Thursday, July 2, 2020

ಮುನ್ನುಡಿ

ಮುನ್ನುಡಿ

ಶ್ರೀ ಗಣೇಶನಿಗೆ ಪ್ರಣಾಮಗಳು. 
ಸರಸ್ವತಿ ಮಾತೆಗೆ ಪ್ರಣಾಮಗಳು. 
ಸದ್ಗುರುವಿಗೆ ಪ್ರಣಾಮಗಳು.
ಶ್ರೀ ಗುರುವೇ ಬ್ರಹ್ಮನು. 
ಶ್ರೀ ಗುರುವೇ ವಿಷ್ಣುವು. 
ಶ್ರೀ ಗುರುವೇ ಮಹೇಶ್ವರನು. 
ಶ್ರೀ ಗುರುವೇ ಸಾಕ್ಷಾತ್ ಪರಬ್ರಹ್ಮನು. 
ಆ ಸದ್ಗುರುವಿಗೆ ಸಾಷ್ಟಾಂಗ ಪ್ರಣಾಮಗಳು.

ಸುಮಾರು 5೦ ವರ್ಷಗಳ ಹಿಂದೆ ಶ್ರೀ ಸಾಯಿನಾಥ ಮಹಾರಾಜರು ಶಿರಡಿಗೆ ಆಗಮಿಸಿದರು. ಅಹಮದ್ ನಗರ ಜಿಲ್ಲೆಯ ಕೋಪರಗಾಂವ ತಾಲೂಕಿನಲ್ಲಿ ಶಿರಡಿ ಗ್ರಾಮವಿದೆ. ಶ್ರೀ ಸಾಯಿನಾಥರ ಮಾತಾಪಿತೃಗಳು ಯಾರು, ಮೂಲತಃ ಸಾಯಿನಾಥರು ಯಾವ ಊರಿನವರು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇರುವುದಿಲ್ಲ. ಆದರೆ ಮಹಾರಾಜರು ಮೊಗಲರೊಂದಿಗೆ ಸಾಕಷ್ಟು ಸಂಪರ್ಕ ಹೊಂದಿದ್ದಾರೆಂಬುದು ನಿಶ್ಚಿತವಾಗಿದೆ. ಮೊಗಲರ ಆಡಳಿತದಲ್ಲಿದ್ದ ಶೇಲು, ಔಲ್ನ, ಮಾಣ್ವದ, ಪಾಥೇರಿ, ಪರಭಣಿ, ನೌರಂಗಾಬಾದ್ (ಮ್ಹ, ಔರಂಗಾಬಾದ್), ಬೀಡ, ಬೇದರ ನಗರಗಳ ಬಗ್ಗೆ ಮಹಾರಾಜರು ಪದೇ ಪದೇ ಉಲ್ಲೇಖಿಸುತ್ತಿದ್ದರು. ಒಮ್ಮೆ ಪತ್ರಿಯಿಂದ ಒಬ್ಬರು ಮಹಾರಾಜರ ದರ್ಶನಕ್ಕಾಗಿ ಬಂದಿದ್ದರು. ಆಗ ಮಹಾರಾಜರು ಅವನೊಡನೆ ಪತ್ರಿಯ ಪ್ರಮುಖ ವ್ಯಕ್ತಿಗಳ ಬಗ್ಗೆ, ಅವರ ಕುಶಲಗಳ ಬಗ್ಗೆ ಪ್ರಶ್ನಿಸಿದ್ದರು. ಅಂದರೆ ಇದರಿಂದ ಮಹಾರಾಜರಿಗೆ ಪತ್ರಿಯ ಬಗ್ಗೆ ವಿವರಗಳು ತಿಳಿದಿದ್ದವೆಂದು ನಿರ್ಣಯಿಸಿದರೂ, ಪತ್ರಿ ಅವರ ಜನ್ಮಸ್ಥಳವೆಂದು ಹೇಳಲಾಗದು.

ಹಾಗೆಯೇ ಮಹಾರಾಜರು ಮುಸ್ಲಿಮರೊ, ಬ್ರಾಹ್ಮಣರೋ ಇಂದು ಖಚಿತವಾಗಿ ಹೇಳಲಾಗುವುದಿಲ್ಲ. ಅದೂ ಅಲ್ಲದೆ ಅವರ ಅನೇಕ ಭಕ್ತರು ಇವರು ಮಾನವ ಗರ್ಭಾಶಯದಿಂದ ಜನಿಸಿದವರಲ್ಲವೆಂದು ನಂಬಿದ್ದರು. ಆದರೆ ಈ ಲೇಖಕನು ಹಾಗೆ ನಂಬುವುದಿಲ್ಲ. ಮಹಾರಾಜರೇ ಈ ಲೇಖಕನೊಡನೆ ಹೀಗೆ ಹೇಳಿದ್ದರು, "ಈಗ ನಾನು ಹೋರಾಡುತ್ತೇನೆ. ಮತ್ತು ಎಂಟು ವರ್ಷದ ಬಾಲಕನಾಗಿ ಮತ್ತೆ ಕಾಣಿಸಿಕೊಳ್ಳುತ್ತೇನೆ". ಶ್ರೀ ಕೃಷ್ಣನು ದೇವಕಿಮಾತೆಗೆ ಪ್ರಕಟಗೊಂಡಾಗಲೂ ಎಂಟು ವರ್ಷದವನಾಗಿದ್ದನು. ಹಾಗೆ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. "ಆ ಬೆಳಕು ಊಹಿಸಲು ಅಸದಳವಾಗಿತ್ತು. ಎಂಟು ವರ್ಷದ ಬಾಲಕನಿಂದ ಹೊರಹೊಮ್ಮಿ ದಶದಿಕ್ಕುಗಳನ್ನೂ ಪ್ರಜ್ವಲಗೊಳಿಸಿದ್ದು, ಅದರ ಮುಂದೆ ಸೂರ್ಯ ಚಂದ್ರರೂ ಮಂಕಾಗಿ ಅಲ್ಪವಾಗಿದ್ದರು" (ಹರಿವಿಜಯ, ಅಧ್ಯಾಯ - 3, ಶ್ಲೋಕ - 126). ಮಹಾರಾಜರು ಸಾಧನೆಯಿಂದ ಸಿದ್ಧಪುರುಷರಾದರೆಂದು ಅವರ ಅನೇಕ ಭಕ್ತರು ನಂಬುವುದಿಲ್ಲ. ಆದರೆ ಅವರು ಖಚಿತವಾಗಿಯೂ ಅವತಾರವೇ ಆಗಿದ್ದರು. ಮರ್ರು ಮಹಾರಾಜರ ಲೀಲೆಗಳನ್ನು ಹಾಗೂ ಅಪರಿಮಿತ ಶಕ್ತಿಯನ್ನು ನೋಡಿ ಅವರು ಶ್ರೀ ಕೃಷ್ಣನ ಅವತಾರವೆಂದೇ ಪರಿಗಣಿಸಿದರು. ಮಹಾರಾಜರೇ ಯಾವುದೇ ಶಕ್ತಿಗಳನ್ನು ತಮ್ಮದೆಂದುಕೊಳ್ಳುತ್ತಿರಲಿಲ್ಲ. ಅವರು ಮಾತನಾಡಿದಾಗಲೆಲ್ಲ ತಮ್ಮನ್ನು ಭಗವಂತನ 'ದಾಸ' ಹಾಗೂ 'ಭಕ್ತ'ನೆಂದೇ ಹೇಳಿಕೊಳ್ಳುತ್ತಿದ್ದರು. "ನನಗೆ ನನ್ನ ಗುರುವಿನ ಕೃಪೆ ವಿಶಾಲವಾಗಿದೆ ಮತ್ತು ಅವನ ಅನುಗ್ರಹದಿಂದ ಭಕ್ತರ ಸಂಕಟಗಳು ನಿವಾರಣೆಯಾಗಿ ಅವರು ಫಲಾನುಭವಿಗಳಾಗುತ್ತಾರೆ" ಎಂದು ಹೇಳುತ್ತಿದ್ದರು. ಅವರು ಭಕ್ತರಿಗೆ ಆಶೀರ್ವದಿಸುವಾಗೆ, "ಅಲ್ಲಾನು ನಿಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುವನು" ಎಂಬುದು ಸಾಮಾನ್ಯವಾಗಿತ್ತು. ಅವರು ಇಂದಿಗೂ ಯಾವುದೇ ಮಹತಿಯನ್ನು ತಮಗೆ ಅನ್ವಯಿಸಿಕೊಳ್ಳುತ್ತಿರಲಿಲ್ಲ. ಅವರು ಇಂದಿಗೂ "ಅನಲ್ ಹಕ್" ಅಂದರೆ "ನಾನು ದೇವರು" ಎಂದು ಹೇಳಲಿಲ್ಲ. ಆದರೆ ಅವರು ಆಗಾಗ್ಗೆ "ಯಾದೆ ಹಕ್" ಅಂದರೆ "ನಾನು ದೇವರನ್ನು ನೆನೆಪಿಸಿಕೊಳ್ಳುತ್ತಿದ್ದೇನೆ" ಎಂದು ಹೇಳುತ್ತಿದ್ದರು.

ಮಹಾರಾಜರು ಶಿರಡಿಗೆ ಬಂದಾಗ, ಒಂದು ಮದುವೆಯ ದಿಬ್ಬಣದೊಂದಿಗೆ ಒಬ್ಬ ಮುಸ್ಲಿಂ ಮಹಾಶಯನೊಂದಿಗೆ ಆಗಮಿಸಿದರು. ಅವನ ಹೆಸರು ಚಾಂದ್ ಭಾಯ್. ಅವನು ಧೂಪಖೇಡ ಗ್ರಾಮದ ಪಟೇಲನಾಗಿದ್ದನು. ಒಂದು ದಿನ ಅವನ ಕುದುರೆಯು ಕಾಣದಾಗಿದ್ದು ಅದನ್ನು ಹುಡುಕುತ್ತಾ ನಡೆಯುತ್ತಿದ್ದನು. ಆಗ ಒಂದು ಮರದ ಕೆಳಗೆ ಕುಳಿತಿದ್ದ ಮಹಾರಾಜರನ್ನು ಕಂಡನು. ಅವನು ಮಹಾರಾಜರನ್ನು ಹಿಂದೆಂದೂ ನೋಡಿರಲಿಕ್ಕ. ಮಹಾರಾಜರು ಅವನನ್ನು ಕರೆದು, "ಹುಕ್ಕಾದಿಂದ ಒಂದು ಧಮ್ಮನ್ನು ಎಳೆದು ಮುಂದೆ ಹೊರಡು" ಎಂದರು. ಅವನು ಹೇಳಿದನು, "ನನ್ನ ಕುದುರೆ ಕಳೆದು ಹೋಗಿದೆ. ಅದನ್ನು ಹುಡುಕುತ್ತಿದ್ದೇನೆ". ಆಗ ಮಹಾರಾಜರು "ಅದಕ್ಕಾಗಿ ದೂರ ಏಕೆ ಹೋಗುವೆ? ಅದು ಇಲ್ಲೆಯೇ ಈ ಬೇಲಿಯ ಆಚೆ ಮೇಯುತ್ತಿದೆ" ಎಂದು ಹೇಳಿದರು. ಅದರಂತೆಯೇ ಚಾಂದ್ ಭಾಯಿಯು ಮಹಾರಾಜರ ನಿರ್ದೇಶನದಂತೆ ಆ ಬೇಲಿಯ ಕಡೆ ಹೊರಟನು. ಅಲ್ಲಿ ನಿಜವಾಗಿಯೂ ಕುದುರೆ ಹುಲ್ಲು ಮೇಯುತ್ತಿತ್ತು. ಅವನು ಕುದುರೆಯನ್ನು ಹಿಡಿದುಕೊಂಡು ಮಹಾರಾಜರ ಬಳಿಗೆ ಬಂದನು. ಮಹಾರಾಜರು ಕೊಟ್ಟ ಚಿಲುಮೆಯನ್ನು ಸೇದಿದ ನಂತರ ಅವನು ಮಹಾರಾಜರನ್ನು ತಮ್ಮ ಮನೆಗೆ ಬರಲು ಒತ್ತಾಯಿಸಿದನು. ಮಹಾರಾಜರು, "ನಾಳೆ ಬರುವೆನು" ಎಂದು ಹೇಳಿದರು. ಚಾಂದ್ ಭಾಯಿಗೆ ಸೇದಲು ಚಿಲುಮೆ ನೀಡಿದಾಗ ಅದರಲ್ಲಿ ಕೆಂಡವಿರಲಿಲ್ಲ. ಮಹಾರಾಜರು ನೆಲವನ್ನು ತಮ್ಮ ಕೈಯಲ್ಲಿನ ಸಟಕಾದಿಂದ ಘಾಟಿಸಿ ಉರಿಯುವ ಕೆಂಡವನ್ನು ಸೃಷ್ಟಿಸಿ ತಮ್ಮ ಉದ್ದೇಶ ನೆರವೇರಿಸಿದ್ದರು.

ಚಾಂದ್ ಭಾಯಿಯ ಮನೆಯಲ್ಲಿ ಮಹಾರಾಜರು ಕೆಲ ದಿನ ಉಳಿದರು. ನಂತರ, ಚಾಂದ್ ಭಾಯಿಯ ಪತ್ನಿಯ ಸೋದರಳಿಯನ ವಿವಾಹವು ಶಿರಡಿಯ ವಧುವಿನೊಂದಿಗೆ ನಿಶ್ಚಿತಾರ್ಥವೂ ಆಯಿತು. ಆ ಮದುವೆಯ ದಿಬ್ಬಣದ ಜೊತೆಯಲ್ಲಿ ಮಹಾರಾಜರು ಶಿರಡಿಗೆ ಬಂದರು. ಹಳ್ಳಿಯ ಹೊರಡಗೆ ಖಂಡೋಬ ದೇವಾಲಯದ ಹತ್ತಿರವಿದ್ದ ದೊಡ್ಡಿಯ ಕಣದಲ್ಲಿ ದಿಬ್ಬಣವು ಬಿಡಾರಹೂಡಿತ್ತು. ಮಹಾರಾಜರು ಖಂಡೋಬ ಮಂದಿರಕ್ಕೆ ಹೋದಾಗ ಅಲ್ಲಿ ಮ್ಹಾಳಸಾಪತಿಯೇನೆಂಬುವವನನ್ನು ಸಂಧಿಸಿದರು. ಮ್ಹಾಳಸಾಪತಿಯು ಶಿರಡಿ ನಿವಾಸಿಯಾದ ಅಕ್ಕಸಾಲಿಗನಾಗಿದ್ದನು. ಅವನು ಖಂಡೋಬನ ಭಕ್ತನಾಗಿದ್ದು ಖಂಡೇರಾಯರನ್ನು ದರ್ಶಿಸಲು ವಂಶಪಾರಂಪರ್ಯವಾಗಿ ಅಧಿಕಾರಯುಕ್ತನಾಗಿದ್ದನು.

ಮಹಾರಾಜರು ಖಂಡೋಬ ಮಂದಿರಕ್ಕೆ ಹೋದಾಗ ಅವರು ಉಡುಪು ಒಂದು ಕಫನಿ, ಒಂದು ಟೋಪಿ ಮತ್ತು ಧೋತಿಯಾಗಿತ್ತು. ಮ್ಹಾಳಸಾಪತಿಯು ಅವರನ್ನು ನೋಡುತ್ತಿದ್ದಂತೆಯೇ, ಅವರನ್ನು "ಸಾಯಿ ಬಾಬಾ, ಸ್ವಾಗತ" ಎಂದು ಸ್ವಾಗತಿಸಿದನು. ಮತ್ತು ಆ ಹೆಸರು ಅಂದರೆ "ಸಾಯಿ ಬಾಬಾ" ಎಂಬ ನಾಮವನ್ನೇ ಮಹಾರಾಜರು ಕೊನೆಯವರೆಗೂ ಅಳವಳಿಸಿಕೊಂಡರು. ಮಹಾರಾಜರ ಭಕ್ತರನೇಕರು ಅವರನ್ನು "ಸಾಯಿ ಬಾಬಾ" ಅಧವಾ ಕೇವಲ "ಬಾಬಾ" ಎಂದು ಕರೆಯುತ್ತಿದ್ದರು. ಒಮ್ಮೆ ಮಹಾರಾಜರು ಜಿಲ್ಲಾಧಿಕಾರಿಯ ಮುಂದೆ ಸಾಕ್ಷ್ಯ ನೀಡುವಾಗ ಅವರ ಹೆಸರನ್ನು ಕೇಳಲಾಯಿತು. ಅವರು ಉತ್ತರಿಸಿದರು, "ನನ್ನನ್ನು ಸಾಯಿಬಾಬಾ ಎಂದು ಇವರೆಲ್ಲ ಕರೆಯುತ್ತಾರೆ". ಮ್ಹಾಳಸಾಪತಿಯು ಮಹಾರಾಜರನ್ನು ಹಳ್ಳಿಗೆ ಕರೆತಂದು ತಮ್ಮ ಸ್ನೇಹಿತರಾಜ ಕಾಶಿರಾಮ್ ಶಿಂಪಿ ಹಾಗೂ ಅಪ್ಪಾ ಜಾಗಳೆಯರಿಗೆ ಪರಿಚಯಿಸಿದ್ದನು. ಈ ಮೂವರೂ ಸಾಮಾನ್ಯವಾಗಿ ಶಿರಡಿಗೆ ಭೇಟಿ ನೀಡುತ್ತಿದ್ದ ಶಾಧುಗಳು, ಸಂತರು, ಗೋಸಾವಿಗಳು, ಫಕೀರರು ಮತ್ತು ಸನ್ಯಾಸಿಗಳನ್ನು ತಮ್ಮ ಶಕ್ತಿಮೀರಿ ಉಪಚರಿಸುತ್ತಿದ್ದರು. ಮತ್ತು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಏಕೆಂದರೆ ಶಿರಡಿ ಗ್ರಾಮವು ಈ ರೀತಿಯ ಯಾತ್ರಿಕರು, ಸಾಧು ಸತ್ಪುರುಷರು ಕೈಗೊಂಡ ತೀರ್ಥಯಾತ್ರೆಯ ದಾರಿಯಾಗಿತ್ತು.

ಯಾತ್ರಿಕರ ಗುಂಪುಗಳು ಆಗಾಗ್ಗೆ ಬರುತ್ತಿದ್ದು ಈ ಮೇಲೆ ಹೇಳಿದ ಮೂವರು ಅವರಿಗೆ ತಮ್ಮ ಶಕ್ತ್ಯಾನುಸಾರ ಆದರದಿಂದ ಸತ್ಕಾರ ನೀಡುತ್ತಿದ್ದರು. ಈ ಮೂವರು (ಕಾಶೀರಾಮ, ಅಪ್ಪಾ ಮತ್ತು ಮ್ಹಾಳಸಾಪತಿ) ಮಹಾರಾಜರ ಪರಿಪೂರ್ಣ ಭಕ್ತರಾದರು. ಇವರಲ್ಲಿ ಕಾಶೀರಾಮ ಮತ್ತು ಅಪ್ಪಾ ಕೆಲವು ವರ್ಷಗಳ ನಂತರ ಕಾಲವಾದರು.

ಕಾಶೀರಾಮನು ಮೊದಲು, ನಂತರ ಕೆಲವು ವರ್ಷಗಳ ಮೇಲೆ ಅಪ್ಪಾ ನಿಧನಹೊಂದಿದರು. ಆದರೆ, ಇಬ್ಬರೂ ಏಕಾದಶಿಯ ದಿವಸ ಮರಣಹೊಂದಿದ ಭಾಗ್ಯಶಾಲಿಗಳಾಗಿದ್ದರು. ಈ ವಿಶೇಷ ದಿನಾನಂದು ಹರಿಭಕ್ತರು ದೇಹ ತ್ಯಜಿಸುವುದು ಸೂಕ್ತವಾಗಿದ್ದು ಅದೇ ರೀತಿಯಲ್ಲಿ ಅವರ ಮರಣ ಸಂದಿತ್ತು. ಕಾಶೀರಾಮನು ಸತ್ಯವಾಗಿ ತಾನು, ಮನ, ಧನಗಳಿಂದ ಸಾಧ್ಯವಾದಷ್ಟು ಉತ್ತಮರೀತಿಯಲ್ಲಿ ಮಹಾರಾಜರ ಸೇವೆಮಾಡಿದ್ದನು.

ಮೊದಮೊದಲು ಮಹಾರಾಜರ ಕಫನಿಯು ಕೇಸರಿ ಅಥವಾ ಬಿಳಿ ಬಣ್ಣದ್ದಾಗಿತ್ತು. ಕಾಶೀರಾಮನು ಹಸಿರು ಬಣ್ಣದ ಕಫನಿ ಹಾಗೂ ಹಸಿರು ಟೋಪಿಯನ್ನು ಮಹಾರಾಜರಿಗೆ ಹೋಲಿಸಿದನು. ಆದರೆ ಸಾಮಾನ್ಯವಾಗಿ ಮಹಾರಾಜರು ಬಿಳಿಯ ಕಫನಿಯನ್ನು ಧರಿಸಿ ಒಂದು ಧೋತಿಯನ್ನು ಟಕೆಗೆ ಸುಟ್ಟಿಹೋಳ್ಳುತ್ತಿದ್ದರು. ಹಾಗೆಯೇ ಮಹಾರಾಜರಿಗೆ ಅವರ ಚಿಲುಮೆಗೆ ತಂಬಾಕನ್ನೂ ಅವರ ಧುನಿಗೆ ಕಟ್ಟಿಗೆಯನ್ನೂ ಒದಗಿಸುತ್ತಿದ್ದನು. ಅಲ್ಲದೆ ಸಮಯ ಬಂದಾಗ ಹಣವನ್ನೂ ಸಹ - ಇದನ್ನೇ ಕಾಶೀರಾಮನು ಸ್ವ-ಇಚ್ಛೆಯಿಂದ ಆರಿಸಿಕೊಂಡಿದ್ದನು.

ಅನಂತರ, ಅವನು ತನ್ನ ಹಣದ ಚೀಲವನ್ನು ಮಹಾರಾಜರ ಸಮ್ಮುಖದಲ್ಲಿರಿಸಿ ತಮ್ಮ ಇಚ್ಛೆಯಷ್ಟು ಅದರಲ್ಲಿರುವ ಹಣ ಸ್ವೀಕರಿಸಲು ದೈನ್ಯದಿಂದ ಬೇಡುತ್ತಿದ್ದನು. ಆ ದಿನಗಳಲ್ಲಿ ಮಹಾರಾಜರು ದಕ್ಷಿಣಿ ಸ್ವೀಕರಿಸುವ ಅಭ್ಯಾಸವಿರಲಿಲ್ಲ. ಆದರೂ ಕಾಶೀರಾಮನಿಂದ ಒಂದು-ಎರಡು ಪೈಸೆಗಳನ್ನು ಸ್ವೀಕರಿಸುತ್ತಿದ್ದರು. ಕಾಶೀರಾಮನಿಗೆ ಮಹಾರಾಜರು ದಕ್ಷಿಣಿ ಸ್ವೀಕರಿಸಲೇಬೇಕೆಂಬ ಇಚ್ಛೆ ಪ್ರಬಲವಾಗಿತ್ತು. ಎಂದಾದರೂ ಆಕಸ್ಮಿಕವಾಗಿ ಮಹಾರಾಜರು ದಕ್ಷನಿಂಗ್ ಸ್ವೀಕರಿಸದೇ ಇದ್ದಾಗ ಕಾಶೀರಾಮನಿಗೆ ಬಹಳ ಖೇದವಾಗಿ ಕಣ್ಣುಗಳಿಂದ ಅಶ್ರುಗಳು ಚಿಮ್ಮುತ್ತಿದ್ದವು.

ಈ ರೀತಿ ದುಃಖಿಸುವುದೂ ಆಧ್ಯಾತ್ಮಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಕಾರಣ, ಅದು ತಾನು ಕೊಡಬಲ್ಲೆ ಎಂಬ ಅಹಂಭಾವವನ್ನು ಉಂಟುಮಾಡುತ್ತದೆ. ಭಕ್ತನ ಆಧ್ಯಾತ್ಮ ಪ್ರಗತಿಯ ಮಾರ್ಗದಲ್ಲಿ ಬರುವ ಎಲ್ಲ ಅಡೆತಡೆಗಳನ್ನು ನಿವಾರಿಸುವುದೇ ಭಗವಂತನ ಸಹಜಕೃಪೆ.

ಕಾಶೀರಾಮನ ಸಂಗತಿಯಲ್ಲಿಯೂ ಹೀಗೆಯೇ ಆಯಿತು. ಕೆಲಕಾಲಾನಂತರ ಕಾಶೀರಾಮನು ಹಣದ ಕೊರತೆಯನ್ನು ಅನುಭವಿಸಲಾರಂಭಿಸಿದನು. ಮತ್ತು ಮಹಾರಾಜರು ಅವನಿಂದ ಮತ್ತೆ ಮತ್ತೆ ದಕ್ಷನಿಂಗ್ ಬೇಡಲಾರಂಭಿಸಿದರು. ತನ್ನಲ್ಲಿ ಇನ್ನೇನೂ ಹಣ ಉಳಿದಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಯಿತು. ಆಗ ಮಹಾರಾಜರು, "ಕಿರಾಣಿ ಅಂಗಡಿಯವನಿಂದ ಸಾಲ ಕೇಳಿ ನನಗೆ ತಂದುಕೊಡು" ಎಂದರು. ಅದೇ ರೀತಿ ಕೆಲವು ಸಮಯ ಕಿರಾಣಿ ಅಂಗಡಿಯವನಿಂದ ಸಾಲಕೇಳುವುದು, ತಂದುಕೊಡುವುದು ನಡೆಯಿತು. ಅನಂತರ, ಅವನೂ ಸಾಲ ನೀಡಲು ನಿರಾಕರಿಸಿದನು. ಸತ್ಯವಾಗಿಯೂ ಈ ಆಟವು ಕಾಶೀರಾಮನ 'ಅಹಂ'ಭಾವವನ್ನು ನಿರ್ಮೂಲನ ಮಾಡುವುದಕ್ಕಾಗಿಯೇ ಇತ್ತು. ತನಗೆ ನೀಡಲು ಶಕ್ತಿ ಇಲ್ಲವೆಂದು ಆಗ ಅವನಿಗೆ ಅರಿವಾಯಿತು. ಇದು ಅವನ ಅರಿವಿಗೆ ಬರುತ್ತಿದ್ದಂತೆಯೇ ಅವನ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಬಂದಿತು. ಆಗ ಅವನು ಹಿಂದಿನಂತೆಯೇ ಆರಾಮವಾಗಿರಲು ಆರಂಭಿಸಿದನು. ಅವನಿಗೆ ಮಹಾರಾಜರು ದಕ್ಷನಿಂಗ್ ಸ್ವೀಕರಿಸುತ್ತಿರಲಿ ಎಂಬ ಆಕಾಂಖೆ ತೀವ್ರವಾಗಿ ಮುಂದೆಂದೂ ಉಂಟಾಗಲಿಲ್ಲ.

ಕಾಶೀರಾಮನು ಜವಳಿ ವ್ಯಾಪಾರಿಯಾಗಿದ್ದನು. ಅವನು ಬೇರೆ ಬೇರೆ ಗ್ರಾಮಗಳಲ್ಲಿ ಸಂತೆಯ ದಿನಗಳಲ್ಲಿ ಹೋಗಿ ಜವಳಿ ಅಂಗಡಿ ತೆಗೆಯುತ್ತಿದ್ದನು. ಒಮ್ಮೆ ಸೌರ ಎಂಬ ಊರಿನಿಂದ ಸಂತೆಯ ದಿನ ಹಿಂತಿರುಗುತ್ತಿದ್ದಾಗ ಭಿಲ್ ದರೋಡೆಕೋರರು ಎದುರಾದರು. ಕಾಶೀರಾಮನು ಕುದುರೆಯ ಮೇಲೆ ಕುಳಿತಿದ್ದನು. ಅವರು ಮೊದಲು ಅವನ ಬಳಿಗೆ ಹೋಗಲಿಲ್ಲ. ಆದರೆ ಪಕ್ಕದಲ್ಲಿ ಹೋಗುತ್ತಿದ್ದ ಗಾಡಿಗಳ ಬಳಿ ನಡೆದರೂ. ನಂತರ ಕಾಶೀರಾಮನನ್ನು ಪತ್ತೆಹಚ್ಚಿ ಅವನ ಬಳಿಗೆ ಓದಿದರು. ದರೋಡೆಕೋರರು ಕಾಶೀರಾಮನನ್ನು ಲೂಟಿಮಾಡುತ್ತ ಅವನ ಕೆಲವು ವಸ್ತುಗಳನ್ನು ತೆಗೆದುಕೊಂಡರು. ಕಾಶೀರಾಮನು ಯಾವುದೇ ಪ್ರತಿಭಟನೆ ತೋರಲಿಲ್ಲ. ನಂತರ ಕಾಶೀರಾಮನ ಬಳಿ ಇದ್ದ ಸಣ್ಣ ಗಂಟಿಗೆ ಕೈಹಾಕಿದರು. ಅದರಲ್ಲಿ ಏನೋ ಬೆಲೆಬಾಳುವುದು ಇರಬಹುದೆಂದು ನಂಬಿದ್ದರು. ಆದರೆ ಅದರಲ್ಲಿ ನಿಜವಾಗಿಯೂ ಮೃದುವಾದ ಪುಡಿ ಸಕ್ಕರೆ ತುಂಬಿತ್ತು. ಕಾಶೀರಾಮನಿಗೆ ಒಬ್ಬ ಸತ್ಪುರುಷರೆಂದು ಕರೆಯಲ್ಪಡುತ್ತಿದ್ದ ಜಾನಕೀದಾಸ ಬಾಬಾರವರು, ಪ್ರತಿದಿನವೂ ಇರುವೆಗಳಿಗೆ ಸಕ್ಕರೆ ತಿನ್ನಿಸುವಂತೆ ತಿಳಿಸಿದ್ದರಿಂದ, ಕಾಶೀರಾಮನು ಸಾಮಾನ್ಯವಾಗಿ ತನ್ನ ಬಳಿ ಸಕ್ಕರೆಯನ್ನು ಇಟ್ಟುಕೊಂಡಿರುತ್ತಿದ್ದನು. ಆದ್ದರಿಂದ ಈ ಚೀಲವು ಅವನಿಗೆ ಅತ್ಯಮೂಲ್ಯವಾಗಿತ್ತು ಮತ್ತು ಆ ಗಂಟನ್ನು ಯಾವುದೇ ರೀತಿಯಿಂದಲೂ ಬಿಟ್ಟುಕೊಡಬಾರದೆಂದು ನಿಶ್ಚಯಿಸಿದನು. ಆ ಕ್ಷಣದಲ್ಲಿ ಕಳ್ಳನೊಬ್ಬನ ಕತ್ತಿಯು ಕೆಳಗೆ ಬಿದ್ದಿರುವುದು ಕಾಶೀರಾಮನ ಗಮನಕ್ಕೆ ಬಂದಿತು. ಅವನು ಅದನ್ನು ಎತ್ತಿಕೊಂಡು ಇಬ್ಬರು ದರೋಡೆಕೋರರನ್ನು ಸಾಯಿಸಿದನು. ಮೂರನೆಯ ಕಳ್ಳನು ಅದೇ ಸಮಯದಲ್ಲಿ ಹಿಂದಿನಿಂದ ಬಂದು ಪಿಕಾಸಿಯಿಂದ ಕಾಶೀರಾಮನ ತಲೆಗೆ ಪ್ರಹಾರ ಮಾಡಿದನು. ಅದರಿಂದಾಗಿ ಕಾಶೀರಾಮನು ಪ್ರಜ್ಞೆತಪ್ಪಿಕೆಳಗೆ ಉರುಳಿದನು. ಕಾಶೀರಾಮನು ಸತ್ತನೆಂದು ಭಾವಿಸಿ ಉಳಿದ ಕಳ್ಳರು ಅವನನ್ನು ಅಲ್ಲಿಯೇ ಬಿಟ್ಟು ಹೊರಟುಹೋದರು. ಆದರೆ ಅವನು ಸತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ ಅವನಿಗೆ ಪ್ರಜ್ಞೆ ಬಂದಿತು. ಕೆಲವು ದಿನಗಳ ನಂತರ ಪೂರ್ಣವಾಗಿ ಗುಣಮುಖನಾದನು.

ಅವನಿಗೆ ಮಹಾರಾಜರಲ್ಲಿ ಪೂರ್ಣ ಶ್ರದ್ಧೆ ಇದ್ದುದ್ದರಿಂದ, ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದನು. ಮತ್ತು "ನನ್ನನ್ನು ಶಿರಡಿಗೆ ಕರೆದುಕೊಂಡು ಹೋಗಿ" ಎಂದು ಮನಃಪೂರ್ವಕವಾಗಿ ಬೇಡಿಕೊಂಡನು. ಹಾಗೆಯೇ, ಅವನನ್ನು ಅಲ್ಲಿಗೆ ಕರೆತರಲಾಯಿತು ಮತ್ತು ಮಹಾರಾಜರ ಆದೇಶಾನುಸಾರ ಮಾಧವರಾವ್ ದೇಶಪಾಂಡೆಯು ಔಷಧೋಪಚಾರ ಮಾಡಿದನು. ಸಾಯಿ ಮಹಾರಾಜರ ಕೃಪೆಯಿಂದ ಕಾಶೀರಾಮನ ಆರೋಗ್ಯವು ಸುಧಾರಿಸಿತು ಮತ್ತು ಅವನು ಪೂರ್ಣವಾಗಿ ಆರೋಗ್ಯವಂತನಾದನು.

ಮುಂಬಯಿ ಸರ್ಕಾರವು ಕಾಶೀರಾಮನಿಗೆ ದರೋಡೆಕೋರರನ್ನು ಧೈರ್ಯದಿಂದ ಎದುರಿಸಿದ್ದಕ್ಕಾಗಿ ಒಂದು ಕತ್ತಿಯನ್ನು ಬಹುಮಾನವಾಗಿ ನೀಡಿತು. ಅಲ್ಲಿ ಕಾಶೀರಾಮನು ಕಳ್ಳರೊಂದಿಗೆ ಹೋರಾಡುತ್ತಿದ್ದಾಗ, ಮಹಾರಾಜರು ಶಿರಡಿಯಲ್ಲಿ ಒಂದು ಕೋಲಾಹಲವನ್ನೇ ಸೃಷ್ಟಿಸಿದರು. ಬೈಗಳ, ಕೂಗಾಟಗಳ ಮತ್ತು ಅದೇ ರೀತಿಯ ಗಲಭೆಗಳ ಪ್ರವಾಹವೇ ಹರಿಯಲಾರಂಭಿಸಿತು.

ಮಹಾರಾಜರ ಸನಿಹದಲ್ಲಿದ್ದ ಭಕ್ತರಿಗೆ ತಕ್ಷಣ ಮಹಾರಾಜರ ನಿಕಟವರ್ತಿಯಾದ ಭಕ್ತನೊಬ್ಬನಿಗೆ ಏನೋ ಸಂಕಟ ಒದಗಿ ಬಂದಿದ್ದು, ಅವನ ರಕ್ಷಣೆಗಾಗಿಯೇ ಈ ಗದ್ದಲ ಎಂಬ ವಿಷಯದ ಅರಿವಾಯಿತು. ಮತ್ತು ಸತ್ಯವೆಂದೂ ತಿಳಿದುಬಂದಿತು. ಕಳ್ಳರು ಅನೇಕಮಂದಿ ಇದ್ದು ಮಾರಕ ಆಯುಧಗಳಿಂದ ಸುಸಜ್ಜಿತರಾಗಿದ್ದರು. ಅಂತಹ ಮಾರಕ, ಕ್ರೂರ ಹೊಡೆತಗಳಿಂದ ಕಾಶೀರಾಮನು ಜೀವದೊಡನೆ ತಪ್ಪಿಸಿಕೊಂಡು ಬರುವನೆಂದರೆ ಯಾರೂ ನಂಬಲಾರರು. ಆದರೆ ರಕ್ಷಕನು ಇರುವಾಗ ಯಾರು ತಾನೇ ಹಿಂಸೆ ಮಾಡಲು ಸಾಧ್ಯ? ತದನಂತರ ಕಾಶೀರಾಮನು ಬಹಳ ಕಾಲ ಬಾಳಿ ಬದುಕಿ ಶಕೆ 1830 (ಕ್ರಿ.ಶ. 1908) ಚೈತ್ರ ಶುದ್ಧ ಏಕಾದಶಿಯಂದು ಸ್ವರ್ಗಸ್ಥನಾದನು. 

ಮೇಲೆ ಹೇಳಿದ ಮೂವರಲ್ಲಿ ಮ್ಹಾಳಸಾಪತಿಯು ದೀರ್ಘಕಾಲ ಜೀವಿಸಿದ್ದು ಭಾದ್ರಪಡೆ ಶಕೆ 1844 (ಕ್ರಿ.ಶ. 1922)ರಲ್ಲಿ ಕಾಲವಾದನು. ಅವನು ಮಹಾರಾಜರ ನಿಕಟವರ್ತಿಯಾಗಿದ್ದನು. ಮಹಾರಾಜರು ಮಸೀದಿಯಲ್ಲಿ ಕುಳಿತಿರುತ್ತಿದ್ದು ದಿನಬಿಟ್ಟು ದಿನ ಮಸೀದಿಯಲ್ಲಿ ಮರ್ರು ಚಾವಡಿಯಲ್ಲಿ ನಿದ್ರಿಸುತ್ತಿದ್ದರು. ಮಹಾರಾಜರು ಮಸೀದಿಯಲ್ಲಿ ನಿದ್ರಿಸುವಾಗ ಮ್ಹಾಳಸಾಪತಿಯು ಮಹಾರಾಜರ ಹತ್ತಿರ ಕುಳಿತಿರುತ್ತಿದ್ದನು. ಆ ರಾತ್ರಿಗಳಲ್ಲಿ ಬೆಳಗಾಗುವವರೆಗೆ ಕುಳಿತಿದ್ದು ಆಗಾಗ್ಗೆ ಪರಸ್ಪರ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದರು. ಹೀಗೆ ಮಹಾರಾಜರೋ ಇರುವವರೆಗೂ ಮ್ಹಾಳಸಾಪತಿಯು ರಾತ್ರಿ ಪೂರ್ತಿ ಮಸೀದಿಯಲ್ಲಿ ಅವರೊಡನೆ ಕುಳಿತಿರುವ ಪರಿಪಾಠವನ್ನು ಮುಂದುವರೆಸಿದ್ದನು. ಅವನು ಪ್ರಭಾವಿ ವ್ಯಕ್ತಿಯಾಗಿದ್ದರೂ ಅವನಿಗೆ ಯಾವುದೇ ನಿರೀಕ್ಷೆಗಳಿಲ್ಲದ ಕಾರಣ ಮಹಾರಾಜರ ಭಕ್ತರು ಅವನಿಂದ ಒಳ್ಳೆಯ ಸಲಹೆಗಳನ್ನು ಪಡೆದು ಸುಖವಾಗಿರುತ್ತಿದ್ದರು. ಮಹಾರಾಜರ ದೇಹತ್ಯಾಗದ ನಂತರ ಭಕ್ತರಿಗೆ ಅವನೇ ಶಾಂತಿಯ ನಿವಾಸವಾಗಿದ್ದನು.

ಮಹಾರಾಜರು ಇಲ್ಲಿಗೆ ಆಗಮಿಸಿದಾಗಾಗಿನಿಂದ ಮಸೀದಿಯಲ್ಲೇ ನೆಲೆಸುತ್ತಿದ್ದನು. ಆ ಮಸೀದಿಯಾದರೋ ಬಹಳ ಶಿಥಿಲವಾಗಿತ್ತು. ಹಗಲಿನಲ್ಲಿ ಮಹಾರಾಜರು ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದು ರಾತ್ರಿ ವೇಳೆಯಲ್ಲಿ ಮಸೀದಿಯಲ್ಲಿ ಇರುತ್ತಿದ್ದರು. ಯಾರಾದರೂ ಊಟಕ್ಕೆ ಕರೆದರೆ ಹೋಗುತ್ತಿದ್ದರು. ರೋಗಿಗಳಿಗಿ ಔಷಧೋಪಚಾರ ಹೇಳುತ್ತಿದ್ದರು, ಔಷಧಿಯನ್ನೂ ಕೊಡುತ್ತಿದ್ದರು. ಅದಕ್ಕಾಗಿ ಹಣ ಸ್ವೀಕರಿಸುತ್ತಿರಲಿಲ್ಲ. ಅಷ್ಟೇ ಅಲ್ಲದೆ ರೋಗಿಗೆ ಉಪಚರಿಸಲು ಯಾರೂ ಇಲ್ಲದಿದ್ದರೆ ತಾವೇ ರೋಗಿಯ ಉಪಚಾರಕ್ಕೆ ನಿಲ್ಲುತ್ತಿದ್ದರು. ಆ ರೀತಿ ಉಪಚಾರ ಪಡೆದವರು ಇಂದೂ ಸಹ ಬಹಳ ಜನರಿದ್ದಾರೆ. ನಂತರ ಮಹಾರಾಜರು ಔಷಧಿ ಕೊಡುವುದನ್ನು ನಿಲ್ಲಿಸಿ ಕೇವಲ ವಿಭೂತಿಯನ್ನು ನೀಡುತ್ತಿದ್ದು ರೋಗಿಗಳು ಅದರಿಂದ ಗುಣಮುಖರಾಗುತ್ತಿದ್ದರು.

ಈ ಲೇಖಕನಿಗೆ ಒಮ್ಮೆ ತಾವೇ, "ಮೊದಲು ನಾನು ಜನರಿಗೆ ಔಷಧಿಗಳನ್ನು ಕೊಡುತ್ತಿದ್ದೆ" ಎಂದು ತಿಳಿಸಿದ್ದರು. ಅವರು ಹೇಳಿದ್ದರು, "ಕಾಕಾ (ಈ ಲೇಖಕನನ್ನು ಕಾಕಾ ಎಂದೇ ಅವರು ಸಂಬೋಧಿಸುತ್ತಿದ್ದರು) ನಂತರ ಔಷಧಿ ಕೊಡುವುದನ್ನು ನಿಲ್ಲಿಸಿ, ಹರಿ ಹರಿ ಎಂದು ಜಪಿಸಲು ಪ್ರಾರಂಭಿಸಿದೆ. ಹಾಗೆಯೇ 'ಹರಿ, ಹರಿ' ಎಂದು ಜಪಿಸುತ್ತಲೇ ಆತ್ಮಸಾಕ್ಷಾತ್ಕಾರ ಪಡೆದೆ".

ಮಹಾರಾಜರು ಮೊದಲು ಇಲ್ಲಿಗೆ ಬಂದಾಗ 'ದೇವೀದಾಸ' ಎಂಬ ಸಾಧುವಿದ್ದನು. ಇತರ ಸಾಧುಗಳು ಬೇರೆಬೇರೆ ಸಮಯಗಳಲ್ಲಿ ಇವರನ್ನು ನೋಡಲು ಬರುತ್ತಿದ್ದರು. ಅದೇರೀತಿ, ರಾಮೇಶ್ವರ, ಪಂಡರಾಪುರ, ಮತ್ತು ದಕ್ಷಿಣದ ಅನೇಕ ಯಾತ್ರಾಸ್ಥಳಗಳಿಗೆ ಪಾದಯಾತ್ರೆ ಮಾಡುವವರಿಗೆ ಇದು ದಾರಿಯಾಗಿದ್ದರಿಂದ ಅನೇಕ ಸಜ್ಜನರು ಆಗಾಗ ಇಲ್ಲಿಗೆ ಬರುತ್ತಿದ್ದರು.

ಅವರಲ್ಲಿ ಜಾನಕೀದಾಸ ಎಂಬ ಸಾಧು ಸುಮಾರು ದೀರ್ಘಕಾಲ ಇಲ್ಲಿದ್ದನು. ಅವನೂಗೇ ಅಧ್ಯಾತ್ಮ ವಿಚಾರಗಳಲ್ಲಿ ಅತ್ಯುತ್ತಮ ಪಾಂಡಿತ್ಯವಿತ್ತು ಎಂದು ಹೇಳುತ್ತಿದ್ದರು. ಮಹಾರಾಜರು ಮತ್ತು ಇವನು ಬಹಳ ಗಂಟೆ ಹರಟೆ ಹೊಡೆಯುತ್ತಿದ್ದರು. ಪ್ರಖ್ಯಾತ ಗಂಗಾಗೀರ್ ಬಾಬಾ ಸಹ ಇಲ್ಲಿಗೆ ಆಗಮಿಸುತ್ತಿದ್ದನು. ಮಹಾರಾಜರು ಇಲ್ಲಿಗೆ ಬಂದನಂತರ ಗಂಗಾಗೀರನು ಮೊದಲಬಾರಿ ಬಂದಾಗ, ಮಹಾರಾಜರು ಎರಡು ಕೈಗಳಲ್ಲಿ ಬಾವಿಯ ನೀರು ತುಂಬಿದ ಎರಡು ಮಡಕೆಗಳನ್ನು ಹಿಡಿದುಕೊಂಡಿದ್ದರು. ಅವರನ್ನು ಕಂಡ ಕ್ಷಣವೇ ಗಂಗಾಗೀರ್ ಬಾಬಾನು ಅಲ್ಲಿದ್ದ ಗ್ರಾಮಸ್ಥರಿಗೆ ಕೂಡಲೇ ಹೀಗೆಂದನು, "ಇವರು ಇಲ್ಲಿಗೆ ಯಾವಾಗ ಬಂದರು? ಇವರು ಒಂದು ನಿರ್ಮಲರತ್ನ, ಅವರಿಗೆ ಅತ್ಯಂತ ಯೋಗ್ಯತೆಯು ಇದೆ. ಈ ರತ್ನವನ್ನು ಪಡೆದಿರುವಂಥಹ ಈ ಗ್ರಾಮಸ್ಥರು ಅತ್ಯಂತ ಭಾಗ್ಯಶಾಲಿಗಳು". ನಂತರ ಗಂಗಾಗೀರ್ ಬಾಬಾನು ಮಹಾರಾಜರ ದರ್ಶನಕ್ಕೆ ಹೊರಟನು. ಅವರಿಬ್ಬರೂ ಪರಸ್ಪರ ಬಹುಪ್ರೇಮದಿಂದ ಸಂಭಾಷಣೆಯಲ್ಲಿ ತೊಡಗಿದರು. ಅಕ್ಕಲಕೋಟೆಯ ಆನಂದನಾಥ ಮಹಾರಾಜನು ಸಹ ಇದೆ ಧಾಟಿಯಲ್ಲಿ ಮಹಾರಾಜರ ಬಗ್ಗೆ ಹೇಳಿರುತ್ತಾನೆ. ಈ ಆನಂದನಾಥ ಮಹಾರಾಜನು ಖ್ಯಾತ ಅಕ್ಕಲಕೋಟೆ ಸ್ವಾಮಿಯವರ ಶಿಷ್ಯನು. ಒಮ್ಮೆ ಅವನು ಯೋಲ ಊರಿನ ಬಳಿ ಇರುವ ಸಾವರಗಾಂವ ಎಂಬ ಊರಿಗೆ ಹೋಗಿದ್ದಾಗ, ಶಿರಡಿಯ ಮಾಧವರಾವ್ ಬಲವಂತ ದೇಶಪಾಂಡೆ, ದಗಡುಭಾವು ಗಾಯಕೆ, ನಂದರಾಮ ಶಿವರಾಂ ಮಾರ್ವಾಡಿ ಮತ್ತು ಭಾಗ ಚಂದ ಮಾರ್ವಾಡಿ ಎಲ್ಲರೂ ಅವನ ದರ್ಶನಕ್ಕೆ ಹೋದರು. ದರ್ಶನದ ನಂತರ ಈ ಗುಂಪು ಶಿರಡಿಗೆ ಹಿಂತಿರುಗಲು ಸಜ್ಜಾದರು. ಆಗ ಆನಂದನಾಥ ಮಹಾರಾಜನು ತತ್ಕ್ಷಣವೇ ಓಡಿಬಂದು ಅವರ ಗಾಡಿಯಲ್ಲಿ ಹತ್ತಿ ಕುಳಿತನು ಮತ್ತು ಹೇಳಿದನು, "ನಾನೂ ನಿಮ್ಮೊಡನೆ ಬರುತ್ತೇನೆ". ನೆವರಗಾಂವ ಮತ್ತು ಯೋಲ ಊರುಗಳ ಜನರು ಅವನನ್ನು ಬರದಂತೆ ತಡೆಯಲು ಪ್ರಯತ್ನಿಸಿದರೂ ವಿಫಲವಾಯಿತು. ಆನಂದನಾಥ ಮಹಾರಾಜನು ಇಲ್ಲಿಗೆ ಬಂದಾಗ ಮಹಾರಾಜರ ಬಗ್ಗೆ ಹೀಗೆ ನುಡಿದನು, "ಇದೊಂದು ವಜ್ರ, ಇದರ ಮೌಲ್ಯ ನೀವು ಅರಿತಿಲ್ಲ. ಇದು ಸಗಣಿಯ ಗುಡ್ಡೆಯ ಮೇಲಿದ್ದರೂ ವಜ್ರವೇ". ಆ ಸಮಯದಲ್ಲಿ ಮಹಾರಾಜರ ಕೀರ್ತಿ ಅಷ್ಟು ಹರಡಿರಲಿಲ್ಲ. ಮತ್ತು ಗ್ರಾಮಸ್ಥರು ಅವರನ್ನು (ಸಾಯಿಯನ್ನು) ಸಾಮಾನ್ಯ ಹಾಗೂ ಹುಚ್ಚು ಫಕೀರ ಎಂದು ತಿಳಿದಿದ್ದರು.

ಆ ಸಮಯದಲ್ಲಿ ಮಹಾರಾಜರ ಸ್ಥಿತಿಯು "ಹರಿದ ಉಡುಪನ್ನು ಧ್ರಿಸಿ, ಇಚ್ಛೆಪಟ್ಟಲ್ಲಿ ಕುಳಿತುಕೊಳ್ಳುತ್ತ ಒಬ್ಬ ಉನ್ಮತ್ತನಾದ ಹುಚ್ಚನಾಗಿ ಕಾಣುತ್ತಿದ್ದರೂ ಸದಾ ಬ್ರಹ್ಮನಲ್ಲಿಯೇ ಲೀನವಾಗಿರುತ್ತಿದ್ದರು". ಮಹಾರಾಜರು, ಒಮ್ಮೆ ನೀರಿನ ಝರಿಯ ಬಳಿ, ಒಮ್ಮೆ ಹಳ್ಳಿಯ ಹೊಡೆಯ ಹತ್ತಿರವಿದ್ದ ಒಂದು ನಿರ್ದಿಷ್ಟ ಬೇವಿನ ಮರದ ಕೆಳಗೆ, ಒಮ್ಮೆ ಯಾರದೋ ಹೊಲದಲ್ಲಿ ಹರಿದು ಚಿಂದಿಯಾದ ಉಡುಪನ್ನು ಧರಿಸಿ ಆಗಾಗ ಬಹಳ ಭಯಂಕರವಾಗಿ ಕಾಣುತ್ತಿದ್ದರು. ಈ ರೀತಿಯ ನಡೆವಳಿಕೆಯಿಂದಾಗಿ ಇವರು ಸಾಮಾನ್ಯರಿಗೆ ಹುಚ್ಚರಂತೆ ಕಾಣುತ್ತಿದ್ದರು. ಆದರೆ ಬೇಗನೆ ಜನರಿಗೆ ಅವರ ತಪ್ಪುಗ್ರಹಿಕೆಯ ಅರಿವಾಯಿತು. ಶಿರಡಿಯ ಜನರಿಗೂ ಮಹಾರಾಜರ ಮೌಲ್ಯದ ಅರಿವಾಯಿತು. ಇದು ಹೀಗೆ ನಡೆಯಿತು:

ಮಹಾರಾಜರಿಗೆ ಮಸೀದಿಯಲ್ಲಿ ಹಾಗೂ ದೇವಾಲಯಗಳಲ್ಲಿ ಅನೇಕ ದೀಪಗಳನ್ನು ಬೆಳಗಿಸುವ ಇಚ್ಛೆ ಉಂಟಾಯಿತು. ನಿಜವಾಗಿ 'ಒಂದು ಮಹದಾಸೆ' ಎನ್ನುವುದು ಸಾಮಾನ್ಯ ಮಾತಿನ ಧಾಟಿ. ನಿಜ ಹೇಳಬೇಕೆಂದರೆ ಅವರ ಯಾವುದೇ ಕಾರ್ಯವು ಯಾವುದೇ ಮಹದಾಸೆಯನ್ನು ಪೂರೈಸುವಂತಹುದಾಗಿರಲಿಲ್ಲ. ಏಕೆಂದರೆ ಅವರಿಗೆ ಯಾವ ಇಚ್ಛೆಯೂ ಇರಲಿಲ್ಲ. ಆದರೆ ಅವುಗಳಿಗೆ ಬೇರೆಯೇ ಉದ್ದೇಶವಿರುತ್ತಿತ್ತು. ಅಂದರೆ ಅದು ಜನಗಳ ಉಪಯೋಗಕ್ಕಾಗಿತ್ತು. ಅದು ಏನಾದರೂ ಆಗಿರಲಿ. ಈ ದೀಪಗಳಿಗಾಗಿ ಮಹಾರಾಜರು ತೈಲವ್ಯಾಪಾರಿಗಳ ಬಳಿಗೆ ಹೋಗಿ ತೈಲವನ್ನು ಬೇಡಿ ತರುತ್ತಿದ್ದರು. ಕೆಲವು ದಿನ ಅವರು ಮಹಾರಾಜರಿಗೆ ಎಣ್ಣೆಯನ್ನು ನೀಡಿದರು. ಎಷ್ಟು ದಿನ ಎಂದು ಹೀಗೆ ಕೊಡುತ್ತಿರುತ್ತಾರೆ? ಒಂದು ದಿನ "ಎಣ್ಣೆ ಇಲ್ಲ" ಎಂದು ಹೇಳಿದರು. ಅದು ಮಹಾರಾಜರ ನಿತ್ಯ ರೂಢಿಗೆ ಏನಾದರೂ ಬದಲಾವಣೆ ತಂದಿತೇನು? ಮಹಾರಾಜರು ಆ ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ಬದಲು ನೀರು ತುಂಬಿ, ಬತ್ತಿಗಳನ್ನಿಟ್ಟು, ನಿತ್ಯದಂತೆ ಬೆಂಕಿಕಡ್ಡಿಯಿಂದ ಬೆಳಗಿಸಿದರು. ಮಹಾರಾಜ ಈ ರೀತಿ ಮಾಡಲು  ಪ್ರಾರಂಭಿಸಿದಾಗ,ಜನರು ಅವರನ್ನು ನಿಜವಾಗಿಯೂ ಹುಚ್ಚರೆಂದೇ ನಿರ್ಧರಿಸಿದ್ದರೂ ದೀಪಗಳು ಬೆಂಕಿಕಡ್ಡಿಯಿಂದ ಬೆಳಗಿದಾಗ ಮತ್ತು ರಾತ್ರಿಯೆಲ್ಲ ಉರಿದಾಗ ಆಶ್ಚರ್ಯಚಕಿತರಾದರು. ಅವರೆಲ್ಲರೂ ಮಹಾರಾಜರ ಬಳಿ ನಡೆದು ಅವರೊಡನೆ ಕಠಿಣವಾಗಿ ವರ್ತಿಸಿದ್ದಕ್ಕಾಗಿ ಕ್ಷಮೆ ಬೇಡಿದರು. ಅನೇಕರು ಬೇರೆ ಬೇರೆ ವಿಧದಲ್ಲಿ ದೌರ್ಜನ್ಯ ತೋರಿಸಿದವರೂ ಹೆದರಿದ್ದರು. ಆದರೆ ಮಹಾರಾಜರು ದಯೆಯಿಂದ ತುಂಬಿದ್ದರು. ತಮ್ಮನ್ನು ಹೀಯಾಳಿಸಿದವರಿಗೂ, ತಮ್ಮ ಮೇಲೆ ದೌರ್ಜನ್ಯ ತೋರಿಸಿದವರಿಗೂ ಸಯ ಔದಾರ್ಯವನ್ನು ತೋರುವುದು ಸಾಯಿಮಹಾರಾಜರ ಸ್ವಭಾವವಾಗಿತ್ತು. ಆದ್ದರಿಂದ ಯಾರೂ ಭಯಭೀತರಾಗುವ ಕಾರಣವಿರಲಿಲ್ಲ. ಮಹಾರಾಜರು ಇಲ್ಲರನ್ನೂ ಪ್ರೀತಿಸುತ್ತಿದ್ದರು. ಅವರನ್ನು ಸ್ವಂತ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದರು. ಗ್ರಾಮಕ್ಕೆ ಏನಾದರೂ ಆಪತ್ತು ಒದಗುವಂತಿದ್ದರೆ ಮಹಾರಾಜರು ಪೂರ್ವಭಾವಿಯಾಗಿಯೇ ಅದರ ಬಗ್ಗೆ ಎಚ್ಚರ ನೀಡುತ್ತಿದ್ದರು. ಅವರು ಹೇಳಿದಂತೆ ನಡೆದವರಿಗೆ ಯಾವ ಭಯವೂ ಇರುತ್ತಿರಲಿಲ್ಲ. 

ಗ್ರಾಮಸ್ಥರೆಲ್ಲರೂ ಮಹಾರಾಜರನ್ನು ನಂಬಿದ್ದರೂ, ಕೆಲವರು ಮಾತ್ರ ಅವರ ನಿಕಟ ವರ್ತಿಗಳಾಗಿದ್ದರು. ಮಹಾರಾಜರು ನೇರಸ್ವಭಾವದವರೂ ಮತ್ತು ತೀಕ್ಷ್ಣರೂ ಆಗಿದ್ದರಿಂದ ಅನಾವಶ್ಯಕವಾಗಿ ಅವರೊಡನೆ ಸಲಿಗೆ ಬೆಳಸಲು ಧೈರ್ಯಮಾಡುತ್ತಿರಲಿಲ್ಲ. ಮತ್ತು ಮಸೀದಿಯಲ್ಲಿ ಜನರು ಹೋಗಿ ಬಂದು ಮಾಡುವುದು ಸೀಮಿತವಾಗಿತ್ತು. ಈ ಸಮಯದಲ್ಲಿ ದೇಶಪಾಂಡೆ ವಂಶದ ಮಾಧವರಾವ್ ಬಲವಂತನು ಆಗಾಗ ಬರಲಾರಂಭಿಸಿದನು. ಆ ಸಮಯದಲ್ಲಿ ಮಸೀದಿಯ ಕಂಪೌಂಡಿನ ಹತ್ತಿರ ಒಂದು ಸಣ್ಣ ಮನೆಯಲ್ಲಿ ಮರಾಠಿ ಪಾಠಶಾಲೆಯಿತ್ತು. ಮಾಧವರಾವ್ ಆ ಪಾಠಶಾಲೆಯಲ್ಲಿ ಉಪಾಧ್ಯಾಯನಾಗಿದ್ದನು. ಮತ್ತು ಆಗಾಗ ಮಸೀದಿಗೆ ಹೋಗುವ ಪರಿಪಾಠವನ್ನಿಟ್ಟುಕೊಂಡಿದ್ದನು. ಅವನು ಅಲ್ಲಿಗೆ ಹೋದಾಗ ಚಿಲುಮೆಯಲ್ಲಿ ತಂಬಾಕು ಸೊಪ್ಪನ್ನು ತುಂಬಿ ತಾನು ಒಂದು ದಮ್ಮನ್ನು ಎಳೆದು ಮಹಾರಾಜರಿಗೆ ಸೇದಲು ಕೊಡುತ್ತಿದ್ದನು. ಅದೇನೇಕಾರಣವಿರಲಿ, ಮಾಧವರಾವ್ ಮಹಾರಾಜರಿಗೆ ಹತ್ತಿರವಾಗುತ್ತಾ ಬಂದನು ಮತ್ತು ಮಹಾರಾಜರು ಮಾಧವರಾವ್ನನ್ನು ಆಕರ್ಷಿಸಿದ್ದರು. 

ಕೆಲವರ್ಷಗಳ ನಂತರ ಅವನು ಎಲ್ಲ ಉದ್ಯೋಗವನ್ನು ತ್ಯಜಿಸಿ ಕೇವಲ ಮಹಾರಾಜರನ್ನು ಮತ್ತು ಮಹಾರಾಜರ ದರ್ಶನಕ್ಕೆ ಬರುವ ಭಕ್ತರನ್ನು ಸೇವಿಸಲಾರಂಭಿಸಿದನು. ಅದಕ್ಕೆ ಬದಲಾಗಿ ಯಾವುದೇ ರೀತಿಯ ಸಂಭಾವನೆಯನ್ನೂ ನಿರೀಕ್ಷಿಸಿರಲಿಲ್ಲ. ಈ ದಿನದವರೆಗೆ ಮಹಾರಾಜರ ಭಕ್ತರು ಮತ್ತು ಅವನು ನಿಕಟವರ್ತಿಗಳಾಗಿದ್ದಾರೆ. ಅನೇಕ ಭಕ್ತರು ಅವನ ಬೆಂಬಲ ಪಡೆಯುತ್ತಿದ್ದರು. ಅನೇಕ ಭಕ್ತರು ಇವರಿಂದ ಸಲಹೆ ಪಡೆಯದೇ ಒಂದು ಹೆಜ್ಜೆಯನ್ನೂ ಮುಂದಿಡುತ್ತಿರಲಿಲ್ಲ. 

ಸಾಮಾನ್ಯವಾಗಿ ಮಹಾರಾಜರು ಶಿರಡಿಯನ್ನು ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ. ತಮ್ಮ ಭಕ್ತ ಬಾಬಾ ಸಾಹೇಬ ಡೆನ್ಗ್ಲೆಯನ್ನು ಕಾಣನು ಒಮ್ಮೊಮ್ಮೆ ನೀಮಗಾಂವ್ ಗೆ ಮತ್ತು ಒಮ್ಮೊಮ್ಮೆ ಚಂದ್ರಭಾನ್ ಶೇಠ್ ಮಾರ್ವಾಡಿಯು ಇದ್ದ ರಾಹತಾ ಎಂಬ ಊರಿಗೆ ಹೋಗುತ್ತಿದ್ದರು. ಚಂದ್ರಭಾನ್ ಶೇಠನ ಮರಣಾನಂತರ ಕುಶಾಲಚಂದ ಶೇಠ್ ದಿನಸಿ ವ್ಯಾಪಾರವನ್ನು ಸಂಭಾಳಿಸುತ್ತಿದ್ದನು. ಮಹಾರಾಜರು ಆಗಾಗ ಕುಶಾಲಚಂದನನ್ನು ವಿಚಾರಿಸುತ್ತಿದ್ದರು. ಮತ್ತು ರಾಹತಾದವರು ಯಾರಾದರೂ ಬಂದಲ್ಲಿ ಕುಶಾಲಚಂದನ ಕುಶಲವನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಅದು ಹಾಗಿರಲಿ ಈಗ.

ಬಾಬಾ ಸಾಹೇಬ ಡೆನ್ಗ್ಲೆಯ ಸೋದರ ನಾನಾಸಾಹೇಬ ಡೆನ್ಗ್ಲೆಯ ಜಾಲಿ ನೀಮಗಾವ್ನಲ್ಲಿ ಇರುತ್ತಿದ್ದನು. ಅವನಿಗೆ ಪುತ್ರನಿಲ್ಲದುದರಿಂದ ಮತ್ತೆ ಮಾಡುವೆಯಾದನು. ಆದರೂ ಪ್ರಯೋಜನವಾಗಲಿಲ್ಲ. ಆಗ ಬಾಬಾ ಸಾಹೇಬನು ಅವನನ್ನು ಮಹಾರಾಜರ ದರ್ಶನಕ್ಕೆಂದು ಕಳುಹಿಸಿದನು. ನಾನಾಸಾಹೇಬ ಡೆನ್ಗ್ಲೆಯು ಮಹಾರಾಜರ ದರ್ಶನಕ್ಕೆಂದು ಬಂದಾಗ ಮಹಾರಾಜರು ಅವನಿಗೆ ಪುತ್ರಸಂತಾನವಾಗಲೆಂದು ಆಶೀರ್ವದಿಸಿದರು. ಕಾಲಾನಂತರದಲ್ಲಿ ಅದು ಫಲಪ್ರದವಾಗಿ ಅವನು ಪುತ್ರವಂತನಾದನು. ನಂತರ ನಾನಾಸಾಹೇಬನಿಗೆ ಸಾಯಿಯಲ್ಲಿ ಶ್ರದ್ಧೆಯುಂಟಾಗಿ ಆಗಾಗ ದರ್ಶನಕ್ಕೆ ಬರಲಾರಂಭಿಸಿದನು. ಸರ್ಕಾರಿ ಅಧಿಕಾರಿಗಳೊಂದಿಗೆ ವಿಪುಲ ಸಂಪರ್ಕವಿದ್ದು ಅವರೆದುರು ಮಹಾರಾಜರನ್ನು ಹೊಗಳುತ್ತಿದ್ದನು. ಫಲವಾಗಿ ಚಿದಂಬರ ಕೇಶವ ಉರುಫ್ ಅಣ್ಣಾ ಸಾಹೇಬ ಗಾಡ್ಗಿಲ್ ಎಂಬುವನು ಅಂದಿನ ಜಿಲ್ಲಾಧಿಕಾರಿಯ ಚಿಟ್ನಿಸ್ ಆಗಿದ್ದವನು ಮಹಾರಾಜರ ದರ್ಶನಕ್ಕೆ ಸಾಕಷ್ಟು ಜನಗಳೊಡನೆ ಬಂದನು. ಡೈನ್ ಡೈನ್ ಅಣ್ಣಾಸಾಹೇಬ ಗಾಡ್ಗಿಲ್ ನ ಶ್ರದ್ಧೆಯು ಹೆಚ್ಚಿ ಮಹಾರಾಜರ ಪೂರ್ಣಭಕ್ತನಾದನು. 

ಮಹಾರಾಜರು ವಾಸಿಸುತ್ತಿದ್ದ ಮಸೀದಿಯು ಶಿಥಿಲವಾಗಿ, ಧೂಳಿನಿಂದ ತುಂಬಿಹೋಗಿ, ಮೇಲಿನಿಂದಲೂ ಧೂಳು ಬೀಳುವ ಪರಿಸ್ಥಿತಿ ಇದ್ದುದರಿಂದ, ನಾನಾ ಸಾಹೇಬ ಡೆನ್ಗ್ಲೆಯು ಮಹಾರಾಜರಿಗಾಗಿ ಮಲಗಲು ಒಂದು ದಪ್ಪ ಮರದ ಹಲಗೆಯನ್ನು ತಂದು ಕೊಟ್ಟನು. ಮಹಾರಾಜರು ಬರಿ ನೆಲದ ಮೇಲೆ ಮಲಗದೆ ಹಲಗೆಯ ಮೇಲೆ ಮಲಗಳೆಂಬುದೇ ಅವನ ಉದ್ದೇಶವಾಗಿತ್ತು. ಮಹಾರಾಜರು ಮಲಗಲು ಹಲಗೆಯನ್ನು ಉಪಯೋಗಿಸಲಾರಂಭಿಸಿದರು, ಆದರೆ ಬೇರೆಯೇ ರೀತಿಯಲ್ಲಿ ಮಸೀದಿಯ ತೊಲೆಗೆ ಅದನ್ನು ಚಿಂದಿಬಟ್ಟೆಗಳಿಂದ ನೇತುಹಾಕಿ ಅದರ ಮೇಲೆ ಮಲಗಲು ಪ್ರಾರಂಭಿಸಿದರು. ಆ ಚಿಂದಿಯನ್ನು ನೋಡಿದವರಿಗೆ ಅದು ಹಲಗೆಯ ತೂಕವನ್ನು ತಡೆಯಲಾಗದೆ ಕಿತ್ತುಬರುವಂತೆ ಕಂಡುಬರುತ್ತಿತ್ತು. ಆದರೆ ಮಹಾರಾಜರ ಅತಿ ಮಾನವ ಶಕ್ತಿಯಿಂದ ಅವು ಹಲಗೆಯ ಭಾರವನ್ನೂ ಅದರ ಮೇಲೆ ಮಲಗುತ್ತಿದ್ದ ಸಾಯಿಮಹಾರಾಜರ ತೂಕವನ್ನೂ ತಡೆಯುತ್ತಿದ್ದವು. ನಿದ್ರಿಸಿವ ಮೊದಲು ಸಾಯಿನಾಥರು ಹಲಗೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಉರಿಯುವ ಹಣತೆಗಳನ್ನು ಇಡುತ್ತಿದ್ದರು. ಮಹಾರಾಜರು ಈ ಹಲಗೆಯ ಮೇಲೆ ಮಲಗುವುದನ್ನು ಮಹಾ ಅದ್ಭುತವೆಂದೇ ಪರಿಗಣಿಸಿದ್ದರು. ಮತ್ತು ಈ ಅದ್ಭುತವನ್ನು ವೀಕ್ಷಿಸಲು ಬಹು ದೂರದಿಂದ ಜನರು ಬರುತ್ತಿದ್ದರು. ಆದರೆ ಸಾಯಿನಾಥರು ಈ ಹಲಗೆಯ ಮೇಲೆ ಹೇಗೆ ಹತ್ತುತ್ತಿದ್ದರು ಮತ್ತು ಇಳಿಯುತ್ತಿದ್ದರು ಎಂಬುದನ್ನು ಯಾರೂ ನೋಡಿರಲಿಲ್ಲ. ಆಗಾಗ್ಗೆ ಜನರ ಗುಂಪು ಸರದಿಯಪ್ರಕಾರ ಕಾದರೂ ಸಹ ಯಾರೂ ಮಹಾರಾಜರು ಹಲಗೆಯನ್ನು ಹತ್ತುವುದಾಗಲಿ ಇಳಿಯುವುದನ್ನಾಗಲಿ ಇಂದಿಗೂ ನೋಡಲಿಲ್ಲ. ಈ ಅದ್ಭುತವನ್ನು ನೋಡಲು ಒಂದು ದೊಡ್ಡ ಗುಂಪು ಕಾಯುತ್ತಿತ್ತು. ಆದ್ದರಿಂದ ಈ ತೊಂದರೆಯನ್ನು ತಪ್ಪಿಸಲು ಮಹಾರಾಜರು ಒಂದು ದಿನ ಹಲಗೆಯನ್ನು ಮುರಿದು ಹಾಕಿದರು. 

ಕೋಪರಗಾಂವನ ಸರ್ಕಲ್ ಇನ್ಸ್ಪೆಕ್ಟರ್ (ಕಂದಾಯ) ಎಡಿಎ ಗೋಪಾಲರಾವ್ ಗುಂಡನೂ ಸಯ ನಾನಾಸಾಹೇಬ ದೆಂಗಳೆಯ ಮೊದಲು ಕಾರಣದಂತೆಯೇ ದರ್ಶನಕ್ಕಾಗಿ ಬಂದನು. ಇವನಿಗೆ ಮೂರು ಜನ ಪತ್ನಿಯರಿದ್ದರೂ ಪುತ್ರ ಸಂತಾನವಿರಲಿಲ್ಲ. ಮಹಾರಾಜರ ಅನುಗ್ರಹದಿಂದ ಇವನೂ ಪುತ್ರವಂತನಾದನು. ಅವನೂ ಸಹ ಸಾಯಿಯ ಪೂರ್ಣಭಕ್ತನಾದನು. ಒಂದಿ ದಿನ ಮಸೀದಿಯು ಶಾಥಿಲವಾಗಿರುವುದನ್ನು ನೋಡಿ ಅದರ ಪುನರ್ನಿರ್ಮಾಣ ಮಾಡಬೇಕೆಂದೆನಿಸಿ ಅದಕ್ಕಾಗಿ ಬಹಳ ಕಲ್ಲುಗಳನ್ನು ಸಂಗ್ರಹಿಸಿದನು. ಆದರೆ ಮಹಾರಾಜರು ಅವನಿಗೆ  ನೀಡಲಿಲ್ಲ. ಮತ್ತೊಬ್ಬ ಭಕ್ತನಿಂದ ಆ ಕಾರ್ಯ ಜರುಗಬೇಕಾಗಿತ್ತು. ಅದರ ಬಗ್ಗೆ ಮುಂದೆ ತಿಳಿಸಲಾಗಿದೆ. ಗೋಪಾಲರಾವ್ ಸಂಗ್ರಹಿಸಿದ ಕಲ್ಲುಗಳನ್ನು ಮಹಾರಾಜರ ಅದೀಧಾನುಸಾರ ಶನಿ ದೇವಾಲಯವನ್ನು ನಿರ್ಮಿಸಲು ಮತ್ತು ಹಳ್ಳಿಯ ಇತರ ದೇವಾಲಯಗಳನ್ನು ಜೀರ್ಣೋಧಾರ ಮಾಡಲು ಉಪಯೋಗಿಸಲಾಯಿತು. ಮಹಾರಾಜರು ಬೇರೆ ಎಲ್ಲ ದೇವಾಲಯಗಳ ಸ್ಥಿತಿಗತಿಯನ್ನೂ ಗಮನಿಸುತ್ತಿದ್ದರು. ಮಹಾರಾಜರಿಂದಾಗಿ ಮಾರುತಿ ದೇವಾಲಯವು ಜೀರ್ಣೋದ್ಧಾರ ಹೊಂದಿದ್ದೆ ಅಲ್ಲದೆ ವಿಶಾಲವೂ ಆಯಿತು. ಹಳ್ಳಿಯ ದೇವಾಲಯಗಳಿಗೆ ಗಮನ ನೀಡಿದಂತೆ ಅವರು ಸಮಾಧಿಗಳಿಗೂ ಅಷ್ಟೇ ಗಮನ ನೀಡಿದರು. ಮಹಾರಾಜರು ಕೆಲವು ಸಲ ಹಳ್ಳಿಯ ಸರಹದ್ದಿನಲ್ಲಿದ್ದ ಬೇವಿನ ಮರದ ಕೆಗಳೇ ಕುಳಿತಿರುತ್ತಿದ್ದುದರಿಂದ ಈ ವಿಷಯವನ್ನು ಇಲ್ಲಿ ತಿಳಿಸಿದೆ. ಒಮ್ಮೆ ಅವರು, "ಒಬ್ಬ ಪೀರನ ಸಮಾಧಿಯು ಇಲ್ಲಿದೆ" ಎಂದು ಹೇಳಿದಾಗ ಆ ಜಾಗವನ್ನು ಅಗೆದಾಗ ಅಲ್ಲಿ ನಿಜವಾಗಿಯೂ ಒಂದು ಗೋರಿಯು ಕಂಡು ಬಂದಿತು. ನಂತರ ಅದೇ ದಿನ ಭಕ್ತರು ಸಂಗೀತ ವಾದ್ಯಗಳೊಂದಿಗೆ ಪರಾಕು ಘೋಷಿಸುತ್ತಾ ಮಹಾರಾಜರ ಮೆರವಣಿಗೆ ಮಾಡಿದರು. ಮಹಾರಾಜರು ಹೇಳಿದರು, "ಇದು ನನ್ನ ತಂದೆಯ ಸ್ಥಾನ. ಪ್ರತಿ  ಶುಕ್ತವಾರಗಳಂದು ನಿಮ್ಮ ಕ್ಷೇಮಕ್ಕಾಗಿ ಅಗರಬತ್ತಿಯನ್ನು ಹಚ್ಚಿರಿ". 

ಒಮ್ಮೆ ಗೋಪಾಲರಾವ ಗುಂಡನು ವಾರ್ಷಿಕ ಹಬ್ಬವಾದ ಉರುಸ್ ನ್ನು ಆಚರಿಸಲು ಯೋಚಿಸಿದನು. ಅವನು ಈ ಯೋಚನೆಯನ್ನು ತಾತ್ಯಾಪಾಟೀಲ್‌, ದಾದಾಕೋತೆ ಪಾಟೀಲ, ಮಾಧವರಾವ್‌ ದೇಶಪಾಂಡೆ ಮತ್ತು ಗ್ರಾಮದ ಇತರ ಭಕ್ತರಿಗೆ ತಿಳಿಸಿ, ಅವರಅನುಮೋದನೆಯನ್ನು ಪಡೆದು, ಅದಕ್ಕೆ ಬೇಕಾದ ತಯಾರಿಯ ಉಸ್ತುವಾರಿಯನ್ನು ತಾನೇ ವಹಿಸಿಕೊಂಡನು. ಆದರೆ ಕುಲಕರ್ಣಿಯು ಇದನ್ನು ವಿರೋಧಿಸಿದನು. ಪರಿಣಾಮವಾಗಿ ಕಲೆಕ್ಟರನು ಈ ಉರುಸ್‌ ನಡೆಯಬಾರದೆಂದು ಆದೇಶ ನೀಡಿದನು. ಆದರೆ ಉರುಸ್‌ ನಡೆಸುವ ಯೋಜನೆಗೆ ಮಹಾರಾಜರ ಪೂರ್ಣ ಆಶೀರ್ವಾದವಿತ್ತು. ಆದುದುರಿಂದ, ಮೇಲೆ ತಿಳಿಸಿದಂತಹ ಈ ಭಕ್ತರೆಲ್ಲರೂ ಮತ್ತೊಮ್ಮೆ ಕಲೆಕ್ಟರ್‌ನ್ನು ಭೇಟಿಮಾಡಿ ಮೊದಲ ಆದೇಶವನ್ನು ರದ್ದುಪಡಿಸಿ, ಉರುಸ್‌ ನಡೆಸಲು ಪರವಾನಿಗೆಯನ್ನು ಪಡೆದರು. ಈ ಉತ್ಸವವನ್ನು ಮಹಾರಾಜರ ಅನುಮತಿ ಪಡೆದು ರಾಮನವಮಿಯಂದೇ ನಡೆಸಲು ನಿಶ್ಚಯಿಸಿದರು. ಮತ್ತು ಅಂದಿನಿಂದ ಇಂದಿನವರೆಗೆ ಅದನ್ನು ರಾಮನವಮಿಯಂದೇ ಆಚರಿಸಲಾಗುತ್ತಿದೆ.

ತಾತ್ಕಾಗಣಪತಿ ಕೋತೆ ಪಾಟೀಲನು ಉತ್ಸವದ ಎಲ್ಲ ವ್ಯವಸ್ಥೆ ಹಾಗೂ ಉಸ್ತುವಾರಿಯನ್ನು ಆರಂಭದಿಂದಲೂ ಶಿರಡಿಯಲ್ಲಿ ನೋಡಿಕೊಳ್ಳುತ್ತಿದ್ದನು. ಮಹಾರಾಜರು ಅವನನ್ನು ಆತ್ಮೀಯವಾಗಿ ಪ್ರೀತಿಸುತ್ತಿದ್ದರು. ಅವನು ಮಹಾರಾಜರನ್ನು ಸೋದರ ಮಾವನೆಂದೇ ಸಂಬೋಧಿಸುತ್ತಿದ್ದನು. ಅವನ ತಾಯಿ ಸೌಭಾಗ್ಯವತಿ ಬಾಯಜಾಬಾಯಿಯು ಮಹಾರಾಜರ ಸೇವೆಯನ್ನು ಭಕ್ತಿಯಿ೦ದ ಮಾಡುತ್ತಿದ್ದಳು. ಅದೂ ಹಳ್ಳಿಯ ಅನೇಕ ಜನ ಸಾಮಾನ್ಯರು ಮಹಾರಾಜರನ್ನು ಹುಚ್ಚನೆಂದೇ ಎಣಿಸುತ್ತಿದ್ದಾಗ!

ಆರಂಭದ ದಿನಗಳಲ್ಲಿ ಮಹಾರಾಜರು ನಾಲ್ಕು ಅಥವಾ ಐದು ಸಲ ಹಳ್ಳಿಯ ಒಳಗೆ ಭಿಕ್ಷೆಗೆಂದು ಹೋಗುತ್ತಿದ್ದರು. ಆದರೆ ಸೌಭಾಗ್ಯವತಿ ಬಾಯಜಾಬಾಯಿ ಅವರನ್ನು ಎಂದಿಗೂ ಹಿಂದಕ್ಕೆ ಕಳುಹಿಸಲಿಲ್ಲ. ಸಹಜವಾಗಿಯೇ ಆ ಮಹಿಳೆ ತನ್ನ ಭಕ್ತಿಯ ಸುಫಲವನ್ನು ಅನುಭವಿಸಿದಳುಆದರೆ ಅವಳ ಇಡೀ ಕುಟುಂಬವೇ ಅದರಲ್ಲೂ ವಿಶೇಷವಾಗಿ ತಾತ್ಯಾನು ಫಲಾನುಭವಿಯಾಗಿದ್ದನು. ಮಹಾರಾಜರು ತಾತ್ಯಾನಿಗೆ ಹಣವನ್ನು ಕೊಡುತ್ತಿದ್ದುದೇ ಅಲ್ಲದೆ ಎಲ್ಲ ವಿಷಯಗಳಲ್ಲಿಯೂ ತೃಪ್ತಿಪಡಿಸುತ್ತಿದ್ದರು. ಪ್ರತಿದಿನ ಸಾಯಂಕಾಲ ತಾತ್ಯಾನು ಮಹಾರಾಜರಲ್ಲಿಗೆ ಬಂದಾಗ ಮಾವ ಮತ್ತು ಸೋದರಳಿಯ ಇವರಿಬ್ಬರ ಪ್ರೇಮಪ್ರಸಂಗವು ನೋಡಲು ತಕ್ಕುದಾಗಿದ್ದು ಅವರ ಪ್ರೇಮಚರ್ಚೆಯು ಕೇಳಲು ಯೋಗ್ಯವಾಗಿತ್ತು. ಅದೇ ರೀತಿ ಮಸೀದಿ ಮತ್ತು ಚಾವಡಿಯಲ್ಲಿ ಎಲ್ಲ ಸಿದ್ಧತೆಗಳೂ ತಾತ್ಯಾನ ಕೈಯಲ್ಲಿಯೇ ಇದ್ದವು. ಮಹಾರಾಜರು ತಾತ್ಯಾನು ಬಂದು ಅವರನ್ನು ಏಳಿಸಲು ಸಹಾಯಮಾಡುವವರೆಗೆ ಏಳುತ್ತಿರಲಿಲ್ಲ. ತಾತ್ಯಾನೇ ಅವರ ತೋಳನ್ನು ಹಿಡಿದು ಎತ್ತಿ ತಾನೇ ಹರಡಿದ್ದ ಆಸನದ ಮೇಲೆ ಮಹಾರಾಜರು ಕುಳಿತುಕೊಳ್ಳುವಂತೆ ಮಾಡುತ್ತಿದ್ದನು. ಇದು ನಿತ್ಯದ ಪರಿಪಾಠವಾಗಿತ್ತು. ಚಿಲುಮೆಯನ್ನೂ ಸಹ ತಾತ್ಯಾನೇ ತುಂಬುತ್ತಿದ್ದನು.


ರಾಮನವಮಿ ಹಬ್ಬದ ದಿನವೇ ಎರಡು ದೊಡ್ಡ ಬಾವುಟಗಳನ್ನು ಅತಿ ವಿಜೃಂಭಣೆಯಿಂದ ಮಸೀದಿಗೆ ತೆಗೆದುಕೊಂಡು ಹೋಗಿ ಅಲ್ಲಿ ಎರಡು ತುದಿಗಾಲಲ್ಲಿ ಕಟ್ಟುತ್ತಿದ್ದರು. ಅವುಗಳಲ್ಲಿ ಒಂದು ಬಾವುಟವು ಶಂಕರರಾವ್ ರಘುನಾಥ ದೇಶಪಾಂಡೆ ಅಲಿಯಾಸ್ ನಾನಾಸಾಹೇಬ ನಿಮೋಣಕರ್‌ ಮತ್ತು ಎರಡನೆಯದು ನಗರ ಊರಿನ ದಾಮೂಶೇಠ ಕಾಸರ್‌ರವರಿಂದ ಬರುತ್ತಿತ್ತು. ನಾನಾಸಾಹೇಬ ನಿಮೊಣಕರನು ನಿಮೋಣದ ದೇಶಪಾಂಡೆಯಾಗಿದ್ದನು. (ಜಿಲ್ಲಾ ಲೆಕ್ಕಾಧಿಕಾರಿ).  ನಿಮೋಣ ಗ್ರಾಮವು ಸಂಗಮನೇರ್‌ ತಾಲೂಕಿನಲ್ಲಿದೆ. ನಾನಾ ಸಾಹೇಬನು ತಾಲೂಕಿನ ಮುಖ್ಯಸ್ಥರಲ್ಲಿ ಒಬ್ಬನಾಗಿದ್ದನು. ಸರಕಾರವು ಅವನನ್ನು ಗೌರವ ಜಿಲ್ಲಾ ನ್ಯಾಯಾಧಿಕಾರಿಯಾಗಿ ನೇಮಿಸಿತ್ತು. ಅವನು ತನ್ನ ಮುಷ್ಟಿನ ಕಾಲದಲ್ಲಿ ಅದನ್ನು ತ್ಯಜಿಸಿದ್ದನು. ಅವನ ಮಾವನು ಅಲ್ಲಿಯೇ ವಾಸವಾಗಿದ್ದನು. ಅಲ್ಲಿಗೆ ಬಂದಾಗಲೆಲ್ಲ ಮಾವನ ಸೂಚನೆಯಂತೆ ಮಹಾರಾಜರ ದರ್ಶನಕ್ಕೆ ಹೋಗುತ್ತಿದ್ದನು. ದಿನೇ ದಿನೇ ಮಹಾರಾಜರಲ್ಲಿ ಅವನ ಭಕ್ತಿ ಹೆಚ್ಚುತ್ತಿತ್ತು ಮತ್ತು ಅವನ ಕೊನೆಯ ಮೂರು ವರ್ಷಗಳನ್ನು ಸದಾಕಾಲ ಮಹಾರಾಜರ ಸೇವೆಯಲ್ಲಿ ಕಳೆದನು. ಅವನು ತನ್ನ ಮನೆಗೆ ಕೇವಲ ಸ್ನಾನ, ಬೆಳಗಿನ ಮತ್ತು ಸಂಜೆಯ ಪ್ರಾರ್ಥನಾ ವಿಧಿಗಳು ಮತ್ತು ದಿನನಿತ್ಯದ ವಿಧಿವಿಧಾನಗಳಿಗಾಗಿ ಮಾತ್ರ ಹೋಗುತ್ತಿದ್ದನು. ಉಳಿದ ಸಮಯದಲ್ಲಿ ಮಹಾರಾಜರ ಕೈ ಸಂಜ್ಞೆಯ ಆಜ್ಞಾಧಾರಕನಾಗಿದ್ದನು. 60 ವರ್ಷಗಳು ಮೀರಿದ್ದರೂ ಅವನು ವಿಶ್ರಾಂತಿಗಾಗಿ ಅಥವಾ ಮಹಾರಾಜರ ಯಾವುದೇ ಸೇವೆಯನ್ನು ತಪ್ಪಿಸಲು ಯೋಚಿಸಲಿಲ್ಲ ಹಾಗೂ ಅದಕ್ಕಾಗಿ ಎಂದಿಗೂ ಇಚ್ಛಿಸಲಿಲ್ಲ.

 

ಮಹಾರಾಜರು ಅವನನ್ನು ಕಾಕಾ ಎಂದು ಕರೆಯುತ್ತಿದ್ದರು. ಮಹಾರಾಜರ ನಂತರ ಅವನು ಹೆಚ್ಚು ಕಾಲ ಬದುಕಿರಲಿಲ್ಲ. ನಂತರ ಬೇಗನೆ ಮಹಾರಾಜರ ಚರಣಕಮಲಗಳಲ್ಲಿ ಸೇರಿಹೋದನು. ಮಹಾರಾಜರ ಕೃಪೆಯಿ೦ದ ಅವನ ಅಂತ್ಯ ಸುಖಕರವಾಯಿತು. ಕೊನೆಯ ಮೂರು ದಿನಗಳಲ್ಲಿ ಅವನು ಎಲ್ಲೆಲ್ಲೂ ಮಹಾರಾಜರನ್ನೇ ಕಾಣುತ್ತಿದ್ದನು. ಮತ್ತು ಹತ್ತಿರ ಬ೦ದವರನ್ನೆಲ್ಲ “ಸಾಯಿಬಾಬಾ" ಎಂದೇ ಸಂಬೋಧಿಸುತ್ತಿದ್ದನು (ಮಹಾರಾಜರನ್ನು ಬಾಬಾ ಎಂದು ಕರೆಯಲಾಗುತ್ತಿತ್ತೆಂದು ಈಗಾಗಲೇ ಹೇಳಿದೆ). ತನ್ನ ಪತ್ನಿಯನ್ನೂ ಸಹ "ಬಾ ಸಾಯಿ ಬಾಬಾ" ಎಂದು ಕರೆದನು. ಅವನ ಪತ್ನಿಯು ಆತನು ಯಾವುದೇ ಭ್ರಮೆಯಲ್ಲಿರುವನೆಂದು ಭಾವಿಸಿ, “ನಾನು ಬಾಬಾ ಅಲ್ಲ, ನಾನು ನಿಮ್ಮ ಪತ್ನಿ” ಎಂದಳು. ಆಗ ಅವನು, “ನಿನ್ನಲ್ಲಿ ಯಾರಿದ್ದಾರೆ? ಬಾಬಾನೇ. ನೀನು ಬಾಬಾ” ಎಂದನು. ಈ ರೀತಿ ಮಹಾರಾಜರ ನಿರಂತರ ನೆನಪಿನಲ್ಲೇ ಅವನ ಅಂತ್ಯವು ಬಂದಿತು.

 

ರಾಮನವಮಿಯ ಸಮಯದಲ್ಲಿ ಬರುವ ಎರಡನೆಯ ಬಾವುಟವು ದಾಮೋದರ ಸವಲಾರಾಮ ಅಲಿಯಾಸ್‌ ದಾಮೂಶೇಠ ಕಾಸರ್‌ನಿಂದ ಎಂದು ಈಗಾಗಲೇ ಮೇಲೆ ತಿಳಿಸಿದೆ. ಅವನಿಗೆ ಇಬ್ಬರು ಪತ್ನಿಯರಿದ್ದರೂ, ಇಬ್ಬರಿಂದಲೂ ಪುತ್ರಸಂತಾನವಿರಲಿಲ್ಲ. ಆದ್ದರಿಂದ ಆ ವಿಷಯದಲ್ಲಿ ಬಹಳ ದುಃಖಿತನಾಗಿದ್ದನು. ಒಮ್ಮೆ ಗೋವಿಂದರಾವ್‌ ಸಪಕರ್‌, ಮಾಧರಾವ್‌ ದೇಶಪಾಂಡೆಯ ಮಾವ, (ಹೆಂಡತಿಯ ತಂದೆ) ಇಲ್ಲಿಗೆ ಬಂದು ಮಹಾರಾಜರ ಆಶೀರ್ವಾದ ತೆಗೆದುಕೊಳ್ಳುವಂತೆ ಸೂಚಿಸಿದನು. ಹಾಗೆಯೇ ಅವನು ಇಲ್ಲಿಗೆ ಬಂದನು ಮತ್ತು ಮಹಾರಾಜರ ಆಶೀರ್ವಾದ ಪಡೆದನು. ಸಹಜವಾಗಿ ಮಹಾರಾಜರಲ್ಲಿ ಅವನ ಶ್ರದ್ಧೆಯು ಸ್ಥಿರಗೊಂಡಿತು. ಮತ್ತು ಅಂದಿನಿಂದ ರಾಮನವಮಿಯಂದು ಒಂದು ಹೊಸ ಪತಾಕೆಯನ್ನು ತಂದು ಅಲ್ಲಿ ನೆರೆದಿರುವ ಎಲ್ಲ ಫಕೀರರಿಗೆ ಅನ್ನದಾನ ಮಾಡುವುದನ್ನು ರೂಢಿಸಿಕೊಂಡಿದ್ದನು. ಮತ್ತು ಈ ಆಚರಣೆ ದಿನದವರೆಗೂ ಮುಂದುವರೆದಿದೆ.


ರಾಮನವಮಿಯ ಉತ್ಸವ ಪ್ರಾರಂಭವಾಗುವುದಕ್ಕೆ ಕೆಲವು ವರ್ಷಗಳ ಮೊದಲು ಮಹಾರಾಜರು ತಮ್ಮಲ್ಲಿಗೆ ಒಬ್ಬ ನಿಸ್ವಾರ್ಥ ಭಕ್ತನೊಬ್ಬನನ್ನು ಸೆಳೆದುಕೊಂಡಿದ್ದರು. ಆ ಭಕ್ತನು ನಾರಾಯಣ ಗೋವಿಂದ ಅಲಿಯಾಸ್‌ ನಾನಾ ಸಾಹೇಬ ಚಂದೋರಕರ್‌. ಅವನು ಕಲ್ಯಾಣದ ನಿವಾಸಿಯಾಗಿದ್ದರೂ ಅಹಮದ್‌ ನಗರದ ಜಿಲ್ಲಾಧಿಕಾರಿಯ ಚಿಟ್ನಿಸ್‌, ಅಂದರೆ ಸಂಪರ್ಕ ಕಾರ್ಯದರ್ಶಿಯಾಗಿದ್ದನು. ಒಂದು ದಿನ ಆ ಊರಿನ ಕುಲಕರ್ಣಿಯಾದ ಕೇಶವ ಅನ೦ತ ಅಲಿಯಾಸ್‌ ಅಪ್ಪಾನು ಮಹಾರಾಜರು ಅವನಿಗಾಗಿ ಹೇಳಿಕಳುಹಿಸಿದ್ದಾರೆಂದು ತಿಳಿಸಿದನು. ಮೊದಲು ನಾನಾ ಸಾಹೇಬನಿಗೆ ಅಪ್ಪಾನಲ್ಲಿ ವಿಶ್ವಾಸ ಮೂಡಲಿಲ್ಲ. "ನೀನೇಕೆ ವ್ಯರ್ಥವಾಗಿ ಮಹಾರಾಜರ ಹೆಸರನ್ನು ಎತ್ತುವೆ? ನಿನಗೆ ನನ್ನಿಂದ ಏನಾದರೂ ಆಗಬೇಕಿದ್ದರೆ ಸರಳವಾಗಿ ತಿಳಿಸು" ಎಂದು ಹೇಳಿದನು. ಅದಕ್ಕೆ ಅಪ್ಪಾನು ಮಹಾರಾಜರು ನಿಜವಾಗಿಯೂ ಕರೆದಿದ್ದಾರೆಂದು ದೃಢವಾಗಿ ಹೇಳಿದನು. ಈ ರೀತಿ ಅಷ್ಟು ಖಚಿತವಾಗಿ ಹೇಳಿದ ನಂತರ ನಾನಾ ಸಾಹೇಬನು ಮಹಾರಾಜರ ದರ್ಶನಕ್ಕೆ ಬಂದು ಶೀಘ್ರದಲ್ಲಿಯೇ ಮಹಾರಾಜರಲ್ಲಿ ವಿಶ್ವಾಸ ಬೆಳೆಸಿಕೊಂಡನು. ಅನಂತರ ಅವನು ಆಗಾಗ ಬಂದು ಮಹಾರಾಜರ ಜ್ಞಾನದ ಮಧುವನ್ನು ಪಡೆಯುವ ಸದವಕಾಶವನ್ನು ಪಡೆದನು. ಮಹಾರಾಜರು ಮತ್ತು ಅವನು ಒಮ್ಮೊಮ್ಮೆ ಗಂಟೆಗಟ್ಟಲೆ ಒಟ್ಟಾಗಿರುತ್ತಿದ್ದರು. "ಸಾಷ್ಟಾಂಗ ನಮಸ್ಕಾರ ಮಾಡುವುದರಿಂದ, ಗುರುವನ್ನು ಪ್ರಶ್ನಿಸುವುದರಿಂದ, ಅವನನ್ನು ಸೇವಿಸುವುದರಿಂದ, ಜ್ಞಾನವೇನೆಂಬುದನ್ನು ಕಲಿ. ಅನಂತರ ಸದ್ವಸ್ತುವಿನ ಸತ್ಯಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡಂತಹ ಜ್ಞಾನಿಗಳು ನಿನಗೆ ಜ್ಞಾನೋಪದೇಶ ಮಾಡುತ್ತಾರೆ". ಭಗವಂತನ ಈ ವಚನದಂತೆ, ನಾನಾ ಸಾಹೇಬನು ನಮಸ್ಕರಿಸಿ, ಪ್ರಶ್ನಿಸಿ ಮತ್ತು ಸೇವಿಸಿದಾಗ ಮಹಾರಾಜರು ಅವನಿಗೆ ಉಪದೇಶ ನೀಡಿದರು. ಒಂದು ಸಂದರ್ಭದಲ್ಲಿ ಮಹಾರಾಜರು ಈ ಒಂದು ಶ್ಲೋಕದ ಸಂಪೂರ್ಣವಾದ ಅರ್ಥವನ್ನು ಒಂದು ಗಂಟೆಗೂ ಹೆಚ್ಚು ಸಮಯದವರೆಗೆ ವಿವರಿಸಿದರು. ಈ ಬೋಧನೆಯಿಂದ ನಾನಾ ಸಾಹೇಬನಿಗೆ, ಮಹಾರಾಜರಿಗೆ ಸಂಸ್ಕೃತದ ಪರಿಪೂರ್ಣ ಜ್ಞಾನವಿದೆಯೆಂಬುದು ಮನದಟ್ಟಾಯಿತು. ನಾನಾ ಸಾಹೇಬನು ತನ್ನ ಕೈಲಾದಷ್ಟು ಮಹಾರಾಜರ ಸೇವೆ ಮಾಡಿದನು. ಭಕ್ತರು ಎರಡು ವಿಶೇಷ ವಿಚಾರಗಳಿಗಾಗಿ ಅವನನ್ನು ಇಂದೂ ನೆನಸಿಕೊಳ್ಳುತ್ತಾರೆ. ಒಂದು ಮಹಾರಾಜರ ಹಳೆಯ ಮಸೀದಿಯನ್ನು ಒಡೆದು ಹಾಕಿ ಷನರ್ನಿರ್ಮಾಣಮಾಡಿ ವಿಸ್ತರಿಸಿದ್ದಕ್ಕಾಗಿ. ಈ ಕೆಲಸವನ್ನು ನಾನಾ ಸಾಹೇಬನು ಖುದ್ದಾಗಿ ಮಾಡಲು ಅನುಕೂಲವಿಲ್ಲದಿದ್ದರಿಂದ ನಾನಾ ಸಾಹೇಬ ನಿಮೋಣಕರನು ಅವನ ಬೇಡಿಕೆಯಮೇರೆಗೆ ಅಲ್ಲಿಯೇ ಉಳಿದುಕೊಂಡು ಕೆಲಸದ ಉಸ್ತುವಾರಿಯನ್ನು ಕೈಗೆತ್ತಿಕೊಂಡು ಸಮರ್ಪಕವಾಗಿ ಉತ್ತಮವಾಗಿ ಮಾಡಿ ಮುಗಿಸಿದನು. ಮಸೀದಿಯ ನಿರ್ಮಾಣಕ್ಕಾಗಿ ಮಹಾರಾಜರ ಒಪ್ಪಿಗೆಯನ್ನು ಮ್ಹಾಳಸಾಪತಿಯವರ ಮೂಲಕ ಪಡೆಯಲಾಗಿತ್ತು. ಆದರೂ ಕೆಲಸ ಮುಂದುವರೆಯುತ್ತಿರುವಾಗ ಮಹಾರಾಜರು ಆಗಾಗ ಕಟ್ಟಡವನ್ನು ಕೆಡವಿ ದೊಡ್ಡದಾದ ಭಾರವಾದ ಕಲ್ಲುಗಳನ್ನೂ, ಕಂಭಗಳನ್ನೂ ಕಿತ್ತು ದೂರಕ್ಕೆಸೆಯುತ್ತಿದ್ದರು. ಅನಂತರ ಆ ಕೆಲಸವನ್ನು ಮತ್ತೆ ಮಾಡಲಾಗುತ್ತಿತ್ತು. ಇತರರು, ಮಹಾರಾಜರ ಕೃತ್ಯವನ್ನು ವಿಷಪರೀತವೆಂದುಕೊಂಡರೂ, ಇದರ ಅಂತರಾರ್ಥವನ್ನು ತಿಳಿದವರು ಮಹಾರಾಜರ ಕಾರ್ಯಗಳಿಂದಾಗಿ ಅಚ್ಚರಿಪಡುತ್ತಿರಲಿಲ್ಲ.

 

ಅ೦ತೂ ಮಸೀದಿಯ ಕೆಲಸ ಪೂರ್ಣವಾಯಿತು. ಮಹಾರಾಜರು ಆ ದಿನ ನೀಮಗಾಂವಕ್ಕೆ ಹೋಗಿದ್ದರು. ಹೊಸ ಮಸೀದಿಯಲ್ಲಿ ವಾಸಮಾಡಲು ಅತ್ಯಂತ ವಿಜೃಂಭಣೆಯ ಮೆರವಣಿಗೆಯಲ್ಲಿ ಅವರನ್ನು ಕರೆತರಲಾಯಿತು. ಮರಗೆಲಸದವರಾದ ಕೊಂಡಾಜಿ, ಗಬಜಿ ಮತ್ತು ತುಕಾರಾಮ ಈ ಮೂವರು ಸೋದರರು ಮಸೀದಿಯ ಕೆಲಸದಲ್ಲಿ ಬಹು ಒಳ್ಳೆಯ ಸಹಾಯಕರಾಗಿದ್ದರು. ಮಹಾರಾಜರ ದೇಹತ್ಯಾಗದವರೆಗೂ ಮಸೀದಿಯನ್ನು ಗುಡಿಸುವುದು. ಮಹಾರಾಜರ ಪಾತ್ರೆಗಳನ್ನು ತೊಳೆಯುವುದು, ಮಹಾರಾಜರು ಮುಖತೊಳೆಯಲು ಬಿಸಿನೀರು ಕಾಯಿಸುವುದು - ಈ ಎಲ್ಲ ಕೆಲಸಗಳನ್ನೂ ತುಕಾರಾಮನೇ ಮಾಡುತ್ತಿದ್ದನು. ಈ ಕೆಲಸವನ್ನು ಮಹಾರಾಜರು ಸಾಮಾನ್ಯವಾಗಿ ಇತರರಿಂದ ಮಾಡಿಸುತ್ತಿರಲಿಲ್ಲಇಂದಿಗೂ ರಾಮನವವಿಗಾಗಿ ಬೇಕಾಗಿರುವ ಪತಾಕೆಗಳನ್ನು ಈ ಮರಗೆಲಸದವನ ಮನೆಯಲ್ಲಿಯೇ ಸಿದ್ಧಮಾಡುತ್ತಾರೆ. ಅಲ್ಲಿಂದಲೇ ಮೆರವಣಿಗೆಯು ಪ್ರಾರಂಭವಾಗುತ್ತದೆ.

 

ನಾನಾಸಾಹೇಬನ ಎರಡನೆಯ ಮುಖ್ಯಸೇವೆ ಮಹಾರಾಜರ ಕೀರ್ತಿಯನ್ನು ಲೋಕಪ್ರಸಿದ್ಧವಾಗಿ ಮಾಡಿ ಜನರು ಮಹಾರಾಜರ ಅನುಗ್ರಹವನ್ನು ಪಡೆಯುವಂತೆ ಮಾಡುವುದಾಗಿತ್ತು. ಅವನು ಮಾಮಲೇದಾರನಾಗಿದ್ದರಿಂದ ಮತ್ತು ಅನ೦ತರ ಡೆಪ್ಯುಟಿ ಕಲೆಕ್ಟರ್‌ ಆಗಿದ್ದರಿಂದ, ಅವನು ಅನೇಕ ಸಾರಿ ಸರ್ಕೀಟು ಪ್ರವಾಸ ಮಾಡಬೇಕಾಗುತ್ತಿತ್ತು. ನಾನಾ ಸಾಹೇಬನೇ ಈ ಗ್ರಂಥಕರ್ತೃವಿಗೆ ಮಹಾರಾಜದರ್ಶನ ಭಾಗೃದೊರೆಯಲು ಕಾರಣನಾದವನು. ಮುಂಬಯಿಯಿಂದ ಮತ್ತು ಥಾನೆ ಜಿಲ್ಲೆಯ ಸಾವಿರಾರು ಜನರು ಮಹಾರಾಜರ ದರ್ಶನ ಲಾಭ ಪಡೆದು ಆನಂದತುಂದಿಲರಾಗಿದ್ದರು. ಇದಕ್ಕೆಲ್ಲ ಕಾರಣ ನಾನಾ ಸಾಹೇಬನು. ಮುಂಬಯಿಯಿಂದ ಜನರನ್ನು ಆಕರ್ಷಿಸಿ ಎಳೆತರಲು ನಾನಾಸಾಹೇಬನಲ್ಲದೆ ಮತ್ತಿಬ್ಬರು ಕಾರಣರಾಗಿದ್ದರು. ಅವರಲ್ಲಿ ಒಬ್ಬನು ಗಣೇಶ ದತ್ತಾತ್ರೇಯ ಸಹಸ್ರಬುದ್ದಿ ಅಲಿಯಾಸ್‌ ದಾಸಗಣು. ಮೊದಲು ಅವನು ಪೋಲಿಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಅವನು "ತಮಾಷಾ"ದಲ್ಲಿ ಮುಳುಗಿರುತ್ತಿದ್ದನು. ನಾನಾ ಸಾಹೇಬನಿಂದಾಗಿ ಅವನು ಮಹಾರಾಜರ ದರ್ಶನಕ್ಕೆ ಬಂದನು. ಮೆಲ್ಲಮೆಲ್ಲನೆ ಅವನ ಮನಸ್ಸಿನ ಮೇಲೆ ಮಹಾರಾಜರು ಅದೆಂತಹ ಪರಿಣಾಮಬೀರಿದರೆಂದರೆ ಅವನು ಉದ್ಯೋಗವನ್ನು ತ್ಯಜಿಸಿ ಸ೦ತನ ಕಥೆಯನ್ನು ಕೀರ್ತನೆ ಮತ್ತು ಪುಸ್ತಕಗಳ ಮೂಲಕ ಜನತೆಗೆ ಪ್ರಸಾರಮಾಡುವ ಕಾರ್ಯವನ್ನು ಪ್ರಾರಂಭಿಸಿದನು. ಅವನು ಇಂದೂ ಈ ಕೆಲಸವನ್ನು ಮುಂದುವರಿಸಿದ್ದಾನೆಅವನು, 'ಭಕ್ತಲೀಲಾಮೃತ', 'ಸಂತ ಕಥಾಮೃತ', 'ಭಕ್ತಿಸಾರಾಮೃತ' ಎಂಬ ಸಂತರ ಜೀವನ ಕುರಿತಾದ ಗ್ರಂಥಗಳನ್ನು ರಚಿಸಿದ್ದಾನೆ. ಅದೂ ಅಲ್ಲದೆ ಅವನು 'ಈಶಾವಾಸ್ಯೋಪನಿಷತ್‌' ಮೇಲೆ ಮರಾಠಿಭಾಷೆಯಲ್ಲಿ ಸರಳ, ಸುಂದರ ಭಾಷ್ಯವನ್ನು ರಚಿಸಿದ್ದಾನೆ. ಮತ್ತು ಶ್ರೀಜ್ಞಾನೇಶ್ವರ ಮಹಾರಾಜರ 'ಅಮೃತಾನುಭವ', ಇವುಗಳಲ್ಲದೆ ಇನ್ನೂ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಇವನನ್ನು ಮುಂಬಯಿಯಿಂದ ಕರೆತಂದು ನಾನಾಸಾಹೇಬ ಚಾಂದೋರಕರನು ಮುಂಬಯಿಯ ನಿವಾಸಿಗಳಿಗೆ ಭಕ್ತಿರಸಾಮೃತಭರಿತ ಕೀರ್ತನೆಗಳನ್ನು ಮಾಡಿಸುತ್ತಿದ್ದನು. ಅವುಗಳಿಂದ ಮಹಾರಾಜರ ಸ್ವಭಾವ ಮತ್ತು ಗುಣಗಳನ್ನು ಅರಿಯುವ ಸಂತಸ ದೊರೆಯುತ್ತಿತ್ತು. ಅವನ ಕೀರ್ತನೆಗಳಿಗೆ ಧನ್ಯವಾದಗಳು. ಮುಂಬಯಿ ಮತ್ತು ಸುತ್ತಮುತ್ತಲಿನ ಜನರ ಗುಂಪುಗಳು ಮಹಾರಾಜರ ದರ್ಶನಕ್ಕಾಗಿ ಉತ್ಸುಕರಾಗಿ ಬರತೊಡಗಿದರು.

 

ಮೇಲೆ ಹೇಳಿದ ಎರಡನೆಯ ವ್ಯಕ್ತಿಯು ಈ ಗ್ರಂಥ ಕರ್ತೃವೇ. ಮಹಾರಾಜರ ಪದತಲದಲ್ಲಿ ಅನೇಕಬಾರಿ ದೀರ್ಫಾವಧಿ ನೆಲಸಿ ಸಾಮಾಜಿಕ ಚಟುವಟಿಕೆಗಳಿಂದ ವಿಮುಖನಾಗಿ ತಾನೂ ಒಬ್ಬ 'ಬಾಬಾ' ಆಗಿರುವನೆಂದು ಪಾರಸಿ ಮತ್ತಿತರೆ ವಾರ್ತಾಪತ್ರಿಕೆಗಳಲ್ಲಿ ಪ್ರಚಾರ ಸಿಕ್ಕಿದ್ದರಿಂದ ಸಾಕಷ್ಟು ಜನರು ಈ ಪರಿವರ್ತನೆಗೆ ನಿಮಿತ್ತ ಮಾತ್ರರಾದವರ ದರ್ಶನಕ್ಕೆಂದು ಬರಲಾರಂಭಿಸಿದರು. ಸುಮಾರು ಕ್ರಿ. . 1910ರಿಂದ ಮಹಾರಾಜರ ದರ್ಶನಾಕಾಂಕ್ಷಿಯಾಗಿ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದ್ದಿತು.

 

ನಾನಾಸಾಹೇಬ ಚಂದೋರಕರನು ಇಲ್ಲಿಗೆ ಬಂದಾಗ, ದರ್ಶನಕ್ಕೆಂದು ಬಂದ ಜನರಿಗೆ ಉಳಿದುಕೊಳ್ಳಲು ಒಂದು ವಾಡೆಯೂ ಇರಲಿಲ್ಲ. ಆದರೆ ಮಹಾರಾಜರು ಈ ಕೊರತೆಯನ್ನು ಕ್ಷಿಪ್ರವಾಗಿಯೇ ನಿವಾರಿಸಿದರು. ರಾವ್‌ ಬಹದ್ದೂರ್‌ ಹರಿವಿನಾಯಕ ಸಾಠೆಯು ಜಿಲ್ಲೆಯ ಡೆಪ್ಯುಟಿ ಕಲೆಕ್ಟರ್‌ ಆಗಿದ್ದನು. ಅವನ ಮೊದಲನೆಯ ಹೆಂಡತಿಯು ಬಹಳ ಹಿಂದೆಯೇ ಕಾಲವಾಗಿದ್ದಳು. ಅವನಿಗೆ ಮರು ಮದುವೆಯಾಗುವ ಇಚ್ಚೆಯಿರಲಿಲ್ಲ. ಅವನಿಗೆ ಪುತ್ರ ಸಂತಾನವಿಲ್ಲದ ಕಾರಣ ಅವನ ಸ್ನೇಹಿತರು ಅವನನ್ನು ಮರುಮದುವೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದರು. ಅನ೦ತರ, ಅವನು ಮಹಾರಾಜರ ದರ್ಶನಪಡೆದು ಅವರ ಇಚ್ಚೆಯಂತೆ ನಡೆಯುವುದೆಂದು ನಿರ್ಧರಿಸಿದನು. ಹಾಗೆಯೇ ಅವನು ದರ್ಶನಕ್ಕೆ ಬ೦ದನು. ಮಹಾರಾಜರು ಅವನಿಗೆ ಮರುಮದುವೆಮಾಡಿಕೊಳ್ಳಲು ಹೇಳಿದರು ಮತ್ತು ಪುತ್ರವರವನ್ನೂ ಅನುಗ್ರಹಿಸಿದರು. ರಾವ್‌ ಬಹಾದೂರನು ಒಬ್ಬ ವಧುವನ್ನು ಆರಿಸಿ ಆಕೆಯ ತಂದೆ ಗಣೇಶ ದಾಮೋದರ ಕೇಳ್ಳರನಿಗೆ ಮಹಾರಾಜರಲ್ಲಿಗೆ ಕರೆತರಲು ತಿಳಿಸಿದನು. ಹಾಗೆಯೇ ಆ ವಧುವು ಅಲ್ಲಿಗೆ ಬಂದಾಗ ಮಹಾರಾಜರು ಅವಳ ಸೀರೆಯ ಸೆರಗಿನಲ್ಲಿ ಒಂದು ಕಲ್ಲಂಗಡಿ ಹಣ್ಣಿನಿಂದ ಉಡಿತುಂಬಿ ಅವಳ ಹಣೆಗೆ ಕುಂಕುಮ ಹಚ್ಚಿದರು. ಅನ೦ತರ ಸರಿಯಾದ ಸಮಯದಲ್ಲಿ ಮದುವೆ ನಡೆಯಿತು. ನಂತರ ಮಹಾರಾಜರ ಆದೇಶದಂತೆ ಬೇವಿನ ಮರದ ಸುತ್ತಲೂ ಇದ್ದ ಜಾಗವನ್ನು ಖರೀದಿಸಿ, ಈಗಾಗಲೇ ತಿಳಿಸಿದಂತೆಯೇ ಅಲ್ಲೊಂದು ವಾಡೆಯನ್ನು ಕಟ್ಟಿದರು.

 

ಅದರಿಂದಾಗಿ ದರ್ಶನಕ್ಕೆ ಬರುವ ಜನರಿಗೆ ವಸತಿ ಸೌಕರ್ಯ ದೊರಕಿತು. ಮೂರು ವರ್ಷಗಳ ನಂತರ ಮಹಾರಾಜರು ಮತ್ತೊಂದು ವಾಡೆಯನ್ನು ಈ ಕೆಳಗೆ ರುಜುಮಾಡಿರುವವರಿಂದ ಕಟ್ಟಿಸಿದರು. ತದನಂತರ ಮತ್ತೊಂದು ವಾಡೆಯನ್ನು ನಾಗಪುರದ ಲಕ್ಷಾಧಿಕಾರಿಯಾದ ಗೋಪಾಲರಾವ್‌ ಅಲಿಯಾಸ್‌ ಬಾಪುಸಾಹೇಬ ಬೂಟಿಯಿಂದ ಕಟ್ಟಸಿದರು. ಈ ವಾಡೆ ವಿಶಾಲವಾಗಿದ್ದು ಕಲ್ಲುಗಳಿ೦ದ ನಿರ್ಮಿಸಲ್ಪಟ್ಟು ಬಹಳ ದೃಢವಾಗಿದ್ದು ಅದರ ನಿರ್ಮಾಣಕ್ಕೆ ಬಹಳ ಹಣವು ವ್ಯಯವಾಗಿತ್ತು. ಅದಕ್ಕೆ ಹೋಲಿಸಬಹುದಾದ ಇನ್ನೊಂದು ಕಟ್ಟಡ ಶಿರಡಿ ಅಥವಾ ಅದರ ಸುತ್ತಮುತ್ತ ಅಥವಾ ಯಾವುದೇ ತಾಲೂಕಿನಲ್ಲಿ ಎಲ್ಲೂ ಇರುವುದಿಲ್ಲ. ಮಹಾರಾಜರ ಸಮಾಧಿಯು ಈ ವಾಡೆಯಲ್ಲೇ ಇದೆ.

 

ಶೀಘ್ರದಲ್ಲಿ, ಶಿರಡಿಯು 'ಸಂಸ್ಥಾನಎನಿಸಿಕೊಂಡಿತು. ಮಹಾರಾಜರಿಗೆ ಆರತಿಗಳನ್ನು ಮಾಡಲಾರಂಭಿಸಿದರು. ಆರತಿಯ ಸಮಯದಲ್ಲಿ ಚಾಮರ, ಛತ್ರಿ ಮತ್ತಿತರೆ ರಾಜಲಾಂಛನಗಳು ಉಪಯೋಗಿಸಲ್ಪಡುತ್ತಿದ್ದವು. ಮಹಾರಾಜರು ಚಾವಡಿಗೆ ಹೋಗುವಾಗ ಅನೇಕ ಮಂಗಳವಾದ್ಯಗಳು, ಕುದುರೆ, ಪಲ್ಲಕ್ಕಿ, ರಾಜದಂಡಭಜನೆ ಹಾಡುವವರುಬಾವುಟಗಳು ಮತ್ತು ಇತರೆ ಎಲ್ಲ ಸಾಮಗ್ರಿಗಳು ಅವರ ಜೊತೆಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದವು. ಚಾವಡಿಯನ್ನು ಕನ್ನಡಿಗಳು, ದೀಪಗಳು, ಗೊಂಚಲು ತೂಗುದೀಪಗಳು ಮತ್ತು ಚಿತ್ರಪಟಗಳಿಂದ ಅಲಂಕರಿಸಲಾಗುತ್ತಿತ್ತು. ಮಸೀದಿಯ ಮತ್ತು ಚಾವಡಿಯ ನೆಲಕ್ಕೆ ಟೈಲ್ಸ್‌ನಿಂದ ಹೊದಿಸಲಾಗಿತ್ತು. ಇದರ ಕೀರ್ತಿಯೆಲ್ಲವೂ ಸುಂದರಾಬಾಯಿ ಕ್ಷೀರಸಾಗರ ಅಲಿಯಾಸ್‌ ರಾಧಾಕೃಷ್ಣ ಆಯಿಗೆ ಸಲ್ಲುತ್ತದೆ. ಈಕೆ ಪ್ರೇಮಭಕ್ತಿಯ ಗುರು ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಅವಳ ಹತ್ತಿರ ಧನಸಂಪತ್ತು ಇರಲಿಲ್ಲ. ಆದರೆ ತನ್ನ ತನುಮನಗಳನ್ನು ಮಹಾರಾಜರ ಸೇವೆಗೆ ಸಮರ್ಪಿಸಿದ್ದು ಮಹಾರಾಜರ ಬೇರೆ ಬೇರೆ ಭಕ್ತರಿಂದ ಬೇರೆ ಬೇರೆ ವಸ್ತುಳನ್ನು ಸಂಗ್ರಹಿಸಿ ಉಪಯೋಗಿಸಿ ಶಿರಡಿ ಸಂಸ್ಥಾನವನ್ನು ಕಟ್ಟಿದ್ದಳು. ದುರದೃಷ್ಟವಶಾತ್‌ ಅವಳ ಜೀವನವು ಕೇವಲ 35 ವರ್ಷದವಳಾಗಿದ್ದಾಗಲೇ ಅಂತ್ಯಗೊಂಡಿತು.

 

ಅವಳು ಇಲ್ಲಿ ಕೇವಲ 8 ಅಥವಾ 9 ವರ್ಷಗಳು ಮಾತ್ರ ಇದ್ದಳು. ಆದರೆ ಇಷ್ಟು ಅಲ್ಪ ಸಮಯದಲ್ಲಿಯೇ ಇಪ್ಪತ್ತೈದು ವರ್ಷಕಾಲ ಹಿಡಿಯುವಷ್ಟು ಕೆಲಸಗಳನ್ನು ಸಾಧಿಸಿದ್ದಳು. ಈ ಮಹಿಳೆಯಿಂದಾಗಿಯೇ ಮಹಾರಾಜರ ರಾತ್ರಿ ಆರತಿ ಮತ್ತು ಬೆಳಗಿನ ಜಾವ ಕಾಕಡಾರತಿಗಳು ಚಾವಡಿಯಲ್ಲಿ ಪ್ರಾರಂಭವಾದವು. ಮೊದಮೊದಲು ಮಹಾರಾಜರು ತಮ್ಮ ಪೂಜೆಗೂ ಅನುಮತಿಸಿರಲಿಲ್ಲ. ಮೊದಲ ಷೂಜೆಯು ಮಾಳಸಾಪತಿಯಿಂದ ಮಾಡಲ್ಪಡುತ್ತಿತ್ತು. ಸ್ವಲ್ಪ ಕಾಲಾನಂತರ ನಿಮಗಾಂವನ ಸೀತಾರಾಮ ಡೆಂಗ್ಲೆಯು  ಪೂಜೆ ಮಾಡಲು ಬಂದಾಗ ಮಹಾರಾಜರು ಅವನ ಮೇಲೆ ಕೋಪಿಸಿಕೊಂಡರು. ಕೊನೆಗೆ ಪೂಜೆ ಮಾಡಲು ಅನುವುಮಾಡಿಕೊಟ್ಟರು.

 

ಕೆಲಕಾಲಾನಂತರ ನಾನಾ ಸಾಹೇಬ ಚಂದೋರಕರನ ಚಿಕ್ಕ ಮಗ ಮಹಾದೇವ ಅಲಿಯಾಸ್‌ ಬಾಪುವಿಗೆ ಸಮರ್ಪಕವಾಗಿ ಪೂಜೆಮಾಡಲು ಅವಕಾಶ ದೊರೆಯಿತು. ಮತ್ತು ಅಲ್ಲಿಂದಾಚೆಗೆ ಎಲ್ಲರಿಗೂ ಪೂಜೆ ಮಾಡಲು ಅನುಮತಿ ದೊರೆಯಿತು. ಆದರೆ ಆ ಸಮಯದಲ್ಲಿ ಮಹಾರಾಜರು ಆರತಿಗಳನ್ನು ಮಾಡಲು ಅವಕಾಶ ನೀಡಿರಲಿಲ್ಲ. ಸ್ವಲ್ಪ ಸಮಯದ ನಂತರ ಮೊದಲ ಬಾರಿಗೆ ಆರತಿ ಮಾಡುವ ಭಾಗ್ಯವು ತಾತ್ಯಾಸಾಹೇಬ ನೂಲಕರಣಾದಾಯಿತು. ಪಂಡರಾಪುರದಲ್ಲಿ ಪೌರನ್ಯಾಯಾಧೀಶನಾಗಿದ್ದವನು ಅನಾರೋಗ್ಯಕ್ಕೆ ತುತ್ತಾಗಿ ರಜೆಯ ಮೇಲೆ ಇಲ್ಲಿಗೆ ಬಂದನು. ಅವನ ಇಚ್ಛೆಯು ತನ್ನ ಉದ್ಯೋಗವನ್ನು ತೊರೆದು ಉಳಿದ ಜೀವಿತವನ್ನು ಮಹಾರಾಜರ ಪಾದಸನ್ನಿಧಿಯಲ್ಲಿ ಕಳೆಯಬೇಕೆಂದಿದ್ದು, ಕೊನೆಯಲ್ಲಿ ಅದೇ ಆಯಿತು.

 

ರಾಧಾಕೃಷ್ಣ ಆಯಿಯು ಸಾಧ್ಯವಾದ ಎಲ್ಲ ರೀತಿಗಳಲ್ಲೂ ಸೇವೆ ಮಾಡಿದಳು. ದಿನಕ್ಕೆರಡು ಬಾರಿ ಮಹಾರಾಜರು ನಡೆಯುತ್ತಿದ್ದ ಮಾರ್ಗವನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದಳು. ಕೊನೆಯಲ್ಲಿ ತಾನೇ ಎಲ್ಲ ಕಸವನ್ನೂ ತೆಗೆದುಹಾಕುತ್ತಿದ್ದಳು. ಇದಕ್ಕೆ ಹಿಂದೆ ಈ ಕೆಲಸವು ಬಾಲಾಜಿ ಪಾಟೀಲ ನೆವಾಸ್ಕರ್‌ನಿಂದ ಆರಂಭಗೊಂಡಿತ್ತು. ಆ ಭಕ್ತನು ಪ್ರಾಪಂಚಿಕ ಬಂಧನದಿಂದ ಮುಕ್ತನಾಗಿ ಎಲ್ಲ ಲೌಕಿಕ ಪಾಶಗಳನ್ನೂ ಕಳಚಿ ಇಲ್ಲಿಗೆ ವಾಸಮಾಡಲು ಬಂದಿದ್ದನು. ಅನೇಕರು ಬಂದು ಅವನನ್ನು ಹಿಂತಿರುಗಲು ಪುಸಲಾಯಿಸಿದರೂ ಅವನು ಬಿಡಲಿಲ್ಲ. ಅವನು ಹಾದಿಯನ್ನು ಸ್ವಚ್ಛಗೊಳಿಸಿ ಮಸೀದಿಯನ್ನು ಗೋಮಯದಿಂದ ಸಾರಿಸುತ್ತಿದ್ದನು. ಅವನು ಮಹಾರಾಜರ ದರ್ಶನವನ್ನು ದೂರದಿಂದಲೇ ಪಡೆಯುತ್ತಿದ್ದನು. ಅವನು ಅವರ ಹತ್ತಿರ ಹೋಗುತ್ತಿರಲಿಲ್ಲ. ಅವನು ಕೇವಲ ಮಹಾರಾಜರ ಪಾದ ತೊಳೆದ ನೀರನ್ನು ಅಥವಾ ಮಹಾರಾಜರು ಸ್ವಲ್ಪ ಕುಡಿದು ಇಟ್ಟ ನೀರನ್ನು ಮಾತ್ರ ಸೇವಿಸುತ್ತಿದ್ದನು. ಅದೇ ರೀತಿ ಅವನು ತನ್ನ ಜಮೀನಿನ ಉತ್ಪತ್ತಿಯನ್ನು ಮಹಾರಾಜರ ಸಮ್ಮುಖದಲ್ಲಿರಿಸಿ ಮಹಾರಾಜರು ದಯಪಾಲಿಸಿದುದನ್ನು ಮಾತ್ರ ತೆಗೆದುಕೊಳ್ಳುತ್ತಿದ್ದನು. ಅಲ್ಲಿ ಎರಡು ವರ್ಷಗಳ ಕಾಲ ವಾಸಮಾಡಿದ ಮೇಲೆ ಮಹಾರಾಜರು ಬಾಲಾಜಿ ಪಾಟೀಲನಿಗೆ ಮನೆಗೆ ಹಿಂತಿರುಗಲು ರಜೆ ನೀಡಿದರು. ಅಂತೆಯೇ ಅವನು ಹೊರಟನು. ಅದೇನೇ ಆಗಲಿ, ಅವನು ಆಗಾಗ ದರ್ಶನಕ್ಕೆಂದು ಬಂದು ತನ್ನ ಉತ್ಪತ್ತಿಯನ್ನು ಮಹಾರಾಜರಿಗೆ ಅರ್ಪಿಸುತ್ತಿದ್ದನು. ಕೆಲವು ವರ್ಷಗಳ ನ೦ತರ ಅವನು ಮರಣಹೊಂದಿದನು.

 

ರಾಧಾಕೃಷ್ಣ ಆಯಿಯು ಮಹಾರಾಜರಿಗೆ ತಾನೇ ಎಲ್ಲ ರೀತಿಯ ಸೇವೆಗಳನ್ನೂ ಮಾಡುತ್ತಿದ್ದುದೇ ಅಲ್ಲದೆ, ಅನೇಕ ಭಕ್ತಿಯಿಂದ ಮಹಾರಾಜರ ಎಲ್ಲ ರೀತಿಯ ಸೇವೆಗಳನ್ನೂ ಮಾಡಿಸುತ್ತಿದ್ದಳು. ಅವಳು ವಿವಿಧ ರೀತಿಯ ಚಿಲ್ಲರೆ ಕೆಲಸಗಳನ್ನು ಮಾಡುತ್ತಿದ್ದುದಲ್ಲದೆ, ಇತರರನ್ನೂ ಅದರಲ್ಲಿ ಮಗ್ನರನ್ನಾಗಿಸುತ್ತಿದ್ದಳು. ಮತ್ತು ಭಕ್ತರು ಕೆಲಸಗಳನ್ನು ಪ್ರೀತಿ ಮತ್ತು ಉತ್ಸಾಹದಿಂದ ಮಾಡುತ್ತಿದ್ದರು. ಎಲ್ಲ ಸ್ತರಗಳ ಪುರುಷರು ಹಾಗೂ ಸ್ತ್ರೀಯರು ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಮಣ್ಣು ಮತ್ತು ಕಲ್ಲುಗಳನ್ನು ಹೊರುವುದು, ರಸ್ತೆಗಳನ್ನು ಗುಡಿಸುವುದು, ನೀರು ಕಲಸಿ ರಾಡಿ ಮಾಡುವುದು, ಚರಂಡಿಗಳನ್ನು ನೋಡುವುದು, ಅವುಗಳನ್ನು ಮುಚ್ಚುವುದು, ಕಟ್ಟಿಗೆ ಸೀಳುವುದು, ದೀಪಗಳನ್ನು ಮತ್ತು ತೂಗು ದೀಪಗಳನ್ನು ಒರಸುವುದು, ಮಸೀದಿಯನ್ನು ತೊಳೆಯುವುದು, ಬಣ್ಣ ಬಳಿಯುವುದು, ಕಾಗದದ ಹೂಗಳನ್ನು ಮಾಡುವುದು, ಚಾಮರಗಳನ್ನು ಹಿಡಿದುಕೊಳ್ಳುವುದು, ನವಿಲುಗರಿಯಿಂದ ಬೀಸಣಿಗೆ ತಯಾರಿಸುವುದು, ಅಲಂಕೃತವಾದ ಛತ್ರಿಗಳು, ಬಾವುಟಗಳನ್ನು ಹೊಲಿಯುವುದು - ಈ ಕೆಲಸಗಳನ್ನೆಲ್ಲ ಉಚ್ಛಸ್ತರದ ಜನರು ಮತ್ತು ಆದರ್ಶ ಕುಲಸ್ತ್ರೀಯರು ಎಲ್ಲರೂ ಮಾಡಿ ತಮಗೆ ಸೇವೆ ಸಲ್ಲಿಸಲು ದೊರಕಿದ ಅವಕಾಶಕ್ಕಾಗಿ ಅತ್ಯಂತ ಸಂತಸಪಡುತ್ತಿದ್ದರು.


ಮಹಾರಾಜರ ನಿತ್ಯ ವಿಧಿಗಳು ನಿಯಮಿತವಾಗಿ ಸಾಗುತ್ತಿದ್ದವು. ಅವರು ಪ್ರಾತಃಕಾಲ ಬೇಗನೆ ಎದ್ದು ಧುನಿಯ ಬಳಿ ಕುಳಿತಿರುತ್ತಿದ್ದರು. ಸ್ವಲ್ಪ ಕಾಲಾನಂತರ ಶೌಚಾದಿ ಕ್ರಿಯೆಗಳನ್ನು ಮಾಡಿ ಮುಗಿಸುತ್ತಿದ್ದರು. ನಂತರ ಸುಮ್ಮನೆ ಸ್ವಲ್ಪ ಸಮಯ ಕುಳಿತಿರುತ್ತಿದ್ದರು. ಆ ಸಮಯದಲ್ಲಿ ಭಾಗೋಜಿ ಸಿಂಧೆ ಎಂಬವನು ಮಹಾರಾಜರ ತೋಳಿನ ಪಟ್ಟಿಗಳನ್ನು ಮಡಚಿ ಪೂರ್ಣ ದೇಹವನ್ನೂ ಮಾಲೀಶು ಮಾಡುತ್ತಿದ್ದನು. ಅನಂತರ ಅವನು ಚಿಲುಮೆಯನ್ನು ತುಂಬಿ ಅದನ್ನು ಹಚ್ಚಿ ಮಹಾರಾಜರಿಗೆ ಸೇದಲು ಕೊಡುತ್ತಿದ್ದನು. ಮಹಾರಾಜರು ಅದನ್ನು ಸೆದಿದ ನಂತರ ಭಾಗೋಜಿಗೆ ಸೇದಲು ಕೊಡುತ್ತಿದ್ದರು. ಈ ರೀತಿ 5-6 ಸಲ ಆದ ನಂತರ ಭಾಗೋಜಿಯು ಅಲ್ಲಿಂದ ತೆರಳುತ್ತಿದ್ದನು.

 

ಭಾಗೋಜಿಯು ಕುಷ್ಠರೋಗದಿಂದ ನರಳುತ್ತಿದ್ದನಾದರೂ ಮಹಾರಾಜರು ಅವನ ಸೇವೆಯನ್ನು ಎಂದಿಗೂ ನಿರಾಕರಿಸಲಿಲ್ಲ. ಅಥವಾ ತಮ್ಮ ನಿತ್ಯ ಪರಿಪಾಠವನ್ನು ಕಿಂಚಿತ್ತೂ ಬದಲಾಯಿಸಲಿಲ್ಲ. ಭಾಗೋಜಿಯು ತೆರಳಿದನ೦ತರ ಮಹಾರಾಜರು ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತಿರುತ್ತಿದ್ದರು. ಆ ಸಮಯದಲ್ಲಿ ಕೆಲವು ನಿಯಮಿತ ಭಕ್ತರು ಬಂದು ಸೇವೆಸಲ್ಲಿಸುತ್ತಿದ್ದರು. ಮಹಾರಾಜರು ಮುಖತೊಳೆಯುತ್ತಿದ್ದ ರೀತಿಯು ನೋಡಲು ಯೋಗ್ಯವಾಗಿತ್ತು. ಅವರು ತಮಗೆ ಬೇಕಾದಷ್ಟು ನೀರನ್ನು ತಮ್ಮ ತೋಳು, ಪಾದ, ಮುಖ, ಕಿವಿ ಇವುಗಳ ಮೇಲೆ ಸುರಿದು ಎಲ್ಲಾ ಭಾಗಗಳನ್ನೂ ನವಿರಾಗಿ ತೊಳೆಯುತ್ತಿದ್ದರು.

 

ಏಕನಾಥ ಮಹಾರಾಜರು ಈ ರೀತಿ ವಿವರಿಸಿದ್ದಾರೆ, "ದೇಹದಲ್ಲಿರುವ ರೋಮಗಳೆಲ್ಲವನ್ನೂ ಉಜ್ಜುತ್ತಿದ್ದರು. ಆದರೆ ಆ ಉದ್ದೇಶಕ್ಕಾಗಿ ದೇಹವನ್ನು ಮಾಲೀಶು ಮಾಡುತ್ತಿರಲಿಲ್ಲ. ಹಾಗೆ ಅವರು ತಮಗೂ ಯಾವ ಕ್ರಿಮಿ ಕೀಟಗಳಿಗೂ ವ್ಯತ್ಯಾಸ ಎಣಿಸುತ್ತಿರಲಿಲ್ಲ. ಇಲ್ಲದಿದ್ದಲ್ಲಿ ಅವು ಹಾನಿಕಾರಕವಾಗುತ್ತಿದ್ದವು".


ಸ್ನಾನವೂ ಸಹ ಇದೇ ರೀತಿ ಆಗುತ್ತಿತ್ತು. ಮುಖ ತೊಳೆದ ನಂತರ ಅವರು ಹಳ್ಳಿಗೆ ಭಿಕ್ಷೆಗಾಗಿ ಹೋಗುತ್ತಿದ್ದರು. ಅವರು ಐದು ನಿಗದಿತ ಸ್ಥಳಗಳಿಗೆ ಹೋಗುತ್ತಿದ್ದರು ಮತ್ತು ನಿಯಮಿತ ಜಾಗದಲ್ಲೇ ನಿಲ್ಲುತ್ತಿದ್ದರು. ಅವರು ಭಾಕರಿ (ರೊಟ್ಟಿ) ಅಥವಾ ಏನಾದರೂ ಒಣ ಅಡುಗೆಯನ್ನು ಪಡೆಯುತ್ತಿದ್ದರು ಮತ್ತು ಮಸೀದಿಗೆ ಹಿಂತಿರುಗುತ್ತಿದ್ದಂತೆಯೇ ಸ್ಪಲ್ಪ ಮಾತ್ರ ತಿನ್ನುತ್ತಿದ್ದರು. ನಂತರ ಒಂದು ಜಾಗದಲ್ಲಿ ಸ್ಟಲ್ಪ ಹೊತ್ತು ಇರುತ್ತಿದ್ದರು. ಆ ಸಮಯದಲ್ಲೇ ಭಕ್ತರ ದೊಡ್ಡ ಗುಂಪು ಸೇರುತ್ತಿತ್ತು. ಆಗ ಮಹಾರಾಜರು ಕಥೆಗಳ ರೂಪದಲ್ಲಿ ಜ್ಞಾನವನ್ನು ಬೋಧಿಸುತ್ತಿದ್ದರು. ಕೆಲವು ಸಲ ಹಾಗೆ ಕುಳಿತಿದ್ದಾಗ ಮಹಾರಾಜರು ಬಾಳೆ ಹಣ್ಣು, ಸೀಬೆ ಹಣ್ಣು, ಮತ್ತು ಮಾವಿನ ಹಣ್ಣುಗಳನ್ನು ಖರೀದಿಸಿ, ಅಲ್ಲಿದ್ದ ಗುಂಪಿಗೆ ಹಂಚುತ್ತಿದ್ದರು. ತಮ್ಮ ಸ್ವತಃ ಕೈಗಳಿಂದಲೇ ತಿನ್ನಿಸುತ್ತಲೂ ಇದ್ದರು.

 

"ತಮ್ಮ ಸ್ವತಃ ಕೈಗಳಿಂದ ತಿನ್ನಿಸುತ್ತಿದ್ದರು" ಎಂದು ಹೇಳಿದಾಗ, ಮಹಾರಾಜರು ಬಾಳೆ ಹಣ್ಣಿನ ಸಿಪ್ಪೆ ತೆಗೆಯುತ್ತಿದ್ದರು, ಸೀಬೆ ಹಣ್ಣುಗಳನ್ನು ತಾವೇ ಕತ್ತರಿಸಿ ಸಣ್ಣ ಹೋಳಾಗಿ ಮಾಡುತ್ತಿದ್ದರು, ಮಾವಿನ ಹಣ್ಣುಗಳನ್ನು ಮೆತ್ತಗೆ ಮಾಡಿ ಚೀಪಲು ಕೊಡುತ್ತಿದ್ದರು ಎಂದು ಅರ್ಥ.


ತದನಂತರ ಅವರು ಲೇಂಡಿಗೆ ಹೋಗುತ್ತಿದ್ದರು ಮತ್ತು ಮಹಾರಾಜರು ಅಲ್ಲಿಯೇ ಸುಮಾರು ಒಂದು ಗಂಟೆ ಕಾಲ ಇರುತ್ತಿದ್ದರು. ಲೇಂಡಿಯಿಂದ ಹಿಂತಿರುಗಿದ ನಂತರ ಮಧ್ಯಾಹ್ನ 2 ಘಂಟೆಯವರೆಗೆ ಅವರು ಮಸೀದಿಯಲ್ಲೇ ಉಳಿದಿರುತ್ತಿದ್ದರು. ಆ ಸಮಯದಲ್ಲಿ ಭಕ್ತರು ಮಹಾರಾಜರಿಗೆ ಪೂಜೆ, ಆರತಿಗಳನ್ನು ಮಾಡುತ್ತಿದ್ದರು. ಅನಂತರ ಮಹಾರಾಜರ ಭೋಜನಾನ೦ತರ ಪುನಃ ಲೇಂಡಿಗೆ ಹೋಗುತ್ತಿದ್ದರುಅಲ್ಲಿಂದ ಸುಮಾರು ಮುಕ್ಕಾಲು ಗಂಟೆಯ ನಂತರ ಹಿಂತಿರುಗಿ ಬಂದು ಸ೦ಜೆಯ ತನಕ ಮಸೀದಿಯಲ್ಲೇ ಉಳಿದಿರುತ್ತಿದ್ದರು. ಸಾಯಂಕಾಲ ಸ್ವಲ್ಪ ಹೊತ್ತು ಹೊರಬಂದು ಕೂಡಲೇ ಹಿಂತಿರುಗಿ ಮಸೀದಿಯಲ್ಲಿ ಉಳಿಯುತ್ತಿದ್ದರು. ಸಾಮಾನ್ಯವಾಗಿ ದಿನದಲ್ಲಿ ಮೂರು ಬಾರಿ, ಒಮ್ಮೆ ಬೆಳಿಗ್ಗೆ ತಿ೦ಡಿಯಾದ ನಂತರ, ಎರಡನೆಯದು ಲೇಂಡಿಯಿಂದ ಹಿಂತಿರುಗಿದಮೇಲೆ ಮತ್ತು ಮೂರನೆಯದು ಸಂಜೆ ಸುಮಾರು 5 ಗಂಟೆ ವೇಳೆಗೆ -  ಮೂರು ಸಮಯಗಳಲ್ಲೂ ಮಹಾರಾಜರು ಕಥೆಗಳ ರೂಪದಲ್ಲಿ ಜ್ಞಾನೋಪದೇಶ ನೀಡುತ್ತಿದ್ದರು. ಮಹಾರಾಜರ ವಚನಗಳು ಅಲ್ಲಿ ನೆರೆದಿದ್ದ ಬೇರೆ ಬೇರೆ ಭಕ್ತರ ಬೇರೆ ಬೇರೆ ತರಹದ ತೊಂದರೆಗಳನ್ನು ಮತ್ತು ಸಂದೇಹಗಳನ್ನು ನಿವಾರಿಸುತ್ತಿದ್ದವು. ಸಮಸ್ಯೆಗಳಿಗೆಲ್ಲ ಪರಿಹಾರಗಳು ದೊರೆಯುತ್ತಿದ್ದವು.

 

ಮಹಾರಾಜರು ಎಂದಿಗೂ ಗಹನವಾದ ವೇದಾಂತಗಳ ವಿಷಯಗಳನ್ನು ಮನಬಿಚ್ಚಿ ಮಾತನಾಡುತ್ತಿರಲಿಲ್ಲ ಅಥವಾ ಅವರು ಉಪನಿಷತ್ತುಗಳ ಬಗ್ಗೆ ಉಪನ್ಯಾಸಗಳನ್ನೂ ನೀಡುತ್ತಿರಲಿಲ್ಲ. ಅವರ ಬೋಧನೆಗಳೆಲ್ಲ ಒಳ್ಳೆಯ ನಡತೆಯ ಬಗ್ಗೆಯೇ ಪ್ರಮುಖವಾಗಿ ಸಂಬಂಧಪಟ್ಟುದಾಗಿದ್ದವು.

 

ಶಿಷ್ಯನ ಮನಸ್ಸನ್ನು ಶುದ್ಧಗೊಳಿಸಿ, ಜ್ಞಾನದ ಬೀಜವನ್ನು ಅದರಲ್ಲಿ ಬಿತ್ತುವುದೇ ಸದ್ಗುರುವಿನ ಶಾಸ್ತ್ರೀಯ ರೀತಿ ಹಾಗೂ ಕ್ರಮ. ಮತ್ತು ಮಹಾರಾಜರು ಅದನ್ನು ಅನುಸರಿಸಿದರು. ಆದ್ದರಿಂದ ಅವರ ಬೋಧನೆಗಳು ನೀತಿಯುತವಾಗಿ ಧರ್ಮಸಮ್ಮತವಾಗಿದ್ದವು. ಆದರೆ ಮನಃಬಿಚ್ಚಿ ಮಾಡುವ ವಾಕ್‌ ಉಪದೇಶಗಳಿಗಿಂತಲೂ ಮಹಾರಾಜರಿಂದ ಬಂದ ಮಾತುಗಳು ಅಮೂಲ್ಯವಾಗಿದ್ದವು. ಮತ್ತು ಅನೇಕ ಉಪಯುಕ್ತ ಉದಾಹರಣೆಗಳು ಅವುಗಳಲ್ಲಿದ್ದುದರಿಂದ ಭಕ್ತರು ಮಹಾರಾಜರಲ್ಲಿ ಪೂರ್ಣ ಶ್ರದ್ಧೆಯಿಟ್ಟು ಅತ್ಯುನ್ನತ ಲಾಭವನ್ನು ಪಡೆಯುತ್ತಿದ್ದರು.

 

ಭಕ್ತರಲ್ಲಿ ಅನೇಕರು, ಇಷ್ಟಾರ್ಥಗಳನ್ನೂ, ಆಶೆಗಳನ್ನೂ, ಪೂರೈಸಿಕೊಳ್ಳಲು ಮಹಾರಾಜರ ಬಳಿಬರುತ್ತಿದ್ದರು. ಆದರೆ ಮಹಾರಾಜರು ಅವರ ಆಶೆಗಳನ್ನು ಪೂರೈಸುತ್ತ, ಅವರ ಮನಸ್ಸುಗಳನ್ನು ಅವರಿಗೆ ತಿಳಿಯದಂತೆಯೇ ಅವರ ಮಹೋನ್ನತಿಯ ಡೆಗೆ ತಿರುಗಿಸುತ್ತಿದ್ದರು. ಮಹಾರಾಜರು ಜನರ ಉದ್ಧಾರಕ್ಕಾಗಿ ಅವತಾರವೆತ್ತಿದ್ದರು. ಮತ್ತು ಅವರು ಎಲ್ಲರ ಯೋಗಕ್ಷೇಮವನ್ನೂ ನೋಡಿಕೊಳ್ಳುತಿದ್ದರು. ಇದರ ಬಗ್ಗೆ ಎಳ್ಳಷ್ಟೂ ಸಂದೇಹ ಬೇಡ. ಅವರ ಲೀಲೆಗಳು ಮತ್ತು ಅವರ ಗುಣಗಳನ್ನು ಸರಿಯಾಗಿ ವಿವರಿಸಲು ಸಾಧ್ಯವಾಗುವುದಿಲ್ಲ.

 

"ಭಗವಂತನು ಅನ೦ತ ಸದ್ಗುಣಭರಿತನು. ಮಗುವಿನ ರೀತಿಯಲ್ಲಿ ವರ್ತಿಸುವವರು ಭಗವಂತನಿಗೆ ಸಮಾನ. ಯಾವರೀತಿ ಭೂಮಿಯ ಮೇಲಿನ ಕಣಗಳನ್ನು ಎಣಿಸಲು ಅವನು ಎಷ್ಟೇ ಸಮಯವನ್ನು ವ್ಯಯಮಾಡಿದರೂ ಸಾಧ್ಯವಿಲ್ಲವೋ, ಅದೇ ರೀತಿ ಅಂತಹ (ಭಗವಂತನಂತಹ)ವನ ಶಕ್ತಿಯನ್ನು ಯಥೋಚಿತವಾಗಿ ವಿವರಿಸಲು ಸಾಧ್ಯವೇ ಇಲ್ಲ"!

 

ಆದರೂ ಮಹಾರಾಜರ ಲೀಲೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಂಗ್ರಹಿಸಿದ್ದು ಎಲ್ಲರ ಉಪಯೋಗಕ್ಕೆ ಬರುತ್ತದೆ. ಇದನ್ನು ನಾನು ನಿಸ್ಸಂದೇಹವಾಗಿ ನಂಬುತ್ತೇನೆ. ಅಂತಹ ಸಂಕಲನವನ್ನು ಗೌರವಾನ್ವಿತ ಮಿತ್ರ ಗೋವಿಂದ ರಘುನಾಥ ಅಲಿಯಾಸ್‌ ಅಣ್ಣಾಹೇಬ ದಾಭೋಲ್ಕರ್‌ನು ಮಾಡಿರುತ್ತಾನೆ. ಅದರ ಬಹುಭಾಗವೂ ಅವನಿಂದ ಓವಿ ಛಂದಸ್ಸಿನಲ್ಲಿ ಮಾಡಲ್ಪಟ್ಟಿದೆ. ಕೃತಿಯು ಓವಿ ಛಂದಸ್ಸಿನಲ್ಲಿ ಪ್ರಾರಂಭಗೊಂಡಿದ್ದು ಮಹಾರಾಜರು ದೇಹದಲ್ಲಿ ಇದ್ದಾಗಲೇ ಅವರ ನಿರ್ದಿಷ್ಟ ಅನುಮತಿಯಿಂದಲೇ ನಡೆದಿತ್ತು. ಮತ್ತು ಇಂದಿನವರೆಗೆ ಮೂವತ್ತೈದು ಅಧ್ಯಾಯಗಳು ಸಿದ್ಧವಾಗಿರುತ್ತವೆ.

 

ಈ ಗ್ರಂಥವು ಪ್ರೇಮಭರಿತವಾಗಿಯೂ ಹೃತ್ಪೂರ್ವಕವಾಗಿಯೂ ರೂಪುಗೊಂಡಿದ್ದು, ಮಹಾರಾಜರ ಭಕ್ತರಿಗೆ ಮತ್ತುಇತರ ಓದುಗರಿಗೂ ಅತ್ಯಂತ ಉಪಯುಕ್ತವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

 

ಇದರಲ್ಲಿನ ಓವಿಗಳು ಏಕನಾಥ ಮಹಾರಾಜರ ಓವಿಗಳ ರೀತಿಯಲ್ಲಿ ರೂಪುಗೊಂಡಿರುತ್ತವೆ. ಈ ಕೃತಿಯನ್ನು ಓದುತ್ತಿರುವಾಗ ಅನೇಕ ಬಾರಿ ಏಕನಾಥ ಮಹಾರಾಜರು ನೆನಪಿಗೆ ಬರುತ್ತಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದಿದ್ದರೆ ಈ ಕೃತಿಯು ಶ್ರೀಸಾಯಿನಾಥ ಮಹಾರಾಜರ ಪ್ರಸಾದದ ಫಲವಾಗಿದೆ. ಇದು ಹೆಜ್ಜೆಹೆಜ್ಜೆಗೂ ಅನುಭವಕ್ಕೆ ಬರುತ್ತದೆ.

 

ಅಂತಿಮವಾಗಿ, ನಾನು ಈ ಮುನ್ನುಡಿಯನ್ನು ಮಹಾರಾಜರಿಗೆ ಪ್ರಾರ್ಥನೆ ಸಲ್ಲಿಸುತ್ತ ಮುಗಿಸುತ್ತೇನೆ. "ಅವರ ಭಕ್ತರೂ ಮತ್ತು ಇತರ ಓದುಗರೂ ಆನಂದದಿಂದ ತುಂಬಿ, ಈ ಕೃತಿಯಲ್ಲಿನ ಜ್ಞಾನವನ್ನು ಪಡೆಯುವಂತಾಗಲಿ ಮತ್ತು ಮಹಾರಾಜರಲ್ಲಿನ ಅವರ ಭಕ್ತಿಯು ಇನ್ನೂ ಹೆಚ್ಚಾಗಲಿ”. 

 

ಬಾಬಾರವರ ಮಕ್ಕಳಲ್ಲಿ ಒಬ್ಬನಾದ

ಹರಿಸೀತಾರಾಮ ದೀಕ್ಷಿತ್‌.

No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....