರು ಭಾಗ್ಯವಂತರು. ಅಂತಹವರ ಸಹವಾಸದಲ್ಲಿ ಪರಮಾನಂದವನ್ನು ಅನುಭವಿಸಿದಂತಹ ಭಕ್ತರೇ ಧನ್ಯರು. 115 ತಾತ್ಯಾ ನಿಜವಾಗಿಯೂ ಭಾಗ್ಯಶಾಲಿ ಮತ್ತು ಮ್ಹಾಳಸಾಪತಿಯು ಮಹಾಧರ್ಮಿಷ್ಟನು. ಅವರಿಬ್ಬರೂ ಸಮನಾಗಿ ಜಬಾರವರ ಸಹವಾಸವನ್ನು ಅನುಭವಿಸಿದರು. ॥116॥ ತಾತ್ಯಾ ಮತ್ತು ಮ್ಹಾಳಸಾಪತಿಯು ಸಹ ಮಸೀದಿಯಲ್ಲಿ ಮಲಗುತ್ತಿದ್ದರು. ಬಾಬಾರವರಿಗೆ ಅವರಿಬ್ಬರ ಮೇಲೆ ಸಮನಾದ ಅನುಪಮ ಪ್ರೀತಿ. 117॥ ಪೂರ್ವ, ಪಶ್ಚಿಮ ಮತ್ತು ಉತ್ತರ - ಈ ರೀತಿ ಮೂವರ ತಲೆಗಳು ಮೂರುದಿಕ್ಕಿನಲ್ಲಿ - ಪಾದಗಳು ಮಾತ್ರ ಒಬ್ಬರದೊಬ್ಬರಿಗೆ ತಗಲುತ್ತ ಮಧ್ಯದಲ್ಲಿ ಇರುತ್ತಿದ್ದವು. ॥118॥ ತಮ್ಮ ಹಾಸಿಗೆಗಳನ್ನು ಈ ರೀತಿ ಹಾಸಿಕೊ೦ಡು ಅವರು ಎಲ್ಲಾ ವಿಷಯಗಳ ಬಗ್ಗೆಯೂ ಮಾತಾಡುತ್ತಿದ್ದರು. ಒಬ್ಬರು ತೂಕಡಿಸಿದರೂ ಮತ್ತೊಬ್ಬರು ಅವರನ್ನು ಎಚ್ಚರಿಸುತ್ತಿದ್ದರು. ॥119॥ ತಾತ್ಯಾ ಗೊರಕೆ ಹೊಡೆಯಲು ಪ್ರಾರಂಭಿಸಿದರೆ ಬಾಬಾರವರು ತಕ್ಷಣವೇ ಎದ್ದು ಅವನನ್ನು ತಿರುಗಿಸಿ ತಲೆ ಒತ್ತುವರು. ॥120॥ ಮ್ಹಾಳಸಾಪತಿಯ ಸಹಾಯದೊಂದಿಗೆ ತಾತ್ಯಾನನ್ನು ತಬ್ಬಿ ಹಿಡಿದು ಅವನ ಚರಣಗಳನ್ನು ಒತ್ತುತ್ತಿದ್ದರು ಮತ್ತು ಬೆನ್ನಿಗೆ ಮಾಲೀಶು ಮಾಡುತ್ತಿದ್ದರು. ॥121 ಈ ರೀತಿ, 14 ವರ್ಷಗಳ ಕಾಲ, ತಾತ್ಯಾ ಮಸೀದಿಯಲ್ಲಿ ಬಾಬಾರವರ ಹತ್ತಿರ ಮಲಗುತ್ತಿದ್ದನು. ಅವರು ಅಲ್ಲಿ ಕಳೆದಂತಹ ಆ ದಿನಗಳು ಅದೆಷ್ಟು ಪುಣ್ಯಪ್ರದವಾಗಿದ್ದವು. ಅವುಗಳ ನೆನಪೇ ಇಂದಿಗೂ ಮಾಸದಾಗಿದೆ. ॥122॥ ತಂದೆ ತಾಯಿಗಳನ್ನು ಮನೆಯಲ್ಲಿಯೇ ಬಿಟ್ಟು ತಾತ್ಯಾ ಮಸೀದಿಯಲ್ಲಿ ಬಾಬಾರವರ ಜತೆ ಮಲಗುತ್ತಿದ್ದರೂ ಅದು ಅವನಿಗೆ ಅತಿ ಪ್ರಿಯವಾಗಿತ್ತು. ಆ ಪ್ರೀತಿಯನ್ನು ಹೇಗೆ ಅಳೆಯಲು ಸಾಧ್ಯ? ಆ ಅನುಗ್ರಹವನ್ನು ಬೆಲೆಕಟ್ಟಲು ಯಾರಿಗೆ ಸಾಧ್ಯ? 123॥ ಅನಂತರ ತಂದೆಯವರು ಕಾಲವಾದರು. ತಾತ್ಯಾ ಮನೆಗೆಲಸಗಳಲ್ಲಿ ಮಗ್ನನಾದನು. ಮದುವೆಯಾಗಿ ಗೃಹಸ್ಥನಾದನು. ಆಗ ತನ್ನ ಮನೆಯಲ್ಲಿಯೇ ಮಲಗಲು ಪ್ರಾರಂಭಿಸಿದನು. ॥124


ಅದು ಏನೇ ಇರಲಿ. ಶ್ರದ್ಧೆಯು ಪರಿಷೂರ್ಣವಾಗಿರಬೇಕು. ಹೃದಯ ಮತ್ತು ಮನಸ್ಸು ಒಂದಾದರೆ ಮಾತ್ರ ಸಾಯಿಯು ಅನುಭವವನ್ನು ಕೊಡಬಹುದು. ಕರೆಯದೆಯೇ ಭಕ್ತರ ಬಳಿ ನಿಲ್ಲುತ್ತಾರೆ. ಇದರಿಂದ ಭಕ್ತರಿಗೆ ಅಚ್ಚರಿಯುಂಟಾಗುತ್ತದೆ. ॥125 ಇದೇ ರೀತಿ, ರಾಹತಾದಲ್ಲಿ ಕುಶಾಲ ಚಂದ್‌ ಎನ್ನುವ ಒಬ್ಬ ಪ್ರಖ್ಯಾತ ವ್ಯಕ್ತಿ ಇದ್ದನು. ಅವನು ಬಾಬಾರವರ ಶ್ರೀಮಂತ ಭಕ್ತನಾಗಿದ್ದ ಮತ್ತು ಪಟ್ಟಣದಲ್ಲಿ ವರ್ತಕನಾಗಿದ್ದನು. ॥126॥ ಪ್ರಸಿದ್ಧನಾದ ಗಣಪತ್‌ ಕೋತೆ ಪಾಟೀಲ ಬಾಬಾರವರ ಅತ್ಯಂತ ಪ್ರೀತಿಯ ಭಕ್ತ. ಅದೇ ರೀತಿ ಕುಶಾಲ ಚಂದನೂ ಬಾಬಾರವರ ಪ್ರಿಯ ಭಕ್ತನು. ॥127॥ ಜಾತಿಯಲ್ಲಿ ಮಾರವಾಡಿಯಾಗಿದ್ದರೂ ಅವನಿಗೆ ಬಾಬಾರವರನ್ನು ಕಂಡರೆ ಬಹಳ ಇಷ್ಟ ಆಗಾಗ್ಗೆ ಇಬ್ಬರೂ

ಪರಸ್ಪರ ಭೇಟಿಯಾಗುತ್ತಿದ್ದರು. ಈ ಭೇಟಿಗಳಿಂದ ಸಂತೋಷಷಡುತ್ತಿದ್ದರು. 128 ದೈವೇಚ್ಛೆಯಂತೆ ಕಾಲಾನಂತರ ಹಿರಿಯನಾದ ಸೇಠ್‌ಜೀಯು ಮರಣಹೊಂದಿದನು. ಹಾಗಿದ್ದೂ ಬಾಬಾರವರು ಬಂಧನಗಳನ್ನು ಮುರಿಯಲಿಲ್ಲ. ಬದಲಾಗಿ ಅವರ ಪ್ರೀತಿ ಇಮ್ಮಡಿಯಾಯಿತು. 129॥ ಆನಂತರ ಕುಶಾಲಚಂದನ ಮೇಲಿನ ಬಾಬಾರವರ ಪ್ರೀತಿ ಹೆಚ್ಚಿತು. ಮರಣ ಸಮಯದವರೆಗೆ ದಿನಂಪ್ರತಿ ಅವರು ಅವನ ಒಳ್ಳೆಯದನ್ನೇ ಬಯಸುತ್ತಿದ್ದರು. ॥130॥ ಕೆಲವು ವೇಳೆ ಎತ್ತಿನ ಗಾಡಿ ಮತ್ತು ಕೆಲವು ಸಲ ಟಾಂಗಾದಲ್ಲಿ ಬಾಬಾರವರು ತಮ್ಮ ಸ್ನೇಹಿತನ ಸಂಗಡ 1 ವರೆ ಮೈಲಿ ದೂರದಲ್ಲಿರುವ

ರಾಹತಾಗೆ ಹೋಗುತ್ತಿದ್ದರು. ॥131 ಹಳ್ಳಿಯ ಜನರು ತಾಳ ಮದ್ದಳೆಗಳ ಜೊತೆಯಲ್ಲಿ ಸ್ವಾಗತಿಸಲು ಮುಂದೆ ಬರುತ್ತಿದ್ದರು. ಬಾಬಾ ಅವರನ್ನು ಸರಹದ್ದಿನಲ್ಲಿ ಭೇಟಿಯಾಗುತ್ತಿದ್ದರು. ಪ್ರೀತಿಯಿ೦ದ ಬಾಬಾರವರಿಗೆ ಪ್ರಣಾಮಗಳನ್ನು ಸಲ್ಲಿಸುತ್ತಿದ್ದರು. ॥132॥ ಅಲ್ಲಿಂದ ಅವರು ಬಾಬಾರವರನ್ನು ವಿಧಿವತ್ತಾಗಿ ಬಹಳ ಪ್ರೀತಿಯಿಂದ ಆನಂದೋತ್ಸಾಹದಿಂದ ಸಂಗೀತದ ಸಹಿತ ಕರೆದೊಯ್ಯುತ್ತಿದ್ದರು. ॥133॥ ಕುಶಾಲ ಚಂದನು ಅನ೦ತರ ಬಾಬಾರವರನ್ನು ತಮ್ಮ ಮನೆಗೆ ಕರೆದೊಯ್ಯುತ್ತಿದ್ದನು. ಸ್ವಲ್ಪ ಉಪಾಹಾರವನ್ನು ಬಡಿಸಿ ಸ್ಪಲ್ಪ ಕಾಲ ಆರಾಮವಾಗಿ ಕುಳಿತುಕೊಳ್ಳುತ್ತಿದ್ದರು. 134

ಅನಂತರ ಅವರು ತಮ್ಮ ಗತಕಾಲದ ನೆನಪುಗಳನ್ನು ಮಾಡಿಕೊಂಡು ವಾರ್ತಾಲಾಪ ನಡೆಸುತ್ತಿದ್ದರು. ಅವರು ಪರಸ್ಪರ  ಅನುಭವಿಸುವ ಸಂತೋಷವನ್ನು ವಿವರಿಸಲು ಸಾಧ್ಯವಿಲ್ಲ. ॥135॥ ಈ ರೀತಿಯಾಗಿ ವಿಶ್ರಮಿಸಿದ ನಂತರ ಫಲಾಹಾರ ಮತ್ತು ಅಲ್ಟಾಹಾರಗಳನ್ನು ಸೇವಿಸಿ ಬಾಬಾರವರು ಸಂತೃಪ್ತಿಯಿಂದ ತಾವು ಬಂದ ಮಾರ್ಗದಲ್ಲೇ ಹಿಂತಿರುಗುತ್ತಿದ್ದರು. ॥136॥


ಒಂದು ಕಡೆ ರಾಹತಾ, ಮತ್ತೊಂದು ಕಡೆ ನೀಮಗಾಂವ ಇತ್ತು. ಇವೆರಡರ ಮಧ್ಯೆ ಶಿರಡಿಯು ಸಣ್ಣ ಜನಸಾ೦ದ್ರತೆಯುಳ್ಳ ಒಂದು ಸಣ್ಣ ಗ್ರಾಮ. ॥137॥ ಆದರೆ ಕೇಂದ್ರಸ್ಥಾನದಿಂದ ಅವರು ಭೌತಿಕವಾಗಿ ಈ ಎರಡು ಹಳ್ಳಿಗಳನ್ನು ಬಿಟ್ಟರೆ ಮತ್ತೆಲ್ಲಿಗೂ ಹೋಗಲಿಲ್ಲ. ಆದರೂ ಅವರಿಗೆ ಎಲ್ಲ ಮೂಲೆಗಳ ಅರಿವಿತ್ತು. 138 ಅವರು ಎಲ್ಲಿಗೂ ಪ್ರಯಾಣ ಮಾಡುತ್ತಿರಲಿಲ್ಲ. ರೈಲು ನಿಲ್ದಾಣವನ್ನೆಂದಿಗೂ ನೋಡಿರಲಿಲ್ಲ. ಆದರೆ ಅವರಿಗೆ ರೈಲುಗಾಡಿಯ ವೇಳೆ, ಅವುಗಳ ಆಗಮನ, ನಿರ್ಗಮನಗಳ ವೇಳಾಪಟ್ಟಯ ಅರಿವಿತ್ತು. 139 ರೈಲುಗಾಡಿಯನ್ನು ಹಿಡಿಯಬೇಕಾದಾಗ ಭಕ್ತರು ಎಲ್ಲಾ ತಯಾರಿಮಾಡಿಕೊಂಡು ಬಾಬಾರವರಲ್ಲಿಗೆ ಅನುಮತಿಗಾಗಿ ಹೋಗುತ್ತಿದ್ದರು. ಆಗ ಅವರು ಹೇಳುತ್ತಿದ್ದರು - “ಈಗ ಏನು ಅವಸರ?” ಎಂದು. 140 “ಬಾಬಾ, ಈಗ ನಾನು ಅವಸರ ಮಾಡದಿದ್ದಲ್ಲಿ ಬೊಂಬಾಯಿಗೆ ರೈಲು

ತಪ್ಪುತ್ತದೆ. ನನ್ನ ನೌಕರಿ ಹೋಗುತ್ತದೆ. ಮಾಲಿಕ ನನ್ನನ್ನು ಹೊರಗೆ ಕಳಿಸುತ್ತಾನೆ.” ॥141 “ಇಲ್ಲಿ ಮತ್ತೇನೂ ವಿಷಯವಿಲ್ಲ. ನೀನೇಕೆ ಇಷ್ಟು ಅವಸರದಲ್ಲಿರುವೆ? ಹೋಗು ಸ್ವಲ್ಪ ತಿನ್ನು. ಮಧ್ಯಾಹ್ನದ ಊಟದ ನಂತರ ಹೊರಡು.” ॥142॥ ಆ ಮಾತುಗಳನ್ನು ಧಿಕ್ಕರಿಸುವ ಧೈರ್ಯ ಯಾರಿಗಿದೆ? ಕಿರಿಯರು, ಹಿರಿಯರು ಮತ್ತು ಬುದ್ಧಿವಂತರು, ವಿದ್ಯಾವಂತರು ಎಲ್ಲರೂ ಸ್ವತಃ ಅನುಭವದಿಂದಲೇ ಎಲ್ಲವನ್ನೂ ತಿಳಿದುಕೊಂಡಿದ್ದರು. ॥143॥ ಅವರ ಆದೇಶಗಳನ್ನು ಪಾಲಿಸಿದವರು ಎಂದಿಗೂ ರೈಲುಗಾಡಿಯನ್ನು ತಪ್ಪಿಸಲಿಲ್ಲ. ಆದರೆ ಅವುಗಳನ್ನು ಪಾಲಿಸದವರು ಅದರ ಪ್ರತ್ಯಕ್ಷ

ಪರಿಣಾಮವನ್ನು ಅನುಭವಿಸುತ್ತಿದ್ದರು. 144 ಒ೦ದರ ನಂತರ ಮತ್ತೊಂದು ವಿಶಿಷ್ಟವಾದ ಅಸಂಖ್ಯಾತ ಅನುಭವಗಳು, ವಿವಿಧ ಬಗೆಯದ್ದು. ಇವುಗಳನ್ನು ಅನಂತರ ಸಂಕ್ಷಿಪ್ತವಾಗಿ ತಿಳಿಸುತ್ತೇನೆ. 145


ಹೇಮಾದ ಪ೦ತನು ಸಾಯಿಚರಣಗಳಲ್ಲಿ ಶರಣಾಗುತ್ತಾನೆ. ಮುಂದಿನ ಅಧ್ಯಾಯದಲ್ಲಿ ಇದೇ ವಿಷಯವನ್ನು ಮುಂದುವರೆಸುತ್ತಾನೆ. ಭಕ್ತರು ಶಿರಡಿಯಿ೦ದ ತಮ್ಮ ಹಳ್ಳಿಗೆ ಹೇಗೆ ಹಿಂತಿರುಗುತ್ತಿದ್ದರು. ಬಾಬಾರವರು ಆದೇಶಗಳನ್ನು ಹೇಗೆ ನೀಡುತ್ತಿದ್ದರು? 146 ಅನುಮತಿ ಪಡೆದವರು ಹಿಂತಿರುಗಬಹುದಿತ್ತು. ಮತ್ತು ದೊರೆಯದವರು ಅಲ್ಲಿಯೇ ಉಳಿಯಬೇಕಾಗುತ್ತಿತ್ತು. ಅಪ್ಪಣೆ ಮೀರಿದವರು ಕಷ್ಟ ಅನುಭವಿಸುತ್ತಿದ್ದರು. ಇವುಗಳನ್ನು ಮು೦ದಿನ ಅಧ್ಯಾಯದಲ್ಲಿ ವಿವರಿಸಲಾಗುತ್ತದೆ. ॥147॥ ಬಾಬಾರವರು ಭಿಕ್ಷುಕರ ರೀತಿ ನೀತಿಗಳನ್ನು ಏಕೆ ಅಳವಡಿಸಿಕೊಂಡರು? ಭಕ್ತರು ಪ್ರತಿನಿತ್ಯ ಆಚರಿಸುವ ಪಾಪಗಳನ್ನು ತೊಳೆಯಲು ಭಿಕ್ಷೆಯಿಂದ ತಂದ ಅನ್ನವನ್ನು ಏಕೆ ತಿನ್ನುತ್ತಿದ್ದರು? ಯಾವಾಗ ಪ್ರಾಣಿಯ ಜನ್ಮ ಆಕಸ್ಮಾತ್ತಾಗಿ ನಾಶವಾಯಿತು - ಇವೆಲ್ಲವನ್ನೂ ನಂತರ ಹೇಳುತ್ತೇನೆ. 148 ಆದುದರಿಂದ ನಾನು ಶ್ರೋತೃಗಳ

ಚರಣಗಳಲ್ಲಿ ಪ್ರಾರ್ಥಿಸುತ್ತೇನೆ ಮತ್ತು ಅವರನ್ನು ಪ್ರತಿಕ್ಷಣವೂ ತಮ್ಮದೇ ಒಳಿತಿಗಾಗಿ ಸಾಯಿಸಚ್ಚರಿತ್ರೆಯನ್ನು ಆಲಿಸಲು ಪ್ರೇರೇಷಿಸುತ್ತೇನೆ. 149॥


ಎಲ್ಲರಿಗೂ ಶುಭವಾಗಲಿ.


ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂ೦ತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ “ಸಾಯಿ ಸಮರ್ಥರ ಅವತಾರ” ಎಂಬ ಎಂಟನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.


ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.


।ಸನ್ಮಂಗಳವಾಗಲಿ।


No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....